ನವದೆಹಲಿ: ಕೊರೋನವೈರಸ್ ಭೀತಿಯಿಂದಾಗಿ ಭಾರತ ಮತ್ತು ಇರಾನ್ ರಾಷ್ಟ್ರಗಳ ನಡುವಣ ವಿಮಾನ ಹಾರಾಟ ರದ್ದುಗೊಂಡಿದೆ. ಹೀಗಾಗಿ ಅನೇಕ ಇರಾನಿಯರು ಭಾರತದಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ. ಇವರನ್ನು ಶುಕ್ರವಾರ ಭಾರತದಿಂದ ಕರೆದುಕೊಂಡು ಹೋಗುವ ನಿಟ್ಟಿನಲ್ಲಿ ಎಲ್ಲಾ ಕ್ರಮಗಳನ್ನು ಇರಾನ್ ಕೈಗೊಂಡಿದೆ.
ಭಾರತದಲ್ಲಿ ಸಿಲುಕಿರುವ ಇರಾನ್ ಪ್ರಜೆಗಳನ್ನು ಅವರ ದೇಶಕ್ಕೆ ಮರಳಿ ಕರೆದೊಯ್ಯಲು ಇರಾನ್ನಿಂದ ಖಾಲಿ ವಿಮಾನ ಶುಕ್ರವಾರ ಭಾರತಕ್ಕೆ ಬರಲಿದೆ. ಈ ಬಗ್ಗೆ ಇರಾನ್ ಮೂಲಗಳು ಸ್ಪಷ್ಟಪಡಿಸಿವೆ.
ಭಾರತ ಸರ್ಕಾರ ಕೂಡ ತನ್ನ ನೆಲದಲ್ಲಿ ಸಿಲುಕಿರುವ ಇರಾನ್ ನಾಗರಿಕರನ್ನು ಅವರ ದೇಶಕ್ಕೆ ಮರಳಿ ಕಳುಹಿಸಲು ಪ್ರಯತ್ನಿಸುತ್ತಿದೆ. ಮಾತ್ರವಲ್ಲ, ಆ ದೇಶಕ್ಕೆ ಕೊರೋನವೈರಸ್ ವಿರುದ್ಧ ಹೋರಾಡಲು ಸಾಕಷ್ಟು ಸಹಾಯವನ್ನೂ ಮಾಡುತ್ತಿದೆ. ಇರಾನ್ನ ಕೊರೋನ ಪೀಡಿತ ಪ್ರದೇಶಗಳಲ್ಲಿ ಒಂದಾದ ಕೋಮ್ ನಗರದಲ್ಲಿ ಭಾರತೀಯ ವೈದ್ಯಕೀಯ ತಂಡಗಳು ಕ್ಲಿನಿಕ್ ಸ್ಥಾಪಿಸುವ ಪ್ರಕ್ರಿಯೆಯಲ್ಲಿದೆ.
ಟ್ವೀಟ್ನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು, “ಇರಾನಿನ ಅಧಿಕಾರಿಗಳೊಂದಿಗೆ ಮರಳುವ ಸರಕುಗಳ ಮೇಲೆ ಕೆಲಸ ಮಾಡಲಾಗುತ್ತಿದೆ” ಎಂದು ಹೇಳಿದ್ದಾರೆ.
ಇಲ್ಲಿಯವರೆಗೆ, ಇರಾನ್ನಲ್ಲಿ ಕೊರೋನವೈರಸ್ ಸೋಂಕಿಗೆ ಒಳಗಾದ ಭಾರತೀಯರ ಬಗ್ಗೆ ಪ್ರಕರಣಗಳು ಪತ್ತೆಯಾಗಿಲ್ಲ. ಇರಾನಿನಲ್ಲಿ ಸಿಕ್ಕಿಬಿದ್ದ ನಾಗರಿಕರನ್ನು ಸಾಮಾನ್ಯ ನಾಗರಿಕ ವಿಮಾನಯಾನ ಮಾರ್ಗಗಳ ಮೂಲಕ ಮರಳಿ ತರಲು ಭಾರತ ಯೋಜಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.