ನವದೆಹಲಿ: ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು ಬಡವರಿಗೆ ಉಚಿತ ಆಹಾರ ಧಾನ್ಯಗಳನ್ನು ಘೋಷಿಸುತ್ತಿದ್ದಂತೆ, ಪಂಜಾಬ್ನ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಫ್ಸಿಐ) ಅಧಿಕಾರಿಗಳು 30 ರೇಕ್ಗಳನ್ನು ಲೋಡ್ ಮಾಡಿದ್ದಾರೆ. ಪ್ರತಿಯೊಂದೂ ರೇಕ್ನಲ್ಲೂ 2,500 ಟನ್ ಗೋಧಿ ಮತ್ತು ಅಕ್ಕಿಯನ್ನು ಸಾಗಿಸಲಾಗುತ್ತಿದೆ.
80 ಕೋಟಿ ಬಡವರಿಗೆ 3 ತಿಂಗಳುಗಳ ಕಾಲ ಪ್ರತಿ ತಿಂಗಳು 5 ಕಿ.ಗ್ರಾಂ ಹೆಚ್ಚುವರಿ ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡಲು ಕೇಂದ್ರ ನಿರ್ಧರಿಸಿದ ನಂತರ, ಪಂಜಾಬಿನಿಂದ ಗೋಧಿ ಮತ್ತು ಅಕ್ಕಿಗಳನ್ನು ಸಾಗಿಸುವ ಕಾರ್ಯ ನಡೆಯುತ್ತಿದೆ.
ದಿನದ ಅಂತ್ಯದ ವೇಳೆಗೆ, ಅಧಿಕಾರಿಗಳು ತಮ್ಮ ಬಳಿ ಇದ್ದ ಮಾನವಶಕ್ತಿ ಮತ್ತು ರೈಲ್ವೆ ವ್ಯಾಗನ್ಗಳನ್ನು ಬಳಸಿ 20 ರೇಕ್ಗಳನ್ನು ಲೋಡ್ ಮಾಡಿ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಧಾನ್ಯಗಳನ್ನು ಆಹಾರ ಧಾನ್ಯಗಳ ಕೊರತೆ ಇರುವ ರಾಜ್ಯಗಳಿಗೆ ಪೂರೈಕೆ ಮಾಡಲಾಗುತ್ತಿದೆ.
ಹಿಮಾಚಲ ಪ್ರದೇಶ ಮತ್ತು ಮೇಘಾಲಯದಂತಹ ಬೆರಳೆಣಿಕೆಯಷ್ಟು ರಾಜ್ಯಗಳಲ್ಲಿ ದೊಡ್ಡಮಟ್ಟದ ಶೇಖರಣಾ ಸೌಲಭ್ಯಗಳನ್ನು ಸೃಷ್ಟಿಸುವುದು ಕಠಿಣವಾಗಿದೆ ಎಂದು ಎಫ್ಸಿಐ ಅಧಿಕಾರಿಗಳು ತಿಳಿಸಿದ್ದಾರೆ, ಇತರ ಎಲ್ಲ ರಾಜ್ಯಗಳಲ್ಲಿ 4.6 ತಿಂಗಳಿಗೆ ಬೇಕಾಗುವಷ್ಟು ಸಂಗ್ರಹವನ್ನು ಹೊಂದಿವೆ ಎಂದಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಆಹಾರ ಸಾಮಗ್ರಿಗಳ ಶೇಖರಣೆ ಉತ್ತಮವಾಗಿದೆ. ಲಡಾಖ್ನಲ್ಲಿ ಗೋಧಿ ಮತ್ತು ಅಕ್ಕಿ ಇದ್ದು ಅದು 9 ರಿಂದ 12 ತಿಂಗಳವರೆಗೆ ಸಾಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರಿ ಸಂಸ್ಥೆಗಳು ಸುಮಾರು 37 ಲಕ್ಷ ಟನ್ ದ್ವಿದಳ ಧಾನ್ಯಗಳನ್ನು ಸಂಗ್ರಹಿಸಿವೆ, ಕೇಂದ್ರವು ಪ್ರತಿ ಕುಟುಂಬಕ್ಕೆ 1 ಕೆಜಿ ದ್ವಿದಳ ಧಾನ್ಯಗಳನ್ನು ಒಂದು ವರ್ಷದಿಂದ ಪೂರೈಸುತ್ತಿದೆ. ವಿತರಣೆಗೆ ಸರ್ಕಾರಕ್ಕೆ 5,000 ಕೋಟಿ ರೂ. ತಗಲುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.