ನವದೆಹಲಿ: ಕೊರೋನಾವೈರಸ್ ಪೀಡಿತ ಇರಾನ್ನಲ್ಲಿ ಸಿಲುಕಿ ಹಾಕಿಕೊಂಡಿದ್ದ 53 ಭಾರತೀಯರ ನಾಲ್ಕನೇ ಬ್ಯಾಚ್ ದೇಶಕ್ಕೆ ಆಗಮಿಸಿದೆ. 53 ಭಾರತೀಯರಲ್ಲಿ 52 ವಿದ್ಯಾರ್ಥಿಗಳು ಮತ್ತು ಒಬ್ಬರು ಶಿಕ್ಷಕರು. ಇದರೊಂದಿಗೆ ಒಟ್ಟು 389 ಭಾರತೀಯರು ಇರಾನ್ನಿಂದ ಭಾರತಕ್ಕೆ ಮರಳಿದ್ದಾರೆ.
ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಸೋಮವಾರ ಮುಂಜಾನೆ ಈ ಬಗ್ಗೆ ಟ್ವೀಟ್ ಮಾಡಿ, “53 ಭಾರತೀಯರಲ್ಲಿ ನಾಲ್ಕನೇ ಬ್ಯಾಚ್ ಭಾರತಕ್ಕೆ ಆಗಮಿಸಿದೆ. ಈ ಬ್ಯಾಚ್ನಲ್ಲಿ 52 ವಿದ್ಯಾರ್ಥಿಗಳು ಮತ್ತು ಒಬ್ಬ ಶಿಕ್ಷಕ ಇದ್ದಾರೆ. ಇವರನ್ನು ಇರಾನಿನ ಟೆಹ್ರಾನ್ ಮತ್ತು ಶಿರಾಝ್ನಿಂದ ಕರೆ ತರಲಾಗಿದೆ. ಇದರೊಂದಿಗೆ ಒಟ್ಟು 389 ಭಾರತೀಯರು ಭಾರತಕ್ಕೆ ಮರಳಿದ್ದಾರೆ. ಇರಾನಿನ ಅಧಿಕಾರಿಗಳ ಪ್ರಯತ್ನಕ್ಕೆ ಧನ್ಯವಾದಗಳು” ಎಂದಿದ್ದಾರೆ.
ಕಳೆದ ಕೆಲವು ದಿನಗಳಲ್ಲಿ, ಭಾರತವು ಭಾರತೀಯರನ್ನು ಇರಾನ್ನಿಂದ ಸ್ಥಳಾಂತರಿಸುವ ಹಲವಾರು ಕಾರ್ಯಗಳನ್ನು ನಡೆಸಿದೆ. 58 ಪ್ರಜೆಗಳನ್ನು ಒಳಗೊಂಡ ಮೊದಲ ಬ್ಯಾಚ್ ಅನ್ನು ಮಂಗಳವಾರ ಸಿ 17 ಮಿಲಿಟರಿ ಸಾರಿಗೆ ವಿಮಾನದಲ್ಲಿ ಮರಳಿ ತರಲಾಯಿತು ಮತ್ತು ಶುಕ್ರವಾರ 44 ಜನರನ್ನು ಸ್ಥಳಾಂತರಿಸಲಾಯಿತು.
ಕೊರೋನಾವೈರಸ್ ಪೀಡಿತ ದೇಶಗಳಲ್ಲಿ ಇರಾನ್ ಕೂಡ ಒಂದಾಗಿದೆ, ಸಾವಿನ ಸಂಖ್ಯೆ 724ಕ್ಕೆ ಮುಟ್ಟಿದೆ. ಅಲ್ಲಿ ಮಾರಕ ಸೋಂಕಿನ ಪ್ರಕರಣಗಳು 14,000 ಕ್ಕೆ ತಲುಪಿದೆ ಎಂದು ಅಲ್ ಜಜೀರಾ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.