ಲಕ್ನೋ : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬುಧವಾರ ಗೋರಖನಾಥ ದೇವಸ್ಥಾನದಲ್ಲಿ ತಮ್ಮ ‘ಜನತಾ ದರ್ಶನ’ದಲ್ಲಿ ಪೋಕ್ಸೊ ಆರೋಪಿಯನ್ನು ಬಂಧನಕ್ಕೊಳಗಾಗುವಂತೆ ಮಾಡಿದ್ದಾರೆ.
ವರದಿಗಳ ಪ್ರಕಾರ, ದೇವಾಲಯ ಸಂಕೀರ್ಣದಲ್ಲಿ ಜನರ ದೂರುಗಳನ್ನು ಮುಖ್ಯಮಂತ್ರಿ ಆಲಿಸುತ್ತಿದ್ದಾಗ ರಾಮ್ ನರೈನ್ ಗುಪ್ತಾ ಎಂಬ ಪೋಸ್ಕೋ ಆರೋಪಿಯು ಅವರ ಬಳಿಗೆ ಬಂದು ಗುಲೆಹ್ರಿಯಾ ಪೊಲೀಸರು ತನಗೆ ಕಿರುಕುಳ ನೀಡುತ್ತಿದ್ದಾರೆಂದು ದೂರು ನೀಡಿದ್ದಾನೆ. ನಾನು ಮನೆ ಖರೀದಿಸಿದ್ದೇನೆ, ಆದರೆ ಮನೆ ಸ್ವಾಧೀನಪಡಿಸಿಕೊಳ್ಳಲು ಪೊಲೀಸರ ಸಹಾಯ ಕೋರಿದಾಗ ಅವರು ನನ್ನ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ ಎಂದು ಆರೋಪಿಸಿದ್ದಾನೆ.
ಗುಪ್ತಾ ತನ್ನ ಕಥೆಯನ್ನು ಮುಖ್ಯಮಂತ್ರಿಗೆ ವಿವರಿಸುತ್ತಿದ್ದಾಗ, ಎರಡನೇ ಸಾಲಿನಲ್ಲಿ ಕುಳಿತಿದ್ದ 12 ಮತ್ತು 6 ವರ್ಷ ವಯಸ್ಸಿನ ಬಾಲಕಿಯರು, ಗುಪ್ತಾ ನಿಜವಾಗಿ ತಮ್ಮ ಮನೆಯನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಮತ್ತು ಅವರ ಹೆಸರಿನಲ್ಲಿ ಬಲವಂತವಾಗಿ ಮನೆಯನ್ನು ನೋಂದಾಯಿಸಿಕೊಂಡಿದ್ದಾರೆ ಎಂದು ಬೊಬ್ಬೆ ಹಾಕಿದ್ದಾರೆ.
ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಪೊಲೀಸ್ ಅಧೀಕ್ಷಕರನ್ನು ಈ ವೇಳೆ ಮುಖ್ಯಮಂತ್ರಿಗಳು ಸ್ಥಳಕ್ಕೆ ಕರೆಸಿದರು, ಈ ವೇಳೆ ರಾಮ್ ನರೈನ್ ಗುಪ್ತಾ ಪೋಸ್ಕೋ ಕಾಯ್ದೆಯಡಿ ಆರೋಪಿ ಎಂದು ತಿಳಿದು ಬಂದಿದೆ.
ಪೋಸ್ಕೋ ಆರೋಪಿಯನ್ನು ಜನತಾ ದರ್ಶನಕ್ಕೆ ಪ್ರವೇಶಿಸಲು ಬಿಟ್ಟವರು ಯಾರು ಎಂದು ಯೋಗಿ ಆದಿತ್ಯನಾಥ ಅವರು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಮಾತ್ರವಲ್ಲದೇ ತಕ್ಷಣವೇ ರಾಮ್ ನರೈನ್ ಅನ್ನು ಬಂಧಿಸುವಂತೆ ಪೊಲೀಸರಿಗೆ ಆದೇಶಿಸಿದ್ದಾರೆ. ಅಲ್ಲದೇ, ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡುವಂತೆ ಪೊಲೀಸರಿಗೆ ಆದೇಶಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.