ನವದೆಹಲಿ: ಕೊರೋನವೈರಸ್ ಎಂಬ ಮಹಾಮಾರಿ ಜಗತ್ತನ್ನು ಆತಂಕಕ್ಕೆ ದೂಡಿದೆ. ಈ ಸೋಂಕಿಗೆ ಇದುವರೆಗೆ ಸಾವಿಗೀಡಾದವರ ಸಂಖ್ಯೆ 3,120 ಕ್ಕೆ ತಲುಪಿದೆ ಮತ್ತು 91,000 ಕ್ಕೂ ಹೆಚ್ಚು ಜನರಿಗೆ ಸೋಂಕು ತಗಲಿರುವುದು ಪತ್ತೆಯಾಗಿದೆ. ಭಾರತ, ಯುರೋಪ್, ಇರಾನ್ನಂತಹ ದೇಶಗಳಲ್ಲೂ ವೈರಸ್ ಪತ್ತೆಯಾಗಿದೆ.
ಚೀನಾದ ಬಳಿಕ ಕೊರೋನವೈರಸ್ ಸೋಂಕಿಗೆ ಹೆಚ್ಚು ಬಾಧಿತಗೊಂಡ ದೇಶವೆಂದರೆ ಇರಾನ್. ಅಲ್ಲಿ 66 ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. 54 ಹೆಚ್ಚು ಸಾವಿನ ಪ್ರಕರಣಗಳೊಂದಿಗೆ ಇಟಲಿಯಲ್ಲಿ ಮೂರನೇ ಸ್ಥಾನದಲ್ಲಿದೆ, ದಕ್ಷಿಣ ಕೊರಿಯಾದಲ್ಲಿ 28 ಸಾವುಗಳು ದಾಖಲಾಗಿವೆ.
ಕೊರೋನವೈರಸ್ನ ಕೇಂದ್ರಬಿಂದುವಾಗಿರುವ ಚೀನಾದಲ್ಲಿ ಮಾರ್ಚ್ 3 ರ ವರೆಗೆ 80,151 ಪ್ರಕರಣಗಳು ದಾಖಲಾಗಿವೆ. 2834 ಸಾವುಗಳನ್ನು ವರದಿಯಾಗಿವೆ.
ಭಾರತದಲ್ಲೂ ಕೊರೋನವೈರಸ್ ಪ್ರಕರಣಗಳು ದೆಹಲಿ, ತೆಲಂಗಾಣಗಳಲ್ಲಿ ಪತ್ತೆಯಾಗಿದ್ದು, ಇದು ಜನರಲ್ಲಿ ಆತಂಕವನ್ನು ಸೃಷ್ಟಿಸಿದೆ. ನೊಯ್ಡಾದ ಶಾಲೆಯೊಂದು ಕೊರೋನ ಭೀತಿಗೆ ಶಾಲೆಯನ್ನೇ ಮುಚ್ಚಿದೆ. ದೇಶದುದ್ದಕ್ಕೂ ಜನರಲ್ಲಿ ಕೊರೋನ ಬಗ್ಗೆ ಆತಂಕ ಮೂಡಿದೆ.
ಪ್ರಧಾನಿ ನರೇಂದ್ರ ಮೋದಿಯವರು ಕೊರೋನವೈರಸ್ ಬಗ್ಗೆ ಆತಂಕ ಬೇಡ ಎಂದು ದೇಶದ ಜನತೆಗೆ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಟ್ವೀಟ್ ಮಾಡಿರುವ ಮೋದಿ, “COVID-19 ಕೊರೋನವೈರಸ್ ವಿರುದ್ಧದ ಸನ್ನದ್ಧತೆಯ ಬಗ್ಗೆ ವ್ಯಾಪಕ ವಿಮರ್ಶೆ ನಡೆಸಿದೆ. ಭಾರತಕ್ಕೆ ಆಗಮಿಸುವ ಜನರನ್ನು ಪರೀಕ್ಷಿಸುವುದರಿಂದ ಹಿಡಿದು ತ್ವರಿತ ವೈದ್ಯಕೀಯ ಚಿಕಿತ್ಸೆ ನೀಡುವವರೆಗೆ ವಿವಿಧ ಸಚಿವಾಲಯಗಳು ಮತ್ತು ರಾಜ್ಯಗಳು ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ” ಎಂದಿದ್ದಾರೆ.
”ಭಯಪಡುವ ಅಗತ್ಯವಿಲ್ಲ. ನಾವು ಒಟ್ಟಾಗಿ ಕೆಲಸ ಮಾಡಬೇಕಾಗಿದೆ, ಸ್ವರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಸಣ್ಣ ಮತ್ತು ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳಬೇಕು” ಎಂದಿದ್ದಾರೆ.
Had an extensive review regarding preparedness on the COVID-19 Novel Coronavirus. Different ministries & states are working together, from screening people arriving in India to providing prompt medical attention.
— Narendra Modi (@narendramodi) March 3, 2020
There is no need to panic. We need to work together, take small yet important measures to ensure self-protection. pic.twitter.com/sRRPQlMdtr
— Narendra Modi (@narendramodi) March 3, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.