ನವದೆಹಲಿ: ಐತಿಹಾಸಿಕ ಬೆಳವಣಿಗೆಯೊಂದರಲ್ಲಿ ಜೆಎನ್ಯುನಲ್ಲಿನ ಐಐಎಂಸಿ ಕ್ಯಾಂಪಸ್ಗೆ ಹೋಗುವ ರಸ್ತೆಗೆ ವೀರ್ ಸಾವರ್ಕರ್ ಎಂದು ಹೆಸರಿಡಲಾಗಿದೆ. ‘ವಿಡಿ ಸಾವರ್ಕರ್ ಮಾರ್ಗ’ ಎಂದು ಹೆಸರಿಸಲಾದ ರಸ್ತೆಯು 2019ರ ಜುಲೈನಲ್ಲಿ ಜೆಎನ್ಯು ಕ್ಯಾಂಪಸ್ ಅಭಿವೃದ್ಧಿ ಸಮಿತಿಯು ಮಾಡಿದ ಶಿಫಾರಸ್ಸುಗಳಲ್ಲಿ ಒಂದಾಗಿದೆ.
ಜುಲೈ 2019 ರಲ್ಲಿ, ಜೆಎನ್ಯು ಕ್ಯಾಂಪಸ್ ಅಭಿವೃದ್ಧಿ ಸಮಿತಿಯು ಹಲವಾರು ರಸ್ತೆಗಳಿಗೆ ಹಲವಾರು ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಕಾರ್ಯನಿರ್ವಾಹಕ ಮಂಡಳಿಗೆ (ಇಸಿ) ಶಿಫಾರಸು ಮಾಡಿತ್ತು. ಅವುಗಳೆಂದರೆ
– ಗುರು ರವಿದಾಸ್ ಮಾರ್ಗ
– ವಿ.ಡಿ.ಸಾವರ್ಕರ್ ಮಾರ್ಗ
– ರಾಣಿ ಅಬ್ಬಕ್ಕ ಮಾರ್ಗ
– ಅಬ್ದುಲ್ ಹಮೀದ್ ಮಾರ್ಗ
– ಮಹರ್ಷಿ ವಾಲ್ಮೀಕಿ ಮಾರ್ಗ
– ಗಾರ್ಗಿ ವಾಚಕ್ನವಿ ಮಾರ್ಗ
– ರಾಣಿ ಝಾನ್ಸಿ ಮಾರ್ಗ
– ಮಹರ್ಷಿ ದಯಾನಂದ ಸರಸ್ವತಿ ಮಾರ್ಗ
– ಗೋಪಿನಾಥ್ ಬೋರ್ಡೊಲೊಯ್ ಮಾರ್ಗ
– ವೀರ ಶಿವಾಜಿ ಮಾರ್ಗ
– ಮಹಾರಾಣಾ ಪ್ರತಾಪ್ ಮಾರ್ಗ
– ಸರ್ದಾರ್ ಪಟೇಲ್ ಮಾರ್ಗ
– ಲೋಕಮಾನ್ಯ ತಿಲಕ್ ಮಾರ್ಗ
ಸಮಿತಿಯ ಮೇಲಿನ ಶಿಫಾರಸ್ಸುಗಳನ್ನು ಪರಿಗಣನೆಗೆ ಮತ್ತು ಅನುಮೋದನೆಗಾಗಿ 13 ನವೆಂಬರ್ 2019 ರಂದು ನಡೆದ 283 ನೇ ಕಾರ್ಯಕಾರಿ ಮಂಡಳಿ ಸಭೆಯ ಮುಂದೆ ಇರಿಸಲಾಯಿತು. ಇದನ್ನೇ ಈಗ ಅಂಗೀಕರಿಸಲಾಗಿದೆ.
