ನವದೆಹಲಿ: COVID-19 ಸಾಂಕ್ರಾಮಿಕ ರೋಗದ ಆತಂಕವನ್ನು ನಿಭಾಯಿಸಿದ ರೀತಿಗೆ ಭಾರತ ಸರ್ಕಾರ ಸಾಕಷ್ಟು ಪ್ರಶಂಸೆಯನ್ನು ಪಡೆಯುತ್ತಿದೆ. ವಿದೇಶದಲ್ಲಿ ಸಿಲುಕಿ ಹಾಕಿದ ನಾಗರಿಕರನ್ನು ಮರಳಿ ಕರೆತರುವುದು ಮತ್ತು ಸಂಪರ್ಕ ತಡೆಯನ್ನು ನಿರ್ಮಿಸುವುದು ಮತ್ತು ದೇಶದೊಳಗೆ ಕೊರೋನವೈರಸ್ ಸಾಂಕ್ರಾಮಿಕ ರೋಗವನ್ನು ಹರಡುವುದನ್ನು ನಿಯಂತ್ರಿಸುವುದು ಇತ್ಯಾದಿಗಳನ್ನು ಭಾರತ ಸರ್ಕಾರವು ನಿಭಾಯಿಸಿದ ರೀತಿ ಈಗ ಪ್ರಶಂಸೆಗೆ ಪಾತ್ರವಾಗುತ್ತಿದೆ.
ಕೊರೋನವೈರಸ್ನಿಂದಾಗಿ ತೀವ್ರವಾಗಿ ಪೀಡಿತಗೊಂಡಿರುವ ಇಟಲಿ ದೇಶವು ಸಂಪೂರ್ಣ ಸ್ಥಗಿತಗೊಂಡಿದೆ. ಈ ಸಂದರ್ಭದಲ್ಲಿ ಅಲ್ಲಿನ ಮಿಲನ್ ಎಂಬ ಪ್ರದೇಶದಲ್ಲಿ ಸಿಲುಕಿ ಹಾಕಿಕೊಂಡಿದ್ದ ವಿದ್ಯಾರ್ಥಿನಿಯೊಬ್ಬಳನ್ನೂ ಇತರರೊಂದಿಗೆ ಭಾರತಕ್ಕೆ ಸುರಕ್ಷಿತವಾಗಿ ಸ್ಥಳಾಂತರಗೊಳಿಸಲಾಗಿದೆ. ಈ ಬಗ್ಗೆ ವಿದ್ಯಾರ್ಥಿನಿಯ ತಂದೆ ಭಾವನಾತ್ಮಕವಾಗಿ ಪ್ರತಿಕ್ರಿಯೆಯನ್ನು ನೀಡಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅವರ ಪ್ರಕಾರ, ಸುಜಯ್ ಕದಮ್ ಅವರ ಮಗಳು ಫೆಬ್ರವರಿ 4 ರಂದು ತನ್ನ ಸ್ನಾತಕೋತ್ತರ ಪದವಿ ಕೋರ್ಸ್ಗಾಗಿ ಇಟಲಿಯ ಮಿಲನ್ಗೆ ತೆರಳಿದ್ದಳು. ಆದರೆ COVID-19ನಿಂದಾಗಿ ಅವಳ ಕಾಲೇಜು ಮುಚ್ಚಲ್ಪಟ್ಟಿತು.
ಫೆಬ್ರವರಿ 28 ರಂದು ಆಕೆ ಎಲ್ಲವೂ ಸರಿಯಾಗಿದೆ ಎಂದು ತಂದೆಗೆ ಹೇಳಿದ್ದಳು, ನಾಲ್ಕು ತಿಂಗಳ ಕಾಲ ಬಾಡಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಳು. ಆದರೆ ಮಾರ್ಚ್ 10 ರಂದು ಇಟಲಿಯಲ್ಲಿ ಸೂಪರ್ ಮಾರ್ಕೆಟ್ ಸೇರಿದಂತೆ ಎಲ್ಲವೂ ಸ್ಥಗಿತಗೊಂಡಿತ್ತು. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಹದಗೆಟ್ಟಿತು. ನಗರವು ಲಾಕ್ಡೌನ್ ಆಯಿತು. ಇದರಿಂದ ವಿಚಲಿತರಾದ ಸುಜಯ್ ಕದಮ್ ತಮ್ಮ ಮಗಳಿಗೆ ಭಾರತಕ್ಕೆ ಹಿಂತಿರುಗಲು ಹೇಳಿದರು. ಹೇಗಾದರೂ, ಆ ಹೊತ್ತಿಗೆ ಇಟಾಲಿಯನ್ ಸರ್ಕಾರವು ವಾಪಾಸ್ ಹೋಗುವವರಿಂದ ಪ್ರಮಾಣೀಕರಣವನ್ನು ಕೇಳುತ್ತಿತ್ತು ಮತ್ತು ಈ ಔಪಚಾರಿಕತೆಯನ್ನು ಪೂರೈಸದೆ, ಕದಮ್ ಅವರ ಮಗಳಿಗೆ ಭಾರತಕ್ಕೆ ಹಿಂತಿರುಗಲು ಅನುಮತಿ ನಿರಾಕರಿಸಲಾಗಿತ್ತು.
