ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು 15 ಮಂದಿ ಶ್ರೇಷ್ಠ ಕಲಾವಿದರಿಗೆ 61ನೇ ವಾರ್ಷಿಕ ಲಲಿತ ಕಲಾ ಅಕಾಡೆಮಿ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
ಲಲಿತ ಕಲಾ ಅಕಾಡಮಿ ಪ್ರಶಸ್ತಿಯಿಂದ ಗೌರವಿಸಲ್ಪಟ್ಟ ಕಲಾವಿದರೆಂದರೆ- ಅನೂಪ್ ಕುಮಾರ್ ಮಂಜುಖಿ ಗೋಪಿ, ಡೇವಿಡ್ ಮಲಕರ್, ದೇವೇಂದ್ರ ಕುಮಾರ್ ಖರೆ, ದಿನೇಶ್ ಪಾಂಡ್ಯ, ಫಾರೂಕ್ ಅಹ್ಮದ್ ಹಾಲ್ದರ್, ಹರಿ ರಾಮ್ ಕುಂಭಾವತ್, ಕೇಶರಿ ನಂದನ್ ಪ್ರಸಾದ್, ಮೋಹನ್ ಕುಮಾರ್ ಟಿ, ರತನ್ ಕೃಷ್ಣ ಸಹಾ, ಸಾಗರ್ ವಸಂತ್ ಕುಂಬ್ಳೆ, ಸತ್ವಿಂದರ್ ಕೌರ್, ಸುನೀಲ್ ತಿರುವಾಯೂರ್, ತೇಜಸ್ವಿ ನಾರಾಯಣ ಸೋನಾವನೆ, ಯಶ್ಪಾಲ್ ಸಿಂಗ್ ಮತ್ತು ಯಶವಂತ್ ಸಿಂಗ್.
ಈ ಕಲಾವಿದರ ಕಲಾಕೃತಿಗಳು 2020 ರ ಮಾರ್ಚ್ 22 ರವರೆಗೆ ನವದೆಹಲಿಯ ಲಲಿತ ಕಲಾ ಅಕಾಡೆಮಿ ಗ್ಯಾಲರಿಗಳಲ್ಲಿ 61ನೇ ರಾಷ್ಟ್ರೀಯ ಕಲಾಕೃತಿ ಪ್ರದರ್ಶನದಲ್ಲಿ ಪ್ರದರ್ಶನಗೊಳ್ಳಲಿವೆ.
ಲಲಿತ ಕಲಾ ಅಕಾಡೆಮಿ ಕಲೆಯನ್ನು ಉತ್ತೇಜಿಸಲು ಮತ್ತು ಪ್ರತಿಭೆಗಳನ್ನು ಗೌರವಿಸಲು ಪ್ರತಿವರ್ಷ ಕಲಾ ಪ್ರದರ್ಶನ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭಗಳನ್ನು ಆಯೋಜಿಸಲಾಗುತ್ತದೆ. ಪ್ರದರ್ಶನವು ದೇಶಾದ್ಯಂತದ ಅದ್ಭುತ ಕೃತಿಗಳನ್ನು ಒಟ್ಟುಗೂಡಿಸುತ್ತದೆ ಮತ್ತು ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್, ಛಾಯಾಗ್ರಹಣ ಮತ್ತು ಮಲ್ಟಿಮೀಡಿಯಾ ಇತ್ಯಾದಿಗಳಲ್ಲಿ ಹೊಸ ಪ್ರವೃತ್ತಿಗಳು ಮತ್ತು ಮಾಧ್ಯಮಗಳನ್ನು ಕಲಿಯಲು ಉದಯೋನ್ಮುಖ ಕಲಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.