ನವದೆಹಲಿ: ಜೆಎನ್ಯು ಕ್ಯಾಂಪಸ್ನೊಳಗಿನ ವೀರ ಸಾವರ್ಕರ್ ಅವರ ಹೆಸರಿನ ರಸ್ತೆಯ ಫಲಕವನ್ನು ಕಿಡಿಗೇಡಿಗಳು ವಿಕಾರಗೊಳಿಸಿದ್ದಾರೆ. ಫಲಕದಲ್ಲಿನ ವಿ.ಡಿ ಸಾವರ್ಕರ್ ಅವರ ಹೆಸರಿಗೆ ಕಪ್ಪು ಬಣ್ಣವನ್ನು ಬಳಿಯಲಾಗಿದೆ ಮತ್ತು ಅದರ ಮೇಲೆ “ಮೊಹಮ್ಮದ್ ಅಲಿ ಜಿನ್ನಾ ಮಾರ್ಗ” ಎಂಬ ಪೋಸ್ಟರ್ ಅನ್ನು ಅಂಟಿಸಲಾಗಿದೆ.
ಈ ಬಗೆಗಿನ ಚಿತ್ರವನ್ನು ಅಂಕಣಕಾರ ಮತ್ತು ದೆಹಲಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಅಭಿನವ್ ಪ್ರಕಾಶ್ ಅವರು ಹಂಚಿಕೊಂಡಿದ್ದು, ಎಡಪಂಥೀಯ ವಿಧ್ವಂಸಕರ ಕೆಲಸ ಎಂದು ಹೇಳಿದ್ದಾರೆ.
JNU-left disrupted renaming of JNU library after Ambedkar. Called Dalits ‘dogs of RSS’. JNU-left vandalised the Savarkar Marg nameplate. They only want names of Jinnah & Iqbal because they fundamentally disagree with existence of India and admire those who balkanised it.
— Abhinav Prakash (@Abhina_Prakash) March 17, 2020
ಜೆಎನ್ಯುಎಸ್ಯು ಅಧ್ಯಕ್ಷರಾಗಿ ಚುನಾಯಿತರಾದ ಆಯಿಷೆ ಘೋಷ್ ಅವರು ಕಳೆದ ರಾತ್ರಿ ವಿರೂಪಗೊಳಿಸಲಾದ ಸೈನ್ ಬೋರ್ಡ್ ಅನ್ನು ಪೋಸ್ಟ್ ಮಾಡಿ, ಇದನ್ನು ‘ಬಿ. ಆರ್. ಅಂಬೇಡ್ಕರ್ ಮಾರ್ಗ’ ಎಂದು ಬದಲಾಯಿಸಲಾಗಿದೆ ಎಂದು ಹೇಳಿಕೊಂಡಿದ್ದರು. “ನಮ್ಮ ಜಾತ್ಯಾತೀತ ಸ್ವರೂಪವನ್ನು ದುರ್ಬಲಗೊಳಿಸಿದ ಬ್ರಿಟಿಷರ ಕ್ಷಮೆಯಾಚಕರು, ಕೈಗೊಂಬೆಗಳನ್ನು ನಾವು ಎಂದಿಗೂ ಸ್ವೀಕರಿಸಲು ಸಾಧ್ಯವಿಲ್ಲ. ನಮ್ಮ ಸಂವಿಧಾನವನ್ನು ನಮಗೆ ನೀಡಿದವರನ್ನು ಗೌರವಿಸೋಣ” ಎಂದು ಅವರು ಫೇಸ್ಬುಕ್ ಪೋಸ್ಟ್ನಲ್ಲಿ ತಿಳಿಸಿದ್ದರು.
ಆದಾಗ್ಯೂ, ನಂತರದಲ್ಲಿ ಬಿ. ಆರ್. ಅಂಬೇಡ್ಕರ್ ಮಾರ್ಗದ ಸಂಕೇತ ಫಲಕವನ್ನು ವಿರೂಪಗೊಳಿಸಲಾಗಿದ್ದು, ಅದನ್ನು ‘ಮೊಹಮ್ಮದ್ ಅಲಿ ಜಿನ್ನಾ ಮಾರ್ಗ’ ಎಂಬ ಪೋಸ್ಟರ್ ಅಂಟಿಸಲಾಗಿದೆ.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಷನ್ (ಐಐಎಂಸಿ) ಕ್ಯಾಂಪಸ್ಗೆ ಹೋಗುವ ರಸ್ತೆಯಲ್ಲಿ ಸಾವರ್ಕರ್ ಹೆಸರಿನ ಸೈನ್ಬೋರ್ಡ್ ಇದೆ.
ಈ ವಿಧ್ವಂಸಕ ಕೃತ್ಯವನ್ನು ಜೆಎನ್ಯು ಶಿಕ್ಷಕರ ಒಕ್ಕೂಟ ಖಂಡಿಸಿದೆ, ಇದು ಅಪರಾಧಿಗಳಿಗೆ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದೆ.
ಕೆಲವು ತಿಂಗಳ ಹಿಂದೆ ಕ್ಯಾಂಪಸ್ನೊಳಗೆ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ವಿಧ್ವಂಸಗೊಳಿಸಲಾಗಿತ್ತು. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.