ಮಾರ್ಕ್ಸ್ವಾದಿ ಇತಿಹಾಸಕಾರರು ವೀರ ಸಾವರ್ಕರ್ ಎಂಬ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರನ್ನು ನಿಂದಿಸುತ್ತಾ ಬಂದಿದ್ದಾರೆ ಅಥವಾ ಅವರ ಅಜೆಂಡಾಗೆ ತಕ್ಕಂತೆ ಸಾವರ್ಕರ್ ಅವರ ವ್ಯಕ್ತಿತ್ವವನ್ನು ತಿರುಚುವ ಕೃತ್ಯ ಎಸಗಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಜೆಎನ್ಯುನ ಎಬಿವಿಪಿ ಪ್ರಯತ್ನದಿಂದಾಗಿ ಹಿಂದಿನ ತಪ್ಪುಗಳನ್ನು ಸರಿಪಡಿಸಲಾಗುತ್ತಿದೆ.
ವೀರ ಸಾವರ್ಕರ್ ಅವರಿಗೆ ಜೆಎನ್ಯುನಲ್ಲಿ ಗೌರವವನ್ನು ನೀಡುವ ಪ್ರಯತ್ನಗಳು ಸುಮಾರು 2 ವರ್ಷಗಳ ಹಿಂದೆಯೇ ಪ್ರಾರಂಭವಾದವು. ಎಬಿವಿಪಿಯು ಇಲ್ಲಿ ವೀರ ಸಾವರ್ಕರ್ ಅವರ ಜೀವನವನ್ನು ಆಧರಿಸಿ ‘ಹೇ ಮೃತುಂಜಯ’ ಎಂಬ ನಾಟಕವನ್ನು ಪ್ರದರ್ಶಿಸಿತ್ತು. ವಿನಾಯಕ್ ದಾಮೋದರ್ ಸಾವರ್ಕರ್ ಬಗ್ಗೆ ಎಡಪಂಥೀಯರು ಹರಡಿದ ತಪ್ಪು ಕಲ್ಪನೆಯನ್ನು ಬದಲಾಯಿಸುವ ಉದ್ದೇಶದಿಂದ ಈ ನಾಟಕ ನಡೆಯಿತು. ವೀರ್ ಸಾವರ್ಕರ್ ಅವರ ಮೊಮ್ಮಗ ರಂಜಿತ್ ಸಾವರ್ಕರ್ ಈ ನಾಟಕದ ಪ್ರದರ್ಶನದ ವೇಳೆ ಉಪಸ್ಥಿತರಿದ್ದರು.
ಅದೇ ಸಮಯದಲ್ಲಿ, ಎಬಿವಿಪಿ ಜೆಎನ್ಯುನಲ್ಲಿ ಸಾವರ್ಕರ್ ಚೇರ್ ಸ್ಥಾಪಿಸಬೇಕು ಮತ್ತು ಅವರ ಸ್ಮರಣಾರ್ಥ ಕ್ಯಾಂಪಸ್ನಲ್ಲಿ ಪ್ರತಿಮೆಯನ್ನು ಸ್ಥಾಪಿಸಬೇಕು ಎಂಬ ನಿರ್ಣಯವನ್ನು ಅಂಗೀಕರಿಸಿತು. ನಿನ್ನೆ, ನಿಖರವಾಗಿ ಒಂದು ವರ್ಷದ ನಂತರ, ಜೆಎನ್ಯುನಲ್ಲಿರುವ ರಸ್ತೆಗೆ ವೀರ ಸಾವರ್ಕರ್ ಹೆಸರಿಡಲಾಗಿದೆ. ಇದು ಜೆಎನ್ಯುನಲ್ಲಿ ವಿದ್ಯಾರ್ಥಿ ಪರಿಷತ್ತಿನ ಸೈದ್ಧಾಂತಿಕ ವಿಜಯವಾಗಿದೆ. ಜೆಎನ್ಯು ಶೀಘ್ರದಲ್ಲೇ ಸಾವರ್ಕರ್ ಚೇರ್ ಮತ್ತು ಪ್ರತಿಮೆಯನ್ನು ನಿರ್ಮಾಣ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.