ನವದೆಹಲಿ: ದೆಹಲಿಯಲ್ಲಿ ಇತ್ತೀಚಿಗೆ ನಡೆದ ಸಿಎಎ ದಂಗೆಯನ್ನು ಒಂದು ಸಮುದಾಯ ನಡೆಸಿದ ದಂಗೆ ಎಂದು ತೋರಿಸಿ ಕೋಮು ಸಾಮರಸ್ಯವನ್ನು ಹದಗೆಡಿಸಲು ಪ್ರಯತ್ನಿಸಿದ ಎರಡು ಮಲಯಾಳಂ ಚಾನೆಲ್ಗಳನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಕೆಲವು ಗಂಟೆಗಳ ಕಾಲ ನಿರ್ಬಂಧಿಸಿತ್ತು. ಇದೀಗ ನಿರ್ಬಂಧ ತೆರವುಗೊಂಡಿದೆ.
ಕೋಮು ಮತ್ತು ರಾಷ್ಟ್ರ ವಿರೋಧಿ ಮನೋಭಾವವನ್ನು ಉತ್ತೇಜಿಸಲು ಪ್ರಯತ್ನಿಸಿದ ಎರಡು ಸ್ಥಳೀಯ ಮಲಯಾಳಂ ಚಾನೆಲ್ಗಳಾದ ಏಷ್ಯಾನೆಟ್ ನ್ಯೂಸ್ ಮತ್ತು ಮೀಡಿಯಾ ಒನ್ ಅನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಕೆಲ ಕಾಲ ನಿರ್ಬಂಧ ಮಾಡಿತ್ತು.
ಏಷ್ಯಾನೆಟ್ ನ್ಯೂಸ್ ಮತ್ತು ಮೀಡಿಯಾ ಒನ್ ದೆಹಲಿ ದಂಗೆಯನ್ನು ಆರ್ ಎಸ್ ಎಸ್ ಮತ್ತು ದೆಹಲಿ ಪೊಲೀಸರೇ ಮಾಡಿದ್ದಾರೆ ಎಂಬಂತೆ ಬಿಂಬಿಸಿತ್ತು. ಸಂಪೂರ್ಣ ಪಕ್ಷಪಾತದಿಂದ ಕೂಡಿದ ವರದಿಯನ್ನು ಅದು ಪ್ರಸಾರ ಮಾಡಿತ್ತು. ಒಂದು ನಿರ್ದಿಷ್ಟ ಸಮುದಾಯದ ಪರವಾಗಿ ವಕಾಲತ್ತು ನಡೆಸಿತ್ತು ಮತ್ತು ಅವರನ್ನು ಅಮಾಯಕರು ಎಂಬಂತೆ ಬಿಂಬಿಸಿ ಹಿಂದೂಫೋಬಿಯಾ ಹಬ್ಬಿಸಿತ್ತು. ಅಷ್ಟೇ ಅಲ್ಲದೇ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸುವವರನ್ನು ಕೆಟ್ಟದಾಗಿ ಅದು ಬಿಂಬಿಸಿತ್ತು. ಈ ಹಿನ್ನಲೆಯಲ್ಲಿ ಸಚಿವಾಲಯದ ಆದೇಶದಂತೆ ಎರಡೂ ಚಾನೆಲ್ಗಳ ಮೇಲೆ ನಿರ್ಬಂಧ ವಿಧಿಸಲಾಗಿತ್ತು.
ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಹೊರಡಿಸಿದ ಆದೇಶದ ಪ್ರಕಾರ, ಜಾಫರಾಬಾದ್ನಲ್ಲಿ ನಡೆದ ಗಲಭೆಗಳ ಬಗ್ಗೆ ಏಷ್ಯಾನೆಟ್ ನ್ಯೂಸ್ ನೀಡಿದ ವರದಿಯು ‘ಒಂದು ಸಮುದಾಯದ ಪರವಾಗಿ ಇತ್ತು’.
ಜಮಾತ್-ಎ-ಇಸ್ಲಾಮಿ ನಡೆಸುತ್ತಿರುವ ಮೀಡಿಯಾ ಒನ್ ಚಾನೆಲ್ ದೆಹಲಿ ಪೊಲೀಸರು ಹಿಂಸಾಚಾರದ ಸಮಯದಲ್ಲಿ ನಿಷ್ಕ್ರಿಯರಾಗಿದ್ದಾರೆ ಎಂದು ಆರೋಪಿಸಿತ್ತು, ಮಾತ್ರವಲ್ಲ ಗಲಭೆಯನ್ನು ಹಿಂದೂಗಳ ಮೇಲೆ ಹಾಕಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.