ನವದೆಹಲಿ: ವಿದ್ಯುತ್ ಕ್ಷೇತ್ರಕ್ಕೆ ಆರ್ಥಿಕ ಪರಿಹಾರ ಪ್ಯಾಕೇಜ್ ಒದಗಿಸಲು ಕೇಂದ್ರ ಸರ್ಕಾರ ಶುಕ್ರವಾರ ಅನುಮೋದನೆ ನೀಡಿದೆ. ಮುಂದಿನ ಮೂರು ತಿಂಗಳು ವಿದ್ಯುತ್ ಗ್ರಾಹಕರಿಗೆ ವಿದ್ಯುತ್ ಬಿಲ್ ಪಾವತಿಸಲು ಸಾಧ್ಯವಾಗುವುದಿಲ್ಲ ಎಂದು ಸರ್ಕಾರ ಮನಗಂಡಿದ್ದು, ಇದರಿಂದ ವಿದ್ಯುತ್ ಸರಬರಾಜು ಕಂಪನಿಗಳಿಗೆ ಹಣದ ಕೊರತೆ ಉಂಟಾಗಲಿದೆ.
ಸರ್ಕಾರ ಹೇಳಿಕೆಯನ್ನು ಹೊರಡಿಸಿದ್ದು, ”ವಿದ್ಯುತ್ ಉತ್ಪಾದಿಸುವ ಕಂಪನಿಗಳಿಗೆ ಮತ್ತು ಪ್ರಸರಣ ಪರವಾನಗಿದಾರರಿಗೆ ಡಿಸ್ಕಾಂಗಳು ಮಾಡುವ ಪಾವತಿಯಿಂದ ಮೂರು ತಿಂಗಳು ವಿನಾಯಿತಿ ನೀಡುವಂತೆ ಮತ್ತು ತಡವಾಗಿ ಪಾವತಿ ಮಾಡಿದ್ದಕ್ಕೆ ಹೆಚ್ಚುವರಿ ಶುಲ್ಕದ ದಂಡವನ್ನು ವಿಧಿಸದಂತೆ ಕೇಂದ್ರ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ನಿರ್ದೇಶನಗಳನ್ನು ನೀಡಲಾಗಿದೆ. ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗಗಳಿಗೆ ಇದೇ ರೀತಿಯ ನಿರ್ದೇಶನಗಳನ್ನು ನೀಡುವಂತೆ ರಾಜ್ಯ ಸರ್ಕಾರಗಳನ್ನು ಕೋರಲಾಗುತ್ತಿದೆ” ಎಂದಿದೆ.
ಸಿಪಿಎಸ್ಯು ಉತ್ಪಾದನೆ ಮತ್ತು ಪ್ರಸರಣ ಕಂಪನಿಗಳು ಉತ್ಪಾದನೆ / ಪ್ರಸರಣ ಕಂಪನಿಗಳಿಗೆ ಮತ್ತು ಹೆಚ್ಚಿನ ಬಾಕಿ ಇರುವ ಡಿಸ್ಕಾಮ್ಗಳಿಗೂ ಸಹ ವಿದ್ಯುತ್ ಸರಬರಾಜು ಮತ್ತು ಪ್ರಸರಣವನ್ನು ಮುಂದುವರಿಸಲಿದೆ ಎಂದು ಇಂಧನ ಮತ್ತು ವಿದ್ಯುತ್ ಸರಬರಾಜು ಸಚಿವಾಲಯ ತಿಳಿಸಿದೆ. ಪ್ರಸ್ತುತ ತುರ್ತು ಸಮಯದಲ್ಲಿ ವಿದ್ಯುತ್ ಸರಬರಾಜಿನಲ್ಲಿ ಯಾವುದೇ ಕಡಿತವಿಲ್ಲ ಎಂದು ಸ್ಪಷ್ಟಪಡಿಸಿದೆ.
ಲಾಕ್ ಡೌನ್ ಸಮಯದಲ್ಲಿ ಯಾರೂ ವಿದ್ಯುತ್ ಸರಬರಾಜಿನ ಕೊರತೆಯನ್ನು ಎದುರಿಸದಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರವು ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗಗಳಿಗೆ ಇದೇ ರೀತಿಯ ನಿರ್ದೇಶನಗಳನ್ನು ನೀಡುವಂತೆ ಕೇಂದ್ರ ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದೆ.
ಪಾವತಿ ಭದ್ರತಾ ವ್ಯವಸ್ಥೆಯನ್ನು ವಿತರಣಾ ಕಂಪನಿಗಳು 2020 ರ ಜೂನ್ 30 ರವರೆಗೆ ನಿರ್ವಹಿಸಲಿವೆ ಎಂದು ಸರ್ಕಾರ ತಿಳಿಸಿದೆ. “30 ಜೂನ್ 2020 ರವರೆಗೆ ವಿದ್ಯುತ್ ರವಾನೆಗಾಗಿ ಉತ್ಪಾದನಾ ಕಂಪನಿಗಳೊಂದಿಗೆ ವಿತರಣಾ ಕಂಪೆನಿಗಳು ನಿರ್ವಹಿಸಬೇಕಾದ ಪಾವತಿ ಭದ್ರತಾ ಕಾರ್ಯವಿಧಾನವನ್ನು 50 ಪ್ರತಿಶತದಷ್ಟು ಕಡಿಮೆಗೊಳಿಸಲಾಗುವುದು” ಎಂದು ಹೇಳಿಕೆ ತಿಳಿಸಿದೆ.
2019 ರಲ್ಲಿ, ರಾಜ್ಯ ವಿತರಣಾ ಕಂಪೆನಿಗಳು (ಡಿಸ್ಕೋಮ್ಗಳು) ವಿದ್ಯುತ್ ಖರೀದಿ ಒಪ್ಪಂದಗಳಲ್ಲಿ (ಪಿಪಿಎ) ಪಾವತಿ ಭದ್ರತಾ ಕಾರ್ಯವಿಧಾನಗಳ ಭಾಗವಾಗಿ ಸಾಲ ಪತ್ರಗಳನ್ನು (ಎಲ್ಸಿ) ನೀಡುವುದನ್ನು ಕಡ್ಡಾಯಗೊಳಿಸಿವೆ.
ಕೊರೋನವೈರಸ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 21 ದಿನಗಳ ಕಾಲ ಲಾಕ್ ಡೌನ್ ಅನ್ನು ಘೋಷಣೆ ಮಾಡಿದ್ದಾರೆ. ಇದರಿಂದಾಗಿ ದೇಶದ ಎಲ್ಲಾ ಕಾರ್ಯಚಟುವಟಿಕೆಗಳು ಸ್ಥಗಿತಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.