ವಿಶ್ವಸಂಸ್ಥೆ: ಕೊರೋನವೈರಸ್ ಮಹಾಮಾರಿಯನ್ನು ಸರಿಯಾದ ರೀತಿಯಲ್ಲಿ ತಡೆಗಟ್ಟದೆ ಪಸರಿಸಲು ಬಿಟ್ಟರೆ ಲಕ್ಷಾಂತರ ಜನರು ಸಾಯುವ ನಿರೀಕ್ಷೆ ಇದೆ, ಅದರಲ್ಲೂ ಬಡ ರಾಷ್ಟ್ರಗಳು ಹೆಚ್ಚು ಬಾಧಿತಗೊಳ್ಳಬಹುದು ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೋ ಗುಟೇರಸ್ ಹೇಳಿದ್ದಾರೆ.
ಸಾಂಕ್ರಾಮಿಕ ರೋಗವನ್ನು ತಡೆಯಲು ಜಾಗತಿಕ ಸಂಯೋಜನೆಯೊಂದಿಗೆ ಕಾರ್ಯನಿರ್ವಹಿಸುವುದು ಅತ್ಯವಶ್ಯಕ ಎಂದು ಅವರು ಪ್ರತಿಪಾದಿಸಿದ್ದಾರೆ.
“ಒಂದು ವೇಳೆ ನಾವು ಕೊರೋನವೈರಸ್ ಅನ್ನು ಕಾಡ್ಗಚ್ಚಿನಂತೆ ಹರಡಲು ಬಿಟ್ಟರೆ, ವಿಶ್ವದಲ್ಲಿ ಅದರಲ್ಲೂ ಅತ್ಯಂತ ಹಿಂದುಳಿದ ಪ್ರದೇಶಗಳಲ್ಲಿ ಇದು ಲಕ್ಷಾಂತರ ಜನರನ್ನು ಸಾಯಿಸುವ ಸಾಧ್ಯತೆ ಇದೆ” ಎಂದಿದ್ದಾರೆ.
“ಈ ವಿಷಯದಲ್ಲಿ ಜಾಗತಿಕ ಒಗ್ಗಟ್ಟು ನೈತಿಕ ಕಡ್ಡಾಯವಲ್ಲ, ಆದರೆ ಇದು ಎಲ್ಲರ ಹಿತಾಸಕ್ತಿಗಳನ್ನು ಹೊಂದಿದೆ” ಎಂದು ಅವರು ಹೇಳಿದ್ದಾರೆ.
“ಆರೋಗ್ಯ ದುರಂತ”ವನ್ನು ಹಿಮ್ಮೆಟ್ಟಿಸಲು ಸಂಘಟಿತ ಜಾಗತಿಕ ಪ್ರತಿಕ್ರಿಯೆಯ ಅಗತ್ಯವನ್ನು ಗುಟೇರೆಸ್ ಒತ್ತಿಹೇಳಿದ್ದಾರೆ.
ಈಗಾಗಲೇ 9,000 ಕ್ಕೂ ಹೆಚ್ಚು ಜನರ ಪ್ರಾಣವನ್ನು ಕೊರೋನಾವೈರಸ್ ಬಲಿ ತೆಗೆದುಕೊಂಡಿದೆ ಮತ್ತು ವಿಶ್ವದಾದ್ಯಂತ 217,500 ಕ್ಕೂ ಹೆಚ್ಚು ಜನರನ್ನು ಇದು ಸೋಂಕಿಗೆ ಒಳಪಡಿಸಿದೆ.
“ಪ್ರತಿ ದೇಶವು ತನ್ನದೇ ಆದ ಆರೋಗ್ಯ ಕಾರ್ಯತಂತ್ರಗಳನ್ನು ಕೈಗೆತ್ತಿಕೊಳ್ಳುವ ಪರಿಸ್ಥಿತಿಯಿಂದ ನಾವು ತಕ್ಷಣ ದೂರ ಸರಿಯಬೇಕಾಗಿದೆ. ಕೊರೋನಾ ವಿರುದ್ಧ ಕ್ರಮ ಸಂಪೂರ್ಣ ಪಾರದರ್ಶಕತೆಯಿಂದ ಕೂಡಿರಬೇಕು, ಇದು ಸಂಘಟಿತ ಜಾಗತಿಕ ಪ್ರತಿಕ್ರಿಯೆಯನ್ನು ಖಾತ್ರಿಪಡಿಸಬೇಕು, ಬಿಕ್ಕಟ್ಟನ್ನು ನಿಭಾಯಿಸಲು ಕಡಿಮೆ ಸಿದ್ಧತೆ ಇರುವ ದೇಶಗಳಿಗೆ ಸಹಾಯ ಮಾಡಬೇಕು” ಎಂದು ಅವರು ಹೇಳಿದ್ದಾರೆ.
ಗುಟೇರೆಸ್ ಅವರು, 20 ರಾಷ್ಟ್ರಗಳ ಗುಂಪಿಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.
“ಶ್ರೀಮಂತ ದೇಶವು ತನ್ನ ಸ್ವಂತ ನಾಗರಿಕರಿಗೆ ಮಾತ್ರವಲ್ಲ ಬಡ ರಾಷ್ಟ್ರಗಳಿಗೆ ಸಹಾಯ ಮಾಡಬೇಕು. ಜಿ 20 ಗೆ ನನ್ನ ಬಲವಾದ ಮನವಿಯೆಂದರೆ ಆಫ್ರಿಕನ್ ದೇಶಗಳು ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಬಗ್ಗೆಯೂ ಕಾಳಜಿ ವಹಿಸಬೇಕು” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.