ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ರೋಗ ಹರಡುವಿಕೆಯಿಂದಾಗಿ ದೇಶವನ್ನು ಸಂಪೂರ್ಣ ಲಾಕ್ಡೌನ್ ಮಾಡಲಾಗಿದೆ. ಕೊರೋನಾ ಪೀಡಿತರಿಗೆ ಮತ್ತು ಶಂಕಿತರಿಗೆ ಸೇವೆಯನ್ನು ಒದಗಿಸಲು ವೈದ್ಯರು ಮತ್ತು ದಾದಿಯರು ದಿನದ 24 ಗಂಟೆಯೂ ಸೇವೆ ಮಾಡುತ್ತಿದ್ದಾರೆ. ಒತ್ತಡಕ್ಕೊಳಗಾಗಿರುವ ಆಸ್ಪತ್ರೆಯ ಸಿಬ್ಬಂದಿಗೆ ಸಹಾಯ ಮಾಡಲು ಮತ್ತು ಸಾರ್ವಜನಿಕರಿಗೆ ಕೊರೋನಾವೈರಸ್ ಬಗ್ಗೆ ಶಿಕ್ಷಣ ನೀಡುವ ಸಲುವಾಗಿ, ಬಡವರಿಗೆ ಈ ಕಠಿಣ ಸಂದರ್ಭದಲ್ಲಿ ಅಗತ್ಯ ನೆರವು ಒದಗಿಸುವ ನಿಟ್ಟಿನಲ್ಲಿ ಆರ್ಎಸ್ಎಸ್ ಸ್ವಯಂಸೇವಕರು ದೇಶಾದ್ಯಂತ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಕರ್ನಾಟಕದಲ್ಲಿ ಸ್ವಯಂಸೇವಕರು ರಾಜ್ಯ ವಿವಿಧೆಡೆ ನಿರ್ಗತಿಕರಿಗೆ, ಬಡವರಿಗೆ ಉಚಿತ ಆಹಾರ, ಅಡುಗೆ ಸಾಮಗ್ರಿಗಳನ್ನು ಮನೆ ಮನೆಗೆ ತಲುಪಿಸುತ್ತಿದ್ದಾರೆ.
ಮಧ್ಯಪ್ರದೇಶದಲ್ಲಿ, ಆರ್ಎಸ್ಎಸ್ ಸ್ವಯಂಸೇವಕರು ಇಡೀ ಹಳ್ಳಿಯನ್ನು ಸ್ವಚ್ಛಗೊಳಿಸಿದರು. ಅಲ್ಲದೇ, ಮಧ್ಯಪ್ರದೇಶದ ಜಬಲ್ಪುರದ ಗೋಕುಲ್ದಾಸ್ ಧರ್ಮಶಾಲಾದಲ್ಲಿ ಸ್ವಯಂಸೇವಕರು ಬಡ ಮತ್ತು ನಿರ್ಗತಿಕರಿಗೆ ಉಚಿತ ಆಹಾರವನ್ನು ಒದಗಿಸುವ ಕಾರ್ಯವನ್ನು ಮಾಡಿದರು. ಹಲವಾರು ಸ್ಥಳಗಳಲ್ಲಿ, ಸ್ವಯಂ ಸೇವಕರ ಸಣ್ಣ ತಂಡಗಳನ್ನು ರಚಿಸಿಕೊಂಡು ಸ್ವಚ್ಛವಾದ ಜೀವನಶೈಲಿಯನ್ನು ಕಾಪಾಡಿಕೊಳ್ಳುವ ಅಗತ್ಯತೆ ಮತ್ತು ಕರೋನಾ ವೈರಸ್ನಿಂದ ಪ್ರಭಾವಿತರಾಗದಂತೆ ತಮ್ಮನ್ನು ರಕ್ಷಿಸಿಕೊಳ್ಳುವ ಮಾರ್ಗಗಳ ಬಗ್ಗೆ ಜನರಿಗೆ ಶಿಕ್ಷಣ ನೀಡುತ್ತಿದ್ದಾರೆ.
ಒರಿಸ್ಸಾ ಮತ್ತು ಕರ್ನಾಟಕದಲ್ಲಿ, ಸ್ವಯಂಸೇವಕರ ತಂಡವು ಬಡ ಜನರಿಗೆ ವೈದ್ಯಕೀಯ ನೆರವು ಮತ್ತು ಮುಖಗವಸುಗಳನ್ನು ವಿತರಿಸಿತು ಮತ್ತು ಕರೋನಾದ ಪರಿಸ್ಥಿತಿಯ ಬಗ್ಗೆ ಅವರಿಗೆ ಅರಿವು ಮೂಡಿಸುವ ಕಾರ್ಯವನ್ನೂ ಮಾಡಿತು.
