ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಸಾರ್ಕ್ ನಾಯಕರೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್ನಲ್ಲಿ ಪ್ರಸ್ತಾಪಿಸಿದ ಸಾರ್ಕ್ ತುರ್ತು COVID-19 ನಿಧಿಯನ್ನು ಇನ್ನಷ್ಟು ಸಮರ್ಥವಾಗಿ ರಚಿಸಲು ನೇಪಾಳ ಮತ್ತು ಭೂತಾನ್ ಶುಕ್ರವಾರ ವಿತ್ತೀಯ ಬೆಂಬಲವನ್ನು ನೀಡಿದೆ.
ಶುಕ್ರವಾರ ನೇಪಾಳ $ 1 ಮಿಲಿಯನ್ ಮತ್ತು ಭೂತಾನ್ $1,00,000 ಮಿಲಿಯನ್ ನೀಡುವ ವಾಗ್ದಾನ ಮಾಡಿವೆ.
ಉಭಯ ರಾಷ್ಟ್ರಗಳು ವಾಗ್ದಾನ ಮಾಡಿದ ಮೊತ್ತವು ಮೋದಿಯವರು ಘೋಷಣೆ ಮಾಡಿದ $10 ಮಿಲಿಯನ್ಗೆ ಹೆಚ್ಚುವರಿಯಾಗಿ ನಿಧಿಗೆ ಸೇರ್ಪಡೆಯಾಗಲಿದೆ., ಈ ನಿಧಿಗೆ ಭಾರತದ ಕೊಡುಗೆಯಾಗಿ ಪ್ರಧಾನಿ ಮೋದಿ ಅವರು $10 ಮಿಲಿಯನ್ ಘೋಷಣೆ ಮಾಡಿದ್ದರು. ಈ ನಿಧಿಯು ಸಾರ್ಕ್ ಸದಸ್ಯರಿಗೆ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ.
ಪ್ರಧಾನಿ ಮೋದಿಯವರ ಉಪಕ್ರಮವು ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಮತ್ತು ಜಾಗತಿಕ ಸಮುದಾಯಕ್ಕೆ ಒಂದು ಉದಾಹರಣೆಯನ್ನು ನೀಡಲು ಸಾರ್ಕ್ ಸದಸ್ಯ ರಾಷ್ಟ್ರಗಳ ದೃಢ ವಾದ ಮತ್ತು ಸಹಯೋಗದ ಪ್ರಯತ್ನಕ್ಕೆ ಕರೆ ನೀಡಿದೆ.
ಮಾತ್ರವಲ್ಲದೇ ನೇಪಾಳ ವಿದೇಶಾಂಗ ಸಚಿವ ಪ್ರದೀಪ್ ಗಯವಾಲಿ ಮತ್ತು ಕೇಂದ್ರ ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಅವರು ಕೊರೋನವೈರಸ್ ತಡೆಗಟ್ಟುವಿಕೆಯ ಕುರಿತು ಸಂಭಾಷಣೆ ನಡೆಸಿದರು, ಇದರಲ್ಲಿ ನೇಪಾಳವು ಕೋರಿದ ಮನವಿಗೆ ಭಾರತ ಸಕಾರಾತ್ಮಕವಾಗಿ ಸ್ಪಂದಿಸಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.