ಚೆನ್ನೈ: ಕ್ರಿಶ್ಚಿಯನ್ ಮತದ ಪ್ರಚಾರದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಆಗಾಗ ವಿವಾದವನ್ನು ಸೃಷ್ಟಿಸುತ್ತಿರುವ ತಮಿಳುನಾಡಿನ ಐಎಎಸ್ ಅಧಿಕಾರಿ ಉಮಾಶಂಕರ್ ಇದೀಗ ಮತ್ತೊಂದು ವಿವಾದ ಸೃಷ್ಟಿಸಿದ್ದಾನೆ, ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಯೊಬ್ಬನಿಗೆ ಆತನ ರೋಗವನ್ನು ಪ್ರಾರ್ಥನೆ ಮೂಲಕ ಗುಣಪಡಿಸುವುದಾಗಿ ಬೋಧನೆ ಆರಂಭಿಸಿದ ಈತನಿಗೆ ರೋಗಿಯ ಸಂಬಂಧಿಗಳೇ ಗೂಸಾ ನೀಡಲು ಮುಂದಾಗಿದ್ದಾರೆ.
ವರದಿಗಳ ಪ್ರಕಾರ, ಉಮಾಶಂಕರ್ ಮತ್ತು ಆತನ ತಂಡ ಆಸ್ಪತ್ರೆಗೆ ನುಗ್ಗಿ ಕಿಡ್ನಿ ರೋಗಿಗೆ ಜೀಸಸ್ ಹೆಸರಿನಲ್ಲಿ ಬೋಧನೆ ನೀಡಲು ಆರಂಭಿಸಿತ್ತು. ರೋಗಿಯ ಸಂಬಂಧಿಗಳು ಇದರಿಂದ ಕೆರಳಿದ್ದಾರೆ ಮತ್ತು ಇವರ ಕೃತ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯೊಳಗೆ ಇಂತಹ ಚಟುವಟಿಕೆ ನಡೆಸದಂತೆ ಎಚ್ಚರಿಕೆಯನ್ನು ನೀಡಿದ್ದಾರೆ. ಜನರ ಗುಂಪು ಇವರಿಗೆ ಥಳಿಸಲೂ ಮುಂದಾಗಿದೆ. ತಕ್ಷಣವೇ ಆಸ್ಪತ್ರೆಗೆ ಆಗಮಿಸಿದ ಪೊಲೀಸರಿ ಉಮಾಶಂಕರ್ ಮತ್ತು ಇತರರನ್ನು ಅಲ್ಲಿಂದ ಕರೆದುಕೊಂಡು ಹೋಗಿದ್ದಾರೆ.
ರೋಗಿಗಳು ಆಕ್ಷೇಪ ವ್ಯಕ್ತಪಡಿಸಿದರೆ ಇಂತಹ ಕಾರ್ಯಗಳನ್ನು ಮಾಡಬಾರದು ಎಂದು ಈತನ ತಂಡಕ್ಕೆ ಪೊಲೀಸರು ಬುದ್ದಿವಾದ ಹೇಳಿದ್ದಾರೆ. ತನಿಖೆಯ ಸಂದರ್ಭ ಉಮಾಶಂಕರ್ ತನ್ನ ಗುರುತನ್ನು ಬಹಿರಂಗಪಡಿಸಿದ್ದಾನೆ.
ತಮಿಳುನಾಡು ಸರ್ಕಾರ ಈಗಾಗಲೇ ಹಲವಾರು ಬಾರಿ ಈತನಿಗೆ ಎಚ್ಚರಿಕೆಯನ್ನು ನೀಡಿದೆ, ಆದರೂ ಈತ ತುಸು ಹೆದರಿಕೆ ಇಲ್ಲದೆ ತನ್ನ ಪ್ರಚಾರ ಕಾರ್ಯವನ್ನು ನಡೆಸುತ್ತಿದ್ದಾನೆ.
2019ರಲ್ಲಿ ಈತನನ್ನು ಮಧ್ಯಪ್ರದೇಶದ ಚುನಾವಣಾ ಪರಿವೀಕ್ಷಕನಾಗಿ ನೇಮಕ ಮಾಡಲಾಗಿತ್ತು. ಆದರೆ ಈತನ ಮತ ಪ್ರಚಾರ ಅಜೆಂಡಾದ ಕಾರಣದಿಂದಾಗಿ ಅದನ್ನು ವಾಪಾಸ್ ಪಡೆಯಲಾಗಿತ್ತು. DayofLord Jesus ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ಈತ ಧರ್ಮ ಪ್ರಚಾರದ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುತ್ತಾನೆ.
ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಮತಕ್ಕೆ ಮತಾಂತರಗೊಳ್ಳಿ ಎಂಬ ಸಂದೇಶವನ್ನು ಈತ ಯಾವುದೇ ಅಂಜಿಕೆ ಇಲ್ಲದೆ ತಮ್ಮ ಕಾರ್ಯಕ್ರಮಗಳಲ್ಲಿ ನೀಡುತ್ತಿರುತ್ತಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.