ಕೇರಳದಲ್ಲಿ, ಆಸ್ಪತ್ರೆಗಳ ಆವರಣವನ್ನು ಸ್ವಚ್ಛಗೊಳಿಸಲು ಮತ್ತು ಪಟ್ಟಣವನ್ನು ಸೋಂಕುರಹಿತಗೊಳಿಸಲು ಆರ್ಎಸ್ಎಸ್ ಸ್ವಯಂಸೇವಕರು ಮತ್ತು ಸೇವಾಭಾರತಿ ಸ್ವಯಂಸೇವಕರು ಪೊಲೀಸ್ ಮತ್ತು ಅಗ್ನಿಶಾಮಕ ಸೇವೆಗಳೊಂದಿಗೆ ಕೈಜೋಡಿಸಿದರು. ಕೇರಳದ ಕೋಥಮಂಗಲಂ, ಕೊಡುಂಗಲ್ಲೂರ್ ಪ್ರದೇಶಗಳಲ್ಲಿನ ಕಸವನ್ನು ತೆರವುಗೊಳಿಸಲು ಸಹಕರಿಸಿದರು.
ಕೆಲವು ದಿನಗಳ ಹಿಂದೆ ಕೊರೋನಾ ವಿರುದ್ಧದ ಹೋರಾಟದಲ್ಲಿ ಸ್ಥಳೀಯ ಆಡಳಿತಕ್ಕೆ ಸಹಾಯ ಹಸ್ತ ನೀಡುವಂತೆ ಆರ್ಎಸ್ಎಸ್ ಸರರ್ಕಾರ್ಯವಾಹ ಸುರೇಶ್ ಭಯ್ಯಾಜಿ ಜೋಶಿ ಎಲ್ಲಾ ಸ್ವಯಂಸೇವಕರಿಗೆ ಕರೆ ನೀಡಿದ್ದರು. ಸಣ್ಣ ತಂಡಗಳನ್ನು ರಚಿಸಿ ಸಮಾಜದಲ್ಲಿ ಸ್ವಚ್ಛತೆ, ಆರೋಗ್ಯ ಮತ್ತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದು ಅವರು ಸ್ವಯಂಸೇವಕರಿಗೆ ಕರೆ ನೀಡಿದ್ದರು. ಅಗತ್ಯವಿರುವವರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಲು ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದ್ದರು.
ನಿರೀಕ್ಷೆಯನ್ನು ಅರ್ಥಮಾಡಿಕೊಳ್ಳಲು ಮತ್ತು ಅಗತ್ಯ ನೆರವು ನೀಡಲು ಸ್ಥಳೀಯ ಆಡಳಿತ ಮತ್ತು ಸಾರ್ವಜನಿಕ ಪ್ರತಿನಿಧಿಗಳೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿರಬೇಕು. ಸರ್ಕಾರಗಳು ತೆಗೆದುಕೊಳ್ಳುವ ನಿರ್ಧಾರಗಳ ಅನುಷ್ಠಾನದಲ್ಲಿ ಸ್ವಯಂಸೇವಕರು ಸಂಪೂರ್ಣವಾಗಿ ಸಹಕರಿಸಬೇಕು ಎಂದು ಸ್ವಯಂಸೇವಕರಿಗೆ ಸಲಹೆಗಳನ್ನು ನೀಡಿದ್ದಾರೆ.
ಮಾರ್ಚ್ 20 ರಂದು ಪ್ರಧಾನಿ ಮೋದಿಯವರು ಜನತಾ ಕರ್ಫ್ಯೂಗೆ ಕರೆ ನೀಡಿದ್ದನ್ನು ಆರ್ಎಸ್ಎಸ್ ಸ್ವಾಗತಿಸಿತ್ತು. ಅಲ್ಲದೆ ತನ್ನ ಸ್ವಯಂಸೇವಕರಿಗೆ ಕೋವಿಡ್ 19 ವಿರುದ್ಧ ಒಟ್ಟಿಗೆ ಹೋರಾಡಲು ‘ಸಂಕಲ್ಪ ಮತ್ತು ಸಂಯಮ’ದ ಮಂತ್ರವನ್ನು ಅನುಸರಿಸುವಂತೆ ತಿಳಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.