ನವದೆಹಲಿ: ನೋವೆಲ್ ಕೊರೊನಾವೈರಸ್ ಭೀತಿ ಜನರಲ್ಲಿ ಆವರಿಸಿದೆ. ಇದನ್ನೇ ದುರ್ಬಳಕೆ ಮಾಡಿಕೊಳ್ಳುತ್ತಿರುವ ಕೆಲವರು ಹ್ಯಾಂಡ್ ಸ್ಯಾನಿಟೈಸರ್ ಮತ್ತು ಮುಖಗವಸುಗಳನ್ನು ಅತಿ ಹೆಚ್ಚು ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಬೆಂಗಳೂರಿನ ಹಲವಾರು ಅಂಗಡಿಗಳು ಮತ್ತು ಮೆಡಿಕಲ್ಗಳ ಮೇಲೆ ಕೇಂದ್ರ ಅಪರಾಧ ದಳ ದಾಳಿ ಮಾಡಿದೆ.
“ಸಾರ್ವಜನಿಕರ ದೂರುಗಳ ಮೇರೆಗೆ, ನಾವು ಶನಿವಾರ ನಗರದಾದ್ಯಂತ ಸುಮಾರು 210 ಔಷಧ ಅಂಗಡಿಗಳ ಮೇಲೆ ದಾಳಿ ನಡೆಸಿದ್ದೇವೆ. ಮುಖಗವಸುಗಳನ್ನು ಮತ್ತು ಸ್ಯಾನಿಟೈಸರ್ಗಳನ್ನು ಎರಡು ಅಥವಾ ಮೂರು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದವರ ಸ್ಟಾಕ್ಗಳನ್ನು ವಶಪಡಿಸಿಕೊಂಡಿದ್ದೇವೆ” ಎಂದು ಬೆಂಗಳೂರು ಅಪರಾಧ ವಿಭಾಗದ ಪೊಲೀಸ್ ಆಯುಕ್ತ (ಡಿಸಿಪಿ) ಕುಲದೀಪ್ ಜೈನ್ ಹೇಳಿದ್ದಾರೆ.
ಗರಿಷ್ಠ ಚಿಲ್ಲರೆ ಬೆಲೆ (ಎಂಆರ್ಪಿ) ಗಿಂತ 2-3 ಪಟ್ಟು ಹೆಚ್ಚು ಬೆಲೆಗೆ ಅಗತ್ಯ ವೈದ್ಯಕೀಯ ವಸ್ತುಗಳನ್ನು ಮಾರಾಟ ಮಾಡಿದ ಆರೋಪದ ಮೇಲೆ ಪೊಲೀಸರು ಅನೇಕ ಮೆಡಿಕಲ್ಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ.
“ರಾಜ್ಯದಲ್ಲಿ ಅಥವಾ ಬೆಂಗಳೂರು ನಗರದಲ್ಲಿ ಮಾಸ್ಕ್, ಸ್ಯಾನಿಟೈಸರ್ ತಯಾರಿಸುವ ನಕಲಿ ಘಟಕವು ನಮಗೆ ಕಂಡಿಲ್ಲ, ಆದರೆ ಶೇಖರಣಾ ಸ್ಥಳದಿಂದ ನಕಲಿ ಎಂದು ಶಂಕಿಸಲಾಗಿರುವ ಸುಮಾರು 250 ಬಾಟಲಿ ಸ್ಯಾನಿಟೈಸರ್ಗಳನ್ನು ನಾವು ವಶಪಡಿಸಿಕೊಂಡಿದ್ದೇವೆ. ಬಾಟಲಿಗಳು ಬಳಕೆಗೆ ಯೋಗ್ಯವೇ ಎಂದು ಪರೀಕ್ಷಿಸಲು ನಾವು ಲ್ಯಾಬ್ಗೆ ಕಳುಹಿಸಿದ್ದೇವೆ”ಎಂದು ಜೈನ್ ಹೇಳಿದ್ದಾರೆ.
“ಸ್ಯಾನಿಟೈಸರ್ ದ್ರವ ಬಾಟಲಿಗಳನ್ನು ಅಕ್ರಮವಾಗಿ ಮತ್ತು ಹೆಚ್ಚಿನ ವೆಚ್ಚದಲ್ಲಿ ಮಾರಾಟ ಮಾಡಿದ್ದಕ್ಕಾಗಿ ನಗರದಾದ್ಯಂತ ಐದು ಅಂಗಡಿಗಳನ್ನು ಮುಚ್ಚಲಾಯಿತು” ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.