ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಕೊರೋನಾವೈರಸ್ ಸೋಂಕಿನ ಪ್ರಕರಣಗಳು ಮತ್ತು ಈ ಸಾಂಕ್ರಾಮಿಕ ರೋಗವನ್ನು ಎದುರಿಸಲು ಜಾಗತಿಕವಾಗಿ ನಡೆಯುತ್ತಿರುವ ಪ್ರಯತ್ನಗಳನ್ನು ಗಮನದಲ್ಲಿಟ್ಟುಕೊಂಡು ಹಿಂದೂ ಸಮಾಜವು ದೊಡ್ಡ ಮಟ್ಟದ ಮೆರವಣಿಗೆಗಳನ್ನು, ರಥೋತ್ಸವಗಳನ್ನು, ಪ್ರವಾಸಗಳನ್ನು, ತೀರ್ಥಯಾತ್ರೆಗಳನ್ನು ನಡೆಸಬಾರದು ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಹೇಳಿದೆ. ಶ್ರೀ ರಾಮ ಮಹೋತ್ಸವದ ಸಮಯದಲ್ಲಿ ಕೂಡ ಅಂತಹ ಯಾವುದೇ ಸಾಮೂಹಿಕ ಕಾರ್ಯಕ್ರಮಗಳನ್ನು ನಡೆಸಬಾರದು ಎಂದಿದೆ.
ಸಾಮೂಹಿಕ ಸಮಾರಂಭಗಳು, ಸಮಾರಂಭಗಳು ಕೊರೋನವೈರಸ್ನ ಪಸರಿಸುವಿಕೆಗೆ ಕಾರಣವಾಗಬಹುದು ಎಂದು ಅದು ಎಚ್ಚರಿಸಿದೆ.
ಮಾರ್ಚ್ 25 ರಿಂದ ಪ್ರಾರಂಭವಾಗಿ ಹನುಮಾನ್ ಜಯಂತಿಯಂದು ಅಂದು ಏಪ್ರಿಲ್ 8 ರವರೆಗೆ ದೇಶಾದ್ಯಂತ ನಿಗದಿಯಾಗಿದ್ದ ಶ್ರೀ ರಾಮ ಮಹೋತ್ಸವ ಆಚರಣೆಗಳ ಸ್ವರೂಪಗಳಲ್ಲಿ ಕೆಲವು ಅಗತ್ಯ ಬದಲಾವಣೆಗಳನ್ನು ಮಾಡಬೇಕೆಂದು ವಿಶ್ವ ಹಿಂದೂ ಪರಿಷದ್ ಹಿಂದೂಗಳನ್ನು ಕೋರಿದೆ.
ದೇಶದಲ್ಲಿ ಹೆಚ್ಚುತ್ತಿರುವ ಕೊರೋನವೈರಸ್ ಸೋಂಕು ಪ್ರಕರಣಗಳು ಮತ್ತು ಈ ಸಾಂಕ್ರಾಮಿಕ ರೋಗವನ್ನು ಎದುರಿಸಲು ಜಾಗತಿಕವಾಗಿ ನಡೆಯುತ್ತಿರುವ ಪ್ರಯತ್ನಗಳನ್ನು ಗಮನದಲ್ಲಿಟ್ಟುಕೊಂಡು ವಿಎಚ್ಪಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಂಡೆ ಅವರು ಇಂದು ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದೇಶವ್ಯಾಪಿ ಶ್ರೀರಾಮ ಮಹೋತ್ಸವ ಮೆರವಣಿಗೆಗಳು ಅಥವಾ ರಥೋತ್ಸವಗಳು, ಮೆರವಣಿಗೆಗಳು ನಿಗದಿಯಾಗಿದ್ದವು. ಇದೀಗ ಅದನ್ನು ರದ್ದುಪಡಿಸಲಾಗಿದೆ. ಮನೆಗಳಲ್ಲಿಯೇ ಕೇಸರಿ ಧ್ವಜಗಳನ್ನು ಹಾರಿಸಿ ಮತ್ತು ಶ್ರೀರಾಮ ಮಹೋತ್ಸವ ಆಚರಿಸಿ ಎಂದು ವಿಎಚ್ಪಿ ಕರೆ ನೀಡಿದೆ. ಅಲ್ಲದೇ, ನರೇಂದ್ರ ಮೋದಿ ಕರೆ ನೀಡಿದ ಜನತಾ ಕರ್ಫ್ಯೂಗೆ ಬೆಂಬಲವನ್ನು ಸೂಚಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.