ಭುವನೇಶ್ವರ : ಕೊರೋನಾವೈರಸ್ ಬೆದರಿಕೆಯ ವಿರುದ್ಧ ಹೋರಾಡುವುದು ಇಂದು ದೇಶದ ಆದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯತತ್ಪರಗೊಂಡಿದ್ದಾರೆ. ವೈರಸ್ ಮತ್ತಷ್ಟು ಹರಡದಂತೆ ನೋಡಿಕೊಳ್ಳಲು ತಮ್ಮ ಸಮಯ ಮತ್ತು ಶ್ರಮವನ್ನು ತ್ಯಾಗ ಮಾಡುತ್ತಿರುವ ಅನೇಕರಿದ್ದಾರೆ. ಅಂತಹ ಒಬ್ಬರಲ್ಲಿ ಐಎಎಸ್ ಅಧಿಕಾರಿ ನಿಕುಂಜ ಧಾಲ್ ಕೂಡ ಒಬ್ಬರು. ಅವರು ಒರಿಸ್ಸಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯಾಗಿದ್ದಾರೆ.
ಭುವನೇಶ್ವರದಲ್ಲಿ ಕೆಲಸ ಮಾಡುವ ನಿಕುಂಜ ಧಾಲ್ ಕಳೆದ 2 ತಿಂಗಳಿನಿಂದ ವೈರಸ್ ಹರಡುವಿಕೆಯ ವಿರುದ್ಧ ಹೋರಾಡುವಲ್ಲಿ ನಿರತರಾಗಿದ್ದಾರೆ. ಬೆದರಿಕೆಯನ್ನು ಎದುರಿಸಲು ಒರಿಸ್ಸಾ ಸರ್ಕಾರ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಅಧಿಕಾರಿಗಳೂ ಈ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಇದೇ ಕಾರಣದಿಂದ ಒರಿಸ್ಸಾದ ಒಬ್ಬ ವ್ಯಕ್ತಿಗೂ ಕೂಡ ಇದುವರೆಗೆ COVID19 ಸೋಂಕು ತಗುಲಿಲ್ಲ. ಸರ್ಕಾರಿ ಅಧಿಕಾರಿಗಳ ರಜೆಗಳನ್ನೂ ನವೀನ್ ಪಟ್ನಾಯಕ್ ನೇತೃತ್ವದ ಸರ್ಕಾರವು ನಿನ್ನೆ ರದ್ದುಗೊಳಿಸಿದೆ.
ಆದರೆ 1993ರ ಬ್ಯಾಚ್ ಐಎಎಸ್ ಅಧಿಕಾರಿಯಾಗಿರುವ ನಿಕುಂಜಾ ಅವರ ತಂದೆ ಮೊನ್ನೆ ತೀರಿಕೊಂಡಿದ್ದರು. ಹೀಗಾಗಿ ಅವರಿಗೆ ವೈಯಕ್ತಿಕ ಆಧಾರದ ಮೇಲೆ ರಜೆ ತೆಗೆದುಕೊಳ್ಳುವ ಅವಕಾಶ ಇತ್ತು, ಆದರೆ ಅವರು ರಜೆ ತೆಗೆದುಕೊಳ್ಳಲಿಲ್ಲ, ತಮ್ಮ ತಂದೆಯ ಅಂತಿಮ ವಿಧಿವಿಧಾನಗಳನ್ನು ಪೂರೈಸಿ 24 ಗಂಟೆಗಳ ಒಳಗೆ ಕರ್ತವ್ಯಕ್ಕೆ ಮರಳಿದರು.
ಭಾರಿ ವೈಯಕ್ತಿಕ ನಷ್ಟದ ನಡುವೆಯೂ ಇಂತಹ ಭೀಕರ ಸಂದರ್ಭಗಳಲ್ಲಿ ಐಎಎಸ್ ಅಧಿಕಾರಿಯ ಸಮರ್ಪಣಾ ಭಾವ, ಕರ್ತವ್ಯ ಪ್ರಜ್ಞೆ ಎಲ್ಲರಿಗೂ ಮಾದರಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.