ನವದೆಹಲಿ: ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಅಪ್ರತಿಮ ದೇಶಪ್ರೇಮಿಗಳಾದ ಭಗತ್ ಸಿಂಗ್, ಸುಖದೇವ್ ಮತ್ತು ರಾಜ್ಗುರು ಇಂದು ಬಲಿದಾನ ಮಾಡಿದ ದಿವಸ. ದೇಶವು ಈ ಮೂರು ಸ್ವಾತಂತ್ರ್ಯ ಸೇನಾನಿಗಳ ಅಪ್ರತಿಮ ತ್ಯಾಗವನ್ನು ಇಂದು ಸ್ಮರಿಸುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮೂಲಕ ಮೂವರು ಸೇನಾನಿಗಳ ಅಪ್ರತಿಮ ಬಲಿದಾನವನ್ನು ಸ್ಮರಿಸಿಕೊಂಡಿದ್ದಾರೆ.
“ಬಲಿದಾನ ದಿವಸವಾದ ಇಂದು ಭಾರತಾಂಬೆಯ ವೀರಪುತ್ರರಾದ ಭಗತ್ ಸಿಂಗ್, ಸುಖದೇವ್ ಮತ್ತು ರಾಜ್ಗುರು ಅವರಿಗೆ ತಲೆಬಾಗಿ ನಮಿಸುತ್ತೇನೆ. ದೇಶಕ್ಕಾಗಿ ಅವರು ಮಾಡಿದ ಅಪ್ರತಿಮ ತ್ಯಾಗಕ್ಕಾಗಿ ಈ ದೇಶ ಸದಾ ಅವರಿಗೆ ಚಿರಋಣಿಯಾಗಿರುತ್ತದೆ. ಜೈ ಹಿಂದ್” ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
शहीद दिवस पर मां भारती के महान सपूत वीर भगत सिंह, सुखदेव और राजगुरु को कोटि-कोटि नमन। देश के लिए उनका बलिदान कृतज्ञ राष्ट्र सदा याद रखेगा। जय हिंद!
— Narendra Modi (@narendramodi) March 23, 2020
ಮಾರ್ಚ್ 23 ರಂದು ದೇಶದಲ್ಲಿ ಬಲಿದಾನ ದಿವಸವನ್ನು ಆಚರಣೆ ಮಾಡಲಾಗುತ್ತದೆ. 1931ರ ಈ ದಿನ ಬ್ರಿಟಿಷರು ಭಾರತಮಾತೆಯ ವೀರಪುತ್ರರಾದ ಭಗತ್ ಸಿಂಗ್ ರಾಜ್ಗುರು ಮತ್ತು ಸುಖದೇವ್ ಅವರನ್ನು ಗಲ್ಲಿಗೇರಿಸಿದ್ದರು.
ಇಂದು ಖ್ಯಾತ ಸಾಮಾಜಿಕ ಚಿಂತಕ ಮತ್ತು ರಾಜಕಾರಣಿ ರಾಮಮನೋಹರ ಲೋಹಿಯಾ ಅವರ 110ನೇ ಜನ್ಮದಿನವೂ ಹೌದು. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಲೋಹಿಯಾ ಅವರಿಗೂ ನಮನಗಳನ್ನು ಸಲ್ಲಿಸಿದ್ದಾರೆ.
“ಖ್ಯಾತ ಚಿಂತಕ ಮತ್ತು ಜನಪ್ರಿಯ ರಾಜಕಾರಣಿಯಾದ ಡಾ. ರಾಮಮನೋಹರ ಲೋಹಿಯಾ ಅವರಿಗೆ ಅವರ ಜನ್ಮ ದಿನದಂದು ನಮನಗಳು. ಸಾಮಾಜಿಕ ಸಬಲೀಕರಣ ಮತ್ತು ಸೇವೆಗೆ ಸಂಬಂಧಿಸಿದಂತೆ ಅವರ ಚಿಂತನೆಗಳು ದೇಶದ ಜನರಿಗೆ ಸದಾ ಪ್ರೇರಣೆಯಾಗುತ್ತದೆ” ಎಂದಿದ್ದಾರೆ.
प्रखर समाजवादी चिंतक और लोकप्रिय राजनेता डॉ. राम मनोहर लोहिया जी को उनकी जयंती पर शत-शत नमन। सामाजिक सशक्तिकरण और सेवा भाव से जुड़े उनके विचार देशवासियों को सदैव प्रेरित करते रहेंगे।
— Narendra Modi (@narendramodi) March 23, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.