ನವದೆಹಲಿ: ಮಾರ್ಚ್ 24 ರ ಮಧ್ಯರಾತ್ರಿಯಿಂದ ದೇಶದೊಳಗೆ ಹಾರಾಟ ನಡೆಸುವ ಎಲ್ಲಾ ಪ್ರಯಾಣಿಕ ವಿಮಾನಗಳು ಕೂಡ ರದ್ದುಗೊಳ್ಳಲಿವೆ.
ಕೊರೋನ ವೈರಸ್ ಕಾರಣದಿಂದಾಗಿ ಎಲ್ಲಾ ದೇಶಿಯ ವಿಮಾನಗಳ ಕಾರ್ಯಾಚರಣೆಗಳನ್ನು ಮಾರ್ಚ್ 24 ರ ಮಧ್ಯರಾತ್ರಿಯಿಂದ ಸ್ಥಗಿತಗೊಳಿಸಲಾಗುತ್ತಿದೆ. ಹೀಗಾಗಿ ಮಧ್ಯರಾತ್ರಿಗೆ ಮುಂಚಿತವಾಗಿ ಆಯಾ ಸ್ಥಳದಲ್ಲಿ ವಿಮಾನ ಲ್ಯಾಂಡ್ ಆಗುವಂತೆ ಯೋಜನೆಯನ್ನು ರೂಪಿಸುವಂತೆ ವಿಮಾನ ಯಾನ ಸಂಸ್ಥೆಗಳಿಗೆ ಸೂಚನೆಯನ್ನು ನೀಡಲಾಗಿದೆ.
ಆದರೆ ಈ ನಿರ್ಬಂಧಗಳು ಪ್ರಯಾಣಿಕ ವಿಮಾನಗಳಿಗೆ ಮಾತ್ರ ಸೀಮಿತವಾಗಿದೆ. ಸರಕು ವಿಮಾನಗಳಿಗೆ ಇದು ಅನ್ವಯವಾಗುವುದಿಲ್ಲ. ಇದಕ್ಕೂ ಮೊದಲು ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಅವಿಯೇಶನ್ ಅವರು, ವಿಮಾನಯಾನದ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಬಗ್ಗೆ ಕೆಲವೊಂದು ನಿರ್ದೇಶನಗಳನ್ನು ಹೊರಡಿಸಿದ್ದರು. ಇದರ ಅನ್ವಯ ಪ್ರಯಾಣಿಕರನ್ನು ಒಬ್ಬರ ಪಕ್ಕದಲ್ಲಿ ಇನ್ನೊಬ್ಬರನ್ನು ಕೂರಿಸುವಂತಿಲ್ಲ. ಎರಡು ಪ್ರಯಾಣಿಕರ ನಡುವೆ ಒಂದು ಸೀಟನ್ನು ಖಾಲಿ ಬಿಡುವುದು ಅವಶ್ಯಕವಾಗಿದೆ.
ಕೊರೋನವೈರಸ್ ಹಿನ್ನೆಲೆಯಲ್ಲಿ ಈಗಾಗಲೇ ಎಲ್ಲಾ ಅಂತರಾಷ್ಟ್ರೀಯ ಪ್ರಯಾಣಿಕ ವಿಮಾನ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲಾಗಿದೆ. ಈ ನಿಯಮವನ್ನು ಇಂದು ಮಧ್ಯರಾತ್ರಿಯಿಂದ ದೇಶಿಯ ವಿಮಾನಗಳಿಗೂ ವಿಸ್ತರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.