ವಿಚಲಿತರಾದ ತಂದೆ 2020 ರ ಮಾರ್ಚ್ 12 ರಂದು ಇಟಲಿಯ ಭಾರತೀಯ ರಾಯಭಾರ ಕಚೇರಿಗೆ ಎಸ್ಒಎಸ್ ಮೇಲ್ ಕಳುಹಿಸಿದ್ದಾರೆ.
ಆದರೂ ಅವರು ತ್ವರಿತ ಪ್ರತಿಕ್ರಿಯೆಯನ್ನು ನಿರೀಕ್ಷೆ ಮಾಡಿರಲಿಲ್ಲ, ಮಾರ್ಚ್ 13 ರ ರಾತ್ರಿ ಇಟಲಿಯ ಭಾರತೀಯ ರಾಯಭಾರ ಕಚೇರಿಯು ಅವರಿಗೆ ಕರೆ ಮಾಡಿ ನಿಮ್ಮ ಮಗಳು 14 ರಂದು ಭಾರತಕ್ಕೆ ಹಿಂತಿರುಗಲಿದ್ದಾರೆ ಎಂದು ತಿಳಿಸಿದರು. ಈ ಕ್ಷಿಪ್ರ ಸ್ಪಂದನೆ ತಂದೆಯನ್ನು ನಿಜಕ್ಕೂ ಆಶ್ಚರ್ಯಚಕಿತಗೊಳಿಸಿತ್ತು.
“ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಅನೇಕ ವರ್ಷಗಳಿಂದ ಭಾರತ ಸರ್ಕಾರವನ್ನು ದೂಷಿಸುತ್ತಲೇ ಬಂದಿದ್ದೆ. ಬಿಕ್ಕಟ್ಟಿನ ಸಮಯದಲ್ಲಿ ಭಾರತ ಸರ್ಕಾರವು ತಂದೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಈಗ ಅಂತಿಮವಾಗಿ ಕಂಡುಕೊಂಡಿದ್ದೇನೆ” ಎಂದು ಸುಜಯ್ ಕದಮ್ ಹೇಳುತ್ತಾರೆ.
ಅವರ ಮಗಳು ಮಾರ್ಚ್ 15 ರಂದು ಭಾರತಕ್ಕೆ ಮರಳಿದ್ದು, ಪ್ರಸ್ತುತ ಅವರನ್ನು ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ಐಟಿಬಿಪಿ) ಆಸ್ಪತ್ರೆಯಲ್ಲಿ ಕ್ಯಾರೆಂಟೈನ್ ಸೌಲಭ್ಯದಲ್ಲಿ ಇರಿಸಲಾಗಿದೆ.
“ನಾನು ನನ್ನ ಮಗಳ ಏಕೈಕ ಪೋಷಕ ಎಂದು ನಾನು ಭಾವಿಸುತ್ತಿದ್ದೆ. ಆದರೆ ಮೋದಿ ಸರ್ಕಾರವು ನನ್ನ ಮಗಳಿಗೆ ಎರಡನೇ ಪೋಷಕನಾಗಿದೆ ಎಂಬುದನ್ನು ಈಗ ನಾನು ಕಂಡುಕೊಂಡಿದ್ದೇನೆ. ಪ್ರಧಾನ ಮಂತ್ರಿಗೆ ಧನ್ಯವಾದಗಳು … ನಾನು ಅವರಿಗಾಗಿ ಸ್ವಯಂಪ್ರೇರಣೆಯಿಂದ ಕೆಲಸ ಮಾಡುತ್ತೇನೆ” ಎಂದು ಸುಜಯ್ ಕದಮ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.