ನವದೆಹಲಿ : ವಿದೇಶಗಳಿಂದ ಬಂದಿರುವ ಸುಮಾರು 9 ಲಕ್ಷ ಪ್ರಯಾಣಿಕರನ್ನು ಈಗಾಗಲೆ ಕೊರೋನಾವೈರಸ್ ಸೋಂಕಿನ ಮುಂಜಾಗ್ರತೆಗಾಗಿ ತಪಾಸಣೆಗೊಳಪಡಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವರಾದ ಡಾ. ಹರ್ಷವರ್ಧನ್ ಅವರು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವರು, ನಾವು ಜನವರಿ 18 ರಂದು ಭಾರತದ 7 ವಿಮಾನ ನಿಲ್ದಾಣದಲ್ಲಿ ಸಾರ್ವತ್ರಿಕ ತಪಾಸಣೆಗೆ ಪ್ರಾರಂಭಿಸಿದೆವು. ಇದೀಗ 30 ವಿಮಾನ ನಿಲ್ದಾಣಗಳು ಸ್ಕ್ರೀನಿಂಗ್ಗೊಳಪಟ್ಟಿವೆ. ವಿದೇಶದಿಂದ ಬರುವ ಎಲ್ಲಾ ಪ್ರಯಾಣಿಕರ ತಪಾಸಣೆಯನ್ನೂ ನಡೆಸಲಾಗಿದೆ. ಇದುವರೆಗೆ ವಿಮಾನ ನಿಲ್ದಾಣದಲ್ಲಿ ಒಟ್ಟು 8,74,708 ಪ್ರಯಾಣಿಕರನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಹೇಳಿದ್ದಾರೆ.
ನಾವು ಈಗಾಗಲೇ ದೆಹಲಿ ಸರ್ಕಾರದ ಜೊತೆ ಪ್ರತ್ಯೇಕ ವಾರ್ಡ್ಗಳು, ವೈದ್ಯರ ಲಭ್ಯತೆ, ಸಂಪರ್ಕ ಪತ್ತೆ ಹಚ್ಚುವಿಕೆಯ ಸಾಧನಗಳು ಮತ್ತು ಇಂತಹ ಪ್ರಕರಣಗಳು ಹೆಚ್ಚಾದರೆ ಇನ್ನಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವು ಕುರಿತು ಚರ್ಚೆ ನಡೆಸಿದ್ದೇವೆ ಎಂದು ಹೇಳಿದರು.
ಆದಿತ್ಯವಾರವರೆಗೆ ಕೊರೋನಾ ಸೋಂಕು ಇರುವ ಹೊಸ ನಾಲ್ಕು ಪ್ರಕರಣಗಳು ಪತ್ತೆಯಾಗಿವೆ. ಈ ನಾಲ್ಕು ಪ್ರಕರಣಗಳು ಒಂದು ದೆಹಲಿ, ಉತ್ತರ ಪ್ರದೇಶ, ಕೇರಳ ಮತ್ತು ಜಮ್ಮುವಿನಲ್ಲಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಇಂದು ಸೋಮವಾರದವರೆಗೆ 3000 ತಪಾಸಣೆಗಳಲ್ಲಿ 43 ಪ್ರಕರಣಗಳು ಪಾಸಿಟಿವ್ ಆಗಿದೆ. ಇನ್ನುಳಿದ 2,694 ಮಾದರಿಗಳು ನೆಗೆಟೀವ್ ಎಂದು ವರದಿ ಬಂದಿದೆ. 177 ಜನರು ಆಸ್ಪತ್ರೆಯಲ್ಲಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನೂ 33,599 ಪ್ರಯಾಣಿಕರು ತಪಾಸಣೆಯ ಹಂತದಲ್ಲಿದ್ದಾರೆ. ಅದರಲ್ಲಿ 21,867 ಜನ ಪ್ರಯಾಣಿಕರು ತಮ್ಮ ನಿರೀಕ್ಷಣಾ ಅವಧಿಯನ್ನು ಪೂರ್ತಿಗೊಳಿಸಿದ್ದಾರೆ. ದೇಶದ ಒಟ್ಟು 52 ಲ್ಯಾಬ್ಗಳಲ್ಲಿ ಕೊರೋನಾ ಸೋಂಕಿನ ಪ್ರಕರಣವನ್ನು ಪರೀಕ್ಷೆ ನಡೆಸುತ್ತಿದ್ದಾರೆ. ಇನ್ನು ಹೆಚ್ಚುವರಿ 57 ಲ್ಯಾಬ್ಗಳಲ್ಲಿ ಕೊರೋನಾ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ.
ಈ ಕೊರೋನಾ ಜಾಗೃತಿಯ ಪ್ರಚಾರಕ್ಕಾಗಿ ಎಲ್ಲಾ ಟೆಲಿಕಾಂ ಆಪರೇಟರ್ ಸಂಸ್ಥೆಗಳು ಕಾಲರ್ ಟ್ಯೂನ್ಗಳ ಮೂಲಕ ಇದರ ಬಗ್ಗೆ ಜಾಗೃತಿಯನ್ನು ನಡೆಸಲಾಗುತ್ತಿದೆ. ಒಟ್ಟು ಎಲ್ಲಾ ಟೆಲಿಕಾಂ ಗ್ರಾಹಕರ ಕಾಲರ್ ಟ್ಯೂನ್ಗಳ ಮೂಲಕ 117 ಕೋಟಿ ಜನರಿಗೆ ಜಾಗೃತಿಯನ್ನು ಮುಟ್ಟಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.