ನವದೆಹಲಿ : ಒಂದು ಕಾಲದಲ್ಲಿ ಜನರ ಹೃದಯವನ್ನು ಗೆದ್ದಿದ್ದ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ರಾಮಾಯಣ ಮತ್ತು ಮಹಾಭಾರತ ಧಾರಾವಾಹಿಗಳನ್ನು ಮತ್ತೆ ತೆರೆ ಮೇಲೆ ಮೂಡಿಸಲು ಪ್ರಸಾರ ಭಾರತಿ ಮುಂದಾಗಿದೆ.
ರಮಾನಂದ್ ಸಾಗರ್ ಅವರ ರಾಮಾಯಣ ಮತ್ತು ಬಿ ಆರ್ ಚೋಪ್ರಾ ಅವರ ಮಹಾಭಾರತವನ್ನು ಡಿಡಿ ನ್ಯಾಷನಲ್ ವಾಹಿನಿಯಲ್ಲಿ ಪ್ರಸಾರಗೊಳಿಸುವ ಸಲುವಾಗಿ ಪ್ರಸಾರ ಭಾರತಿ ಸಿಇಓ ಶಶಿಶೇಖರ್ ಅವರು ಧಾರಾವಾಹಿಗಳ ಹಕ್ಕನ್ನು ಹೊಂದಿರುವವರೊಂದಿಗೆ ಮಾತುಕತೆ ನಡೆಸಿದ್ದಾರೆ.
ರಾಮಾಯಣ ಮತ್ತು ಮಹಾಭಾರತ ಎಂಬ ಎರಡು ಜನಪ್ರಿಯ ಧಾರಾವಾಹಿಗಳನ್ನು ಮತ್ತೆ ತೆರೆ ಮೇಲೆ ಮೂಡಿಸಬೇಕು ಎಂಬ ಅಪೇಕ್ಷೆಯನ್ನು ಸಾಮಾಜಿಕ ಜಾಲತಾಣ ಸೇರಿದಂತೆ ಹಲವು ಕಡೆಗಳಲ್ಲಿ ಜನರು ಬೇಡಿಕೆಯನ್ನು ಇಡುತ್ತಿದ್ದಾರೆ.
ರಾಮಾಯಣ ಟಿವಿ ಧಾರಾವಾಹಿಯನ್ನು ರಮಾನಂದ್ ಸಾಗರ್ ಅವರು ನಿರ್ದೇಶಿಸಿದ್ದರು. 1987ರಲ್ಲಿ ಮೊದಲ ಬಾರಿಗೆ ಇದನ್ನು ತೆರೆ ಮೇಲೆ ಮೂಡಿಸಲಾಯಿತು. ಬಿ.ಆರ್ ಚೋಪ್ರಾ ನಿರ್ದೇಶಿಸಿದ ಮಹಾಭಾರತವನ್ನು ಬಡಮಿ 1988 ರಲ್ಲಿ ತೆರೆಮೇಲೆ ತರಲಾಯಿತು. ಈ ಎರಡು ಧಾರಾವಾಹಿಗಳು ಭಾರತದ ಕಿರುತೆರೆ ಇತಿಹಾಸದಲ್ಲಿ ಅತ್ಯಂತ ಜನಪ್ರಿಯವಾದ ಧಾರಾವಾಹಿಗಳಾಗಿವೆ.
ರಾಮಾಯಣವನ್ನು 55 ರಾಷ್ಟ್ರಗಳ 650 ಮಿಲಿಯನ್ ಜನರು ವೀಕ್ಷಣೆ ಮಾಡಿದ್ದಾರೆ, ಮಹಾಭಾರತಕ್ಕೂ ಇದೇ ರೀತಿಯ ಸ್ಪಂದನೆಗಳು ವ್ಯಕ್ತವಾಗಿದ್ದವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.