ಅಜಂಗಢ: ಉತ್ತರ ಪ್ರದೇಶದ ಅಜಂಗಢ ಜಿಲ್ಲೆಯಲ್ಲಿ ವಾಸಿಸುತ್ತಿರುವ ಮುಸ್ಲಿಂ ವ್ಯಕ್ತಿಯೊಬ್ಬರು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ‘ಅಷ್ಟಧಾತು’ (ಎಂಟು ಲೋಹ ಮಿಶ್ರಣ)ವಿನಿಂದ ತಯಾರಿಸಿದ ಪ್ರಾಚೀನ ನಾಣ್ಯವನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿದ್ದಾರೆ.
ಸೈಯದ್ ಮೊಹಮ್ಮದ್ ಇಸ್ಲಾಂ ಅವರು ಈ ಪ್ರಾಚೀನ ನಾಣ್ಯವನ್ನು ಶ್ರೀರಾಮ ಮಂದಿರಕ್ಕೆ ಉಡುಗೊರೆಯಾಗಿ ನೀಡಲಿದ್ದಾರೆ.
ಈ ನಾಣ್ಯದಲ್ಲಿ ಭಗವಾನ್ ರಾಮ, ಸೀತಾ ಮತ್ತು ಅಂಜನೇಯ ದೇವರುಗಳ ಚಿತ್ರವನ್ನು ಕೆತ್ತಲಾಗಿದೆ. ಈ ನಾಣ್ಯದ ಮೌಲ್ಯವು ಹಲವಾರು ಲಕ್ಷ ರೂಪಾಯಿಗಳು ಎಂದು ಅಂದಾಜಿಸಲಾಗಿದೆ.
ಸೀತಾರಾಮ್ ಪ್ರದೇಶದಲ್ಲಿ ವಾಸಿಸುತ್ತಿರುವ ಇಸ್ಲಾಂ ಅವರ ಪ್ರಕಾರ, ಅವರು ಹಳ್ಳಿಯಲ್ಲಿರುವ ತಮ್ಮ ಪೂರ್ವಜರ ಮನೆಯನ್ನು ಪುನರ್ನಿರ್ಮಿಸುವಾಗ ಈ ನಾಣ್ಯವು ಅವರಿಗೆ ಸಿಕ್ಕಿದೆ.
“ನವೆಂಬರ್ 30, 2019 ರಂದು, ಮನೆಯ ಸ್ತಂಭವನ್ನು ಅಗೆಯುತ್ತಿದ್ದಾಗ, ಈ ಎರಡು ನಾಣ್ಯಗಳು ನಮಗೆ ಸಿಕ್ಕಿದವು. ದೇವಾಲಯದ ನಿರ್ಮಾಣಕ್ಕಾಗಿ ಅವುಗಳನ್ನು ಉಡುಗೊರೆಯಾಗಿ ನೀಡಲು ನಾನು ನಿರ್ಧರಿಸಿದೆ. ನಾನು ಶೀಘ್ರದಲ್ಲೇ ಅಯೋಧ್ಯೆಗೆ ಹೋಗುತ್ತೇನೆ ಮತ್ತು ನಾಣ್ಯವನ್ನು ರಾಮ ದೇವಾಲಯವನ್ನು ನಿರ್ಮಿಸುವ ರಾಮ ತೀರ್ಥ ಕ್ಷೇತ್ರ ಕ್ಷೇತ್ರ ಟ್ರಸ್ಟ್ನ ಅಧ್ಯಕ್ಷರಾಗಿರುವ ಮಹಂತ್ ನೃತ್ಯ ಗೋಪಾಲ್ ದಾಸ ಅವರಿಗೆ ಹಸ್ತಾಂತರಿಸುತ್ತೇನೆ” ಎಂದಿದ್ದಾರೆ.
ನಾಣ್ಯವನ್ನು ಮಾರಿ ಮಂದಿರ ನಿರ್ಮಾಣದ ಕಾರ್ಯಕ್ಕೆ ಬಳಸಿಕೊಳ್ಳುವಂತೆ ಮಹಂತ ಅವರಲ್ಲಿ ಮನವಿ ಮಾಡಿಕೊಳ್ಳುವುದಾಗಿ ಇಸ್ಲಾಂ ಹೇಳಿದ್ದಾರೆ.
ದೇವಾಲಯ ನಿರ್ಮಾಣದ ಸಂದರ್ಭದಲ್ಲಿ ಮುಸ್ಲಿಮರು ಇದೇ ರೀತಿ ಕೊಡುಗೆಗಳನ್ನು ನೀಡಿದರೆ ಸಮಾಜದಲ್ಲಿ ಕೋಮು ಸೌಹಾರ್ದತೆ ಮೂಡುತ್ತದೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.