ನವದೆಹಲಿ: ಸಿಎಎ ವಿರೋಧಿ ಪ್ರತಿಭಟನೆಯ ಹೆಸರಿನಲ್ಲಿ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗೆ ಹಾನಿ ಉಂಟು ಮಾಡಿದ ಗಲಭೆಕೋರರಿಂದ ಆಸ್ತಿ ನಷ್ಟವನ್ನು ಭರಿಸುವ ಮಹತ್ವದ ನಿರ್ಧಾರವನ್ನು ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ತೆಗೆದುಕೊಂಡಿತ್ತು. ಇದೀಗ 6 ಮಂದಿ ಪ್ರತಿಭಟನಾಕಾರರು ಕಾನ್ಪುರ ಆಡಳಿತಕ್ಕೆ ಸುಮಾರು 86 ಸಾವಿರ ಹಣವನ್ನು ಪಾವತಿಸಿದ್ದಾರೆ. ಅವರು ಪಾವತಿಸಲು ಕೇಳಿದ ಒಟ್ಟು ಮೊತ್ತದ ಮೊದಲ ಕಂತು ಇದು ಎಂದು ಮೂಲಗಳು ತಿಳಿಸಿವೆ.
ಸಿಎಎ ವಿರೋಧಿ ಪ್ರತಿಭಟನೆಯ ಹೆಸರಿನಲ್ಲಿ ರಾಜ್ಯದಾದ್ಯಂತ ಗಲಭೆಯಲ್ಲಿ ಭಾಗಿಯಾಗಿದ್ದ ಪ್ರತಿಭಟನಾಕಾರರ ಆಸ್ತಿಗಳಿಗೆ ಮೊಹರು ಹಾಕುವ ಪ್ರಕ್ರಿಯೆಯನ್ನು ಉತ್ತರ ಪ್ರದೇಶ ಸರ್ಕಾರ ಡಿಸೆಂಬರ್ನಲ್ಲಿ ಪ್ರಾರಂಭಿಸಿತ್ತು. ಗಲಭೆಯ ಸಂದರ್ಭದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಪಾಸ್ತಿಗೆ ಹಾನಿಯಾದ ವೆಚ್ಚವನ್ನು ದಂಡದ ರೂಪದಲ್ಲಿ ಪ್ರತಿಭಟನಾಕಾರರಿಂದ ಸಂಗ್ರಹಿಸಲಾಗುವುದು ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಪರಿಣಾಮವಾಗಿ, ಲಕ್ನೋ ಮತ್ತು ಕಾನ್ಪುರದಲ್ಲಿ ಹಲವಾರು ಪ್ರತಿಭಟನಾಕಾರರನ್ನು ಗುರುತಿಸಲಾಯಿತು ಮತ್ತು ಆಡಳಿತವು ಅವರಿಗೆ ನೋಟಿಸ್ ಕಳುಹಿಸಿತು. ಸುಮಾರು, 130 ಗಲಭೆಕೋರರಿಗೆ ರಿಕವರಿ ನೋಟಿಸ್ ನೀಡಲಾಯಿತು ಮತ್ತು ಸುಮಾರು 50 ಲಕ್ಷ ದಂಡವನ್ನು ತೆರುವಂತೆ ಸೂಚಿಸಲಾಯಿತು.
ದಂಗೆಕೋರರು ಮತ್ತು ಜನಸಮೂಹವನ್ನು ಪ್ರಚೋದಿಸಿದ್ದಕ್ಕಾಗಿ ಯುಪಿ ಸರ್ಕಾರವು ಕಾನ್ಪುರದಲ್ಲಿ ಗಲಭೆಕೋರರ ಚಿತ್ರಗಳು ಮತ್ತು ವಿವರಗಳನ್ನು ಹೊಂದಿದ ಹೋರ್ಡಿಂಗ್ಗಳನ್ನು ಹಾಕಿತ್ತು ಮತ್ತು ಒಂದು ತಿಂಗಳ ದಂಡವನ್ನು ಪಾವತಿಸುವಂತೆ ಕೇಳಿಕೊಂಡಿತ್ತು. ಕೆಲವರು ಇದನ್ನು ವಿರೋಧಿಸಿದ್ದರು ಮತ್ತು ಹೈಕೋರ್ಟ್ ಅನ್ನು ಸಂಪರ್ಕಿಸಿದ್ದರು. ತರುವಾಯ, ಯುಪಿ ಸಂಪುಟವು ರಾಜ್ಯದ ಸಾರ್ವಜನಿಕ, ಖಾಸಗಿ ಆಸ್ತಿಗಳಿಗೆ ಹಾನಿಯುಂಟು ಮಾಡಿದವರಿಂದ ಹಾನಿಯಾದ ಮೊತ್ತವನ್ನು ಮರಳಿ ಪಡೆಯುವ ಬಗೆಗಿನ ಸುಗ್ರೀವಾಜ್ಞೆಯನ್ನು ಜಾರಿಗೊಳಿಸಿತು.
ಯಾವುದೇ ಆಯ್ಕೆ ಉಳಿದಿಲ್ಲದ ಕಾರಣ, ದಂಗೆಕೋರರಿಗೆ ಈಗ ದಂಡವನ್ನು ಕಟ್ಟುವುದು ಅನಿವಾರ್ಯವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.