ನವದೆಹಲಿ: ಹಣಕಾಸು ಸಚಿವಾಲಯವು ಶೀಘ್ರದಲ್ಲೇ ಕೊರೋನವೈರಸ್ಗೆ ಸಂಬಂಧಿಸಿದಂತೆ ಹಣಕಾಸು ಪ್ಯಾಕೇಜನ್ನು ಘೋಷಣೆ ಮಾಡಲಿದೆ ಎಂಬುದಾಗಿ ವಿತ್ತಸಚಿವ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ.
ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹಲವಾರು ಡೆಡ್ಲೈನ್ ಮುಂದೂಡಿಕೆ ಮತ್ತು ವಿನಾಯಿತಿ ಕ್ರಮಗಳನ್ನು ಘೋಷಣೆ ಮಾಡಿದರು.
2018- 19 ನೇ ಸಾಲಿನ ತೆರಿಗೆ ಪಾವತಿಯನ್ನು 2020 ರ ಜೂನ್ 30 ರವರೆಗೆ ವಿಸ್ತರಣೆ ಮಾಡಲಾಗಿದೆ. ವಿಳಂಬ ಪಾವತಿಗೆ ಇದ್ದ ದಂಡದ ಮೊತ್ತವನ್ನು ಶೇಕಡ 12 ರಿಂದ ಶೇಕಡಾ 9 ಕ್ಕೆ ಇಳಿಕೆ ಮಾಡಲಾಗಿದೆ. ವಿಳಂಬ ಠೇವಣಿಯ ಟಿಡಿಎಸ್ ಅನ್ನು ಶೇ.18 ರಿಂದ ಶೇ.9 ಕ್ಕೆ ಇಳಿಸಲಾಗಿದೆ.
ಆಧಾರ್ ಕಾರ್ಡ್ ಮತ್ತು ಪಾನ್ ಜೋಡಣೆಯ ದಿನಾಂಕವನ್ನು ಜೂನ್ 30ಕ್ಕೆ ವಿಸ್ತರಣೆ ಮಾಡಲಾಗಿದೆ.
ಹಣಕಾಸು ಸಚಿವಾಲಯವು ಸಣ್ಣ ಮಧ್ಯಮ ಉದ್ಯಮಗಳಿಗೆ ವಿನಾಯತಿಗಳನ್ನು ನೀಡಿದೆ. ಜಿಎಸ್ಟಿ ಪಾವತಿಯ ದಿನಾಂಕವನ್ನು ಜೂನ್ 30 ರ ವರೆಗೆ ವಿಸ್ತರಿಸಲಾಗಿದೆ. ಒಂದು ವೇಳೆ 5 ಕೋಟಿ ರೂಪಾಯಿ ವಹಿವಾಟಿಗಿಂತ ಕಡಿಮೆ ಇರುವ ಉದ್ಯಮಗಳು ಜಿಎಸ್ಟಿ ಪಾವತಿ ವಿಳಂಬವಾದರೆ ಯಾವುದೇ ರೀತಿಯ ತಂಡವನ್ನು ವಿಧಿಸಲಾಗುವುದಿಲ್ಲ. ಒಂದು ವೇಳೆ 5 ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ವಹಿವಾಟು ಇರುವ ಸಂಸ್ಥೆಗಳು ಜಿ ಎಸ್ ಟಿ ಪಾವತಿ ವಿಳಂಬ ಗೊಳಿಸಿದರೆ ಶೇಕಡಾ 9 ರಷ್ಟು ದಂಡ ಪಾವತಿಸಬೇಕಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.