ನವದೆಹಲಿ: ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ಅಧಿವೇಶನದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಮಹತ್ವಪೂರ್ಣವಾದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಸದನದ ಗೌರವವನ್ನು, ಘನತೆಯನ್ನು ಕಾಪಾಡುವ ನಿಟ್ಟಿನಲ್ಲಿ ಅವರ ನಿರ್ಧಾರ ಮಹತ್ವದ್ದಾಗಿದೆ.
ಸದನದಲ್ಲಿ ಕಲಾಪ ನಡೆಯುವ ವೇಳೆ ಯಾರೊಬ್ಬ ಸದಸ್ಯರು ಕೂಡ ತಮ್ಮ ಸ್ಥಾನವನ್ನು ಬಿಟ್ಟು ಬೇರೊಬ್ಬರ ಆಸನದತ್ತ ತೆರಳುವಂತೆ ಇಲ್ಲ ಮತ್ತು ಭಿತ್ತಿಪತ್ರಗಳು ಅಥವಾ ಘೋಷಣಾ ಫಲಕಗಳನ್ನು ಕೂಡ ಸದಸ್ಯರು ಸದನದ ಒಳಗೆ ತರಬಾರದು ಎಂದು ಅವರು ಎಚ್ಚರಿಸಿದ್ದಾರೆ.
ಈ ಎರಡು ನಿರ್ಧಾರಗಳನ್ನು ಸರ್ವಪಕ್ಷಗಳ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಈ ನಿರ್ಧಾರಗಳಿಗೆ ವಿರುದ್ಧವಾಗಿ ನಡೆದುಕೊಂಡ ಸದಸ್ಯರನ್ನು ಈ ಅಧಿವೇಶನದಿಂದ ಹೊರಗಿಡಲಾಗುತ್ತದೆ ಎಂಬ ಕಟು ಸಂದೇಶವನ್ನು ಅವರು ನೀಡಿದ್ದಾರೆ.
ಸದನದ ಘನತೆಯನ್ನು ಕಾಪಾಡಿಕೊಳ್ಳಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ನಿನ್ನೆಯಿಂದ ಸಂಸತ್ತಿನ ಬಜೆಟ್ ಅಧಿವೇಶನದ ದ್ವಿತೀಯಾರ್ಧ ಆರಂಭಗೊಂಡಿದೆ. ಆದರೆ ಸದನದಲ್ಲಿ ಚರ್ಚೆಗಳ ಬದಲು ಗಲಾಟೆ, ಗದ್ದಲಗಳೇ ನಡೆಯುತ್ತಿದೆ. ದೆಹಲಿ ದಂಗೆ ಸೇರಿದಂತೆ ಅನೇಕ ವಿಷಯಗಳನ್ನು ಹಿಡಿದುಕೊಂಡು ಪ್ರತಪಕ್ಷಗಳು ದೊಡ್ಡ ಮಟ್ಟದ ಗದ್ದಲವನ್ನು ಸೃಷ್ಟಿಸುತ್ತಿವೆ. ಇದರಿಂದಾಗಿ ಕಲಾಪದ ಅವಧಿ ವಿನಾ ಕಾರಣ ವ್ಯರ್ಥವಾಗುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.