ನವದೆಹಲಿ: ಕೇಂದ್ರ ಸರ್ಕಾರ ಕೊರೋನವೈರಸ್ ಅನ್ನು ವಿಪತ್ತು ಎಂದು ಘೋಷಣೆ ಮಾಡಿದೆ. ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ (ಎಸ್ಡಿಆರ್ಎಫ್) ಅಡಿಯಲ್ಲಿ ನೆರವು ನೀಡುವ ಉದ್ದೇಶದಿಂದ ಈ ಘೋಷಣೆಯನ್ನು ಮಾಡಲಾಗಿದೆ.
ಭಾರತದಲ್ಲಿ ಕರೋನವೈರಸ್ ಅನ್ನು ಅಧಿಸೂಚಿತ ವಿಪತ್ತು ಎಂದು ಪರಿಗಣಿಸಲು ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಶುಕ್ರವಾರ ತಿಳಿಸಿದೆ.
ಕೊರೋನವೈರಸ್ ಕಾರಣದಿಂದಾಗಿ ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರವು 4 ಲಕ್ಷ ರೂಪಾಯಿಗಳ ವಿತ್ತೀಯ ಸಹಾಯವನ್ನು ಒದಗಿಸುತ್ತದೆ. ಪರಿಹಾರ ಕಾರ್ಯಾಚರಣೆಗಳಲ್ಲಿ ತೊಡಗಿರುವವರು ಅಥವಾ ಸ್ಪಂದನಾ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರಿಗೂ ಈ ಮೊತ್ತ ಅನ್ವಯವಾಗಲಿದೆ. ಆದರೆ ಕೊರೋನವೈರಸ್ ನಿಂದಲೇ ಸಾವು ಎಂಬುದು ಸೂಕ್ತ ಪ್ರಾಧಿಕಾರದಿಂದ ಪ್ರಮಾಣೀಕರಿಸುವುದು ಅತ್ಯಗತ್ಯವಾಗಿರುತ್ತದೆ.
ಭಾರತದಲ್ಲಿ ಕರೋನವೈರಸ್ ಪ್ರಕರಣಗಳು 83ಕ್ಕೆ ಏರಿದೆ ಎಂಬುದು ದೃಢಪಟ್ಟಿದೆ, ಇದರಲ್ಲಿ 66 ಭಾರತೀಯ ನಾಗರಿಕರು ಮತ್ತು 17 ವಿದೇಶಿ ಪ್ರಜೆಗಳು ಸೇರಿದ್ದಾರೆ. ಕಳೆದ ಎರಡು ದಿನಗಳಲ್ಲಿ ದೇಶವು ಮೊದಲ ಎರಡು COVID-19 ಸಾವುಗಳನ್ನು ಕಂಡಿದೆ. ಜಾಗತಿಕವಾಗಿ, ಒಟ್ಟು COVID-19 ಪ್ರಕರಣಗಳು 145,857 ಕ್ಕೆ ತಲುಪಿದ್ದು, ಅದರಲ್ಲಿ 5,436 ಜನರು ಸಾವನ್ನಪ್ಪಿದ್ದರೆ, 72,532 ಜನರು ಚೇತರಿಸಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.