ನವದೆಹಲಿ : ಭಾರತದ ಹಾಕಿ ಮಾಂತ್ರಿಕ ಧ್ಯಾನಚಂದ್ ಅವರಿಗೆ ಬ್ರಿಟನ್ ಸಂಸತ್ತಿನ ಹೌಸ್ ಆಫ್ ಕಾಮರ್ಸ್ನಲ್ಲಿ ಜು.25 ರಂದು ‘ಭಾರತ ಗೌರವ ಪುರಸ್ಕಾರ’ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪುರಸ್ಕಾರವನ್ನು ಸ್ವೀಕರಿಸಲು ಧ್ಯಾನಚಂದ್ ಅವರ ಮಗ ಮತ್ತು 1975ರ ವಿಶ್ವ ಕಪ್ ವಿಜೇತ ತಂಡದ ಮಾಜಿನಾಯಕ ಅಶೋಕ್ ಕುಮಾರ್ ಅವರಿಗೆ ಆಮಂತ್ರಿಸಲಾಗಿದೆ.
ವಿದೇಶಗಳಲ್ಲಿ ಮತ್ತು ಈಗ ಬ್ರಿಟನ್ ಸಂಸತ್ತಿನಲ್ಲಿ ಅವರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗೌರವ ಮತ್ತು ಪ್ರಶಸ್ತಿ ದೊರೆಯುತ್ತಿದೆ. ಭಾರತದ ಅತ್ಯುಕೃಷ್ಟ ನಾಗರೀಕ ಸೇವಾ ಪ್ರಶಸ್ತಿಯಾದ ‘ಭಾರತದ ರತ್ನ’ ಪ್ರಶಸ್ತಿ ನೀಡಲು ನಾವು ವಿನಂತಿಸಿದ್ದೆವು. ಆದರೆ ಹಿಂದಿನ ಯುಪಿಎ ಸರಕಾರ ಮಾಜೀ ಕ್ರಿಕೇಟಿಗ ಸಚಿನ್ ಅವರಿಗೆ ಈ ಗೌರವ ನೀಡಲಾಯಿತು. ಅಲ್ಲದೇ ನಮ್ಮ ದೇಶದ ಸರಕಾರವು ಧ್ಯಾನಚಂದ್ ಅವರನ್ನು ಕಡೆಗಣಿಸಿದೆ. ಇದು ನಮಗೆ ಅತೀವ ನೋವು ಉಂಟುಮಾಡಿದ್ದು 2012 ರಲ್ಲಿ ನಡೆದ ಲಂಡನ್ ಒಲಂಪಿಕ್ಸ್ನ ನಂತರ ಮೆಟ್ರೋ ರೈಲು ಸ್ಥೇಷನ್ಗೆ ಧ್ಯಾನಚಂದ್ ಹೆಸರಿಡಲಾಗಿದೆ. ಭಾರತೀಯ ಹಾಕಿ ರಂಗದಲ್ಲಿ ಅವರ ಸಾಧನೆ ಅಪಾರ ಎಂದು ಹಾಕಿ ಮಾಜಿನಾಯಕ ಅಶೋಕ್ ಕುಮಾರ್ ಬೇಸರ ವ್ಯಕ್ತಪಡಿಸಿದರು.
ಧ್ಯಾನಚಂದ್ ಅವರು (1928, 1932, 1936) ರ ಒಲಂಪಿಕ್ಸ್ನಲ್ಲಿ ಚಿನ್ನ ಪದಕಗೆದ್ದಿದ್ದು 1926ರಿಂದ 1948ರ ಅವಧಿಯಲ್ಲಿ ಅಂತರಾಷ್ಟ್ರೀಯ ಆಟದಲ್ಲಿ 400 ಕ್ಕೂ ಹೆಚ್ಚು ಗೋಲುಗಳನ್ನು ಬಾರಿಸಿದ್ದಾರೆ ಎಂದು ಅಶೋಕ್ ಅವರು ಹೇಳಿದರು. ಈ ಪ್ರಶಸ್ತಿಯನ್ನು ಅನಿವಾಸಿ ಭಾರತೀಯ ಸಂಸ್ಥೆ ‘ಸಂಸ್ಕೃತಿ’ ಭಾರತೀಯ ಸಾಧಕರಿಗೆ ನೀಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.