ನವದೆಹಲಿ: ಭಾರತದಲ್ಲಿ ಕೊರೋನವೈರಸ್ ಬಗ್ಗೆ ನಾಗರಿಕರಿಗೆ ಅರಿವು ಮೂಡಿಸುವ ಸಲುವಾಗಿ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇದರ ಭಾಗವಾಗಿ, ಸಾಮಾನ್ಯ ರಿಂಗ್ಟೋನ್ ಬದಲಿಗೆ ಕೊರೊನಾವೈರಸ್ ಜಾಗೃತಿ ಸಂದೇಶಗಳನ್ನು ಕಾಲರ್ ಟ್ಯೂನ್ ಆಗಿ ಹಾಕುವಂತೆ ಟೆಲಿಕಾಂ ಇಲಾಖೆ (ಡಿಒಟಿ) ಟೆಲಿಕಾಂ ಆಪರೇಟರ್ಗಳನ್ನು ಸೂಚನೆಯನ್ನು ನೀಡಿದೆ.
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್), ಏರ್ಟೆಲ್ ಮತ್ತು ಜಿಯೋ ತಮ್ಮ ಗ್ರಾಹಕರಿಗೆ ಪ್ರಿ-ಕಾಲರ್ ಜಾಗೃತಿ ಕಾಲರ್ ಟ್ಯೂನ್ ಅನ್ನು ಈಗಾಗಲೇ ನೀಡಿದೆ. ಆದರೆ ಒಂದು ವೇಳೆ ಬಳಕೆದಾರರು ಈಗಾಗಲೇ ಕಾಲರ್ ಟ್ಯೂನ್ಗೆ ಪ್ರತ್ಯೇಕವಾಗಿ ಚಂದಾದಾರರಾಗಿದ್ದರೆ ಈ ಸಂದೇಶವು ಪ್ಲೇ ಆಗುವುದಿಲ್ಲ.
“ಕೊರೋನವೈರಸ್ ಹರಡುವುದನ್ನು” ನೀವು ಹೇಗೆ ನಿಲ್ಲಿಸಬಹುದು ಎಂಬುದನ್ನು ಕಾಲರ್ ಟ್ಯೂನ್ ಸಂದೇಶವು ಪ್ರಾರಂಭಿಸುತ್ತದೆ. “ಕೆಮ್ಮುವಾಗ ಅಥವಾ ಸೀನುವಾಗ ನಿಮ್ಮ ಮುಖವನ್ನು ಕರವಸ್ತ್ರ ಅಥವಾ ಟಿಶುವಿನಿಂದ ಮುಚ್ಚಿಕೊಳ್ಳಿ. ನಿಯಮಿತವಾಗಿ ಕೈಗಳನ್ನು ಸೋಪಿನಿಂದ ಸ್ವಚ್ಛಗೊಳಿಸಿ” ಎಂದು ಹೇಳುತ್ತದೆ. ದೇಶದ ಜನಸಾಮಾನ್ಯರಿಗೆ ಜಾಗೃತಿ ಮೂಡಿಸಲು ಈ ಸಂದೇಶವನ್ನು ಹಿಂದಿಯಲ್ಲಿ ಮತ್ತು ಇಂಗ್ಲೀಷಿನಲ್ಲಿ ಹೇಳಲಾಗುತ್ತದೆ.
“ನಿಮ್ಮ ಮುಖ, ಕಣ್ಣು ಅಥವಾ ಮೂಗನ್ನು ಸ್ಪರ್ಶಿಸುವುದನ್ನು ತಪ್ಪಿಸಿ. ಯಾರಿಗಾದರೂ ಕೆಮ್ಮು, ಜ್ವರ ಅಥವಾ ಉಸಿರಾಟದ ಸಮಸ್ಯೆಯಿದ್ದರೆ ಅವರಿಂದ ಒಂದು ಮೀಟರ್ ದೂರವನ್ನು ಕಾಪಾಡಿಕೊಳ್ಳಿ. ಅಗತ್ಯವಿದ್ದರೆ, ತಕ್ಷಣ ನಿಮ್ಮ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ” ಎಂದು ಸಂದೇಶವು ಹೇಳುತ್ತದೆ. ಸಹಾಯವಾಣಿ ಸಂಖ್ಯೆ +91 -11-23797-8046 ಅನ್ನು ಇದು ನೀಡಿದೆ.
ಕೊರೋನವೈರಸ್ನ ಐದು ಹೊಸ ಪ್ರಕರಣಗಳು ಕೇರಳದಿಂದ ಭಾನುವಾರ ವರದಿಯಾಗಿದ್ದು, ಭಾರತದಲ್ಲಿ ಒಟ್ಟು COVID-19 ಪ್ರಕರಣಗಳ ಸಂಖ್ಯೆ 40ಕ್ಕೆ ಏರಿಕೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.