ನವದೆಹಲಿ: ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಮಾರಣಾಂತಿಕ COVID-19 ಗೆ ಹೋಲಿಸಿದ್ದಕ್ಕಾಗಿ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಎಡಪಂಥೀಯ ಪತ್ರಿಕೆ ಟೆಲಿಗ್ರಾಫ್ಗೆ ಶೋ-ಕಾಸ್ ನೋಟಿಸ್ ನೀಡಿದೆ.
ಮಂಗಳವಾರ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾವು ಮಾರ್ಚ್ 17, 2020 ರಂದು ಪತ್ರಿಕೆಯ ಶೀರ್ಷಿಕೆಯ ಬಗ್ಗೆ ಸುಮೊ ಮೋಟು ಕಾಗ್ನಿಜೆನ್ಸ್ ಅನ್ನು ತೆಗೆದುಕೊಂಡಿದೆ. ಈ ಶೀರ್ಷಿಕೆಯಲ್ಲಿ ಭಾರತದ ರಾಷ್ಟ್ರಪತಿಯನ್ನು ಕೊರೋನವೈರಸ್ ಎಂದು ‘ವಿಡಂಬನಾತ್ಮಕ’ ರೀತಿಯಲ್ಲಿ ನಿರೂಪಿಸಲಾಗಿದೆ. ಈ ರೀತಿಯಾಗಿ ಪತ್ರಿಕೋದ್ಯಮ ನೈತಿಕತೆಯನ್ನು ಉಲ್ಲಂಘಿಸಿದಕ್ಕಾಗಿ ಅಲ್ಟ್ರಾ-ಲೆಫ್ಟ್ ಪತ್ರೆಕೆ ಟೆಲಿಗ್ರಾಫ್ಗೆ ಶೋ-ಕಾಸ್ ನೋಟಿಸ್ ನೀಡಲಾಗಿದೆ.
ದೇಶದ ಪ್ರಥಮ ಪ್ರಜೆಯಾಗಿರುವ ರಾಷ್ಟ್ರಪತಿಯನ್ನು ವಿಡಂಬನಾತ್ಮಕವಾಗಿ ನಿರೂಪಿಸುವುದು, ಅಪಹಾಸ್ಯ ಮಾಡುವುದು ಮತ್ತು ಅವರ ಘನತೆಗೆ ಧಕ್ಕೆ ತರುವುದು ನೈತಕತೆಯಲ್ಲ, ಇದು ಪತ್ರಿಕೋದ್ಯಮಕ್ಕೆ ವಿರುದ್ಧವಾದ ನಡತೆ ಎಂದು ಕೌನ್ಸಿಲ್ ಹೇಳಿದೆ.
ಟೆಲಿಗ್ರಾಫ್ ಮಂಗಳವಾರ, “Kovind, not Covid, did it” ಎಂಬ ಶೀರ್ಷಿಕೆಯನ್ನು ನೀಡಿ ವರದಿ ಪ್ರಕಟಿಸಿದೆ. ಇದು ಭಾರತದ ರಾಷ್ಟ್ರಪತಿ, ದಲಿತ ನಾಯಕರಾದ ರಾಮನಾಥ ಕೋವಿಂದ್ ಅವರನ್ನು ‘ಕೋವಿಡ್ 19’ ಗೆ ಹೋಲಿಸಿದಂತೆ ಮತ್ತು ದಲಿತ ಸಮುದಾಯವನ್ನು ಅವಮಾನಿಸಿದಂತೆ. ಕೋವಿಂದ್ ಅವರ ಬಗ್ಗೆ ಅಸಹ್ಯಕರ ಹೇಳಿಕೆ ನೀಡಿದ್ದಕ್ಕಾಗಿ ಹಲವಾರು ದಲಿತ ಕಾರ್ಯಕರ್ತರು ಪತ್ರಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಲವಾರು ಕಾರ್ಯಕರ್ತರು ಮತ್ತು ಬರಹಗಾರರು ಬೇಷರತ್ತಾಗಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ ಮತ್ತು ಭಾರತದ ರಾಷ್ಟ್ರಪತಿಯಾದ ಎರಡನೇ ದಲಿತ ನಾಯಕ ಕೋವಿಂದ್ ಅವರ ಬಗ್ಗೆ ನಡೆಸಿದ ಅಪಪ್ರಚಾರದ ವಿರುದ್ಧ ನ್ಯಾಯಾಂಗ ಪ್ರಕ್ರಿಯೆ ನಡೆಸಲು ಆಯ್ಕೆಗಳನ್ನು ಅನ್ವೇಷಿಸುವುದಾಗಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.