ನವದೆಹಲಿ: ದೆಹಲಿ ಗಲಭೆಯನ್ನು ಪ್ರಚೋದಿಸುವ ಸಲುವಾಗಿಯೇ ಪಾಕಿಸ್ಥಾನದಿಂದ 1000 ಕ್ಕೂ ಹೆಚ್ಚು ಸಾಮಾಜಿಕ ಜಾಲತಾಣ ಖಾತೆಗಳನ್ನು ತೆರೆಯಲಾಗಿತ್ತು ಎಂದು ಭದ್ರತಾ ಸಂಸ್ಥೆಗಳು ಮಂಗಳವಾರ ತಿಳಿಸಿವೆ. ಭದ್ರತಾ ಸಂಸ್ಥೆಗಳು ಹಂಚಿಕೊಂಡ ವಿವರಗಳ ಪ್ರಕಾರ, ಇಸ್ಲಾಮಾಬಾದ್, ಕರಾಚಿ, ರಾವಲ್ಪಿಂಡಿ ಮತ್ತು ಲಾಹೋರ್ನಿಂದ ಖಾತೆಗಳನ್ನು ನಿರ್ವಹಿಸಲಾಗಿತ್ತು ಎಂದು ತಿಳಿದುಬಂದಿದೆ.
ಸುಮಾರು 70ಕ್ಕೂ ಅಧಿಕ ಇಂತಹ ಸಾಮಾಜಿಕ ಜಾಲತಾಣ ಖಾತೆಗಳು ದೆಹಲಿ ಹಿಂಸಾಚಾರದ ಬಗ್ಗೆ ವಿವಿಧ ಹ್ಯಾಶ್ಟ್ಯಾಗ್ಗಳ ಮೂಲಕ ಸರಣಿ ಟ್ವಿಟ್ಗಳನ್ನು ಹಂಚಿಕೊಂಡಿವೆ. #DelhiRiots2020, #DelhiBurning, #ShameonDelhiPolice, #DelhiPoliceTruth ಮತ್ತು and #DelhiPoliceMurders ಎಂಬಿತ್ಯಾದಿ ಹ್ಯಾಶ್ಟ್ಯಾಗ್ಗಳನ್ನು ಇದು ಒಳಗೊಂಡಿತ್ತು.
ದೆಹಲಿ ಗಲಭೆಗಳು ನಡೆದ ಸಮಯವಾದ ಫೆಬ್ರವರಿ 25, 2020 ಮತ್ತು ಮಾರ್ಚ್ 3, 2020ರ ನಡುವೆ ಈ ಟ್ವೀಟ್ಗಳನ್ನು ಹರಿಬಿಡಲಾಗಿದೆ.
ಪಾಕಿಸ್ಥಾನ ಸರ್ಕಾರದ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕವು ಕೆಲವು ಟ್ವೀಟ್ಗಳನ್ನು ಹರಿ ಬಿಡಲಾಗಿದೆ ಎಂದು ವರದಿಯಲ್ಲಿ ಬಹಿರಂಗಪಡಿಸಲಾಗಿದೆ.
ಎರಡು ದಿನಗಳ ಕಾಲ ಈಶಾನ್ಯ ದೆಹಲಿಯಲ್ಲಿ ಕೋಮು ಹಿಂಸಾಚಾರ ಭುಗಿಲೆದ್ದಿತ್ತು. ಕನಿಷ್ಠ 53 ಜನರು ಇದರಲ್ಲಿ ಸಾವನ್ನಪ್ಪಿದರು ಮತ್ತು 200 ಕ್ಕೂ ಹೆಚ್ಚು ಜನರು ಗಾಯಗೊಂಡರು. ಗುಪ್ತಚರ ದಳ (ಐಬಿ) ಸಿಬ್ಬಂದಿ ಅಂಕಿತ್ ಶರ್ಮಾ ಮತ್ತು ಪೊಲೀಸ್ ಮುಖ್ಯಸ್ಥ ಕಾನ್ಸ್ಟೆಬಲ್ ರತ್ತನ್ ಲಾಲ್ ಅವರು ಹಿಂಸಾಚಾರದಲ್ಲಿ ಕೊಲ್ಲಲ್ಪಟ್ಟರು.
ದೆಹಲಿ ಪೊಲೀಸರಿಗೆ ಘಟನೆಗೆ ಸಂಬಂಧಿಸಿದ ಸುಮಾರು 2162 ವಿಡಿಯೋ ತುಣುಕನ್ನು ಪಡೆದಿದ್ದು, ದೆಹಲಿ ಗಲಭೆಯ ಸಂದರ್ಭದಲ್ಲಿ ಬಳಸಿದ 100 ಕ್ಕೂ ಹೆಚ್ಚು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.