ಇಟಾನಗರ: ಡಿಜಿಟಲ್ ಇಂಡಿಯಾ ಕಾರ್ಯಕ್ರಮದಡಿ ಇ-ವಿಧಾನ್ ಯೋಜನೆಯನ್ನು ಅನುಷ್ಠಾನಗೊಳಿಸುವ ಮೂಲಕ ಅರುಣಾಚಲ ಪ್ರದೇಶ ವಿಧಾನಸಭೆಯು ಸೋಮವಾರ ಕಾಗದರಹಿತ ವಿಧಾನಸಭೆಯಾಗಿ ಹೊರಹೊಮ್ಮಿದೆ. ಬಜೆಟ್ ಅಧಿವೇಶನದ ಮೊದಲ ದಿನದಂದು ಬಹುಪಾಲು ಶಾಸಕರು ಸದನದಲ್ಲಿ ತಮಗೆ ಒದಗಿಸಲಾದ ಕಂಪ್ಯೂಟರ್ ಮಾನಿಟರ್ಗಳನ್ನು ಬಳಸಿದರು, ರಾಜ್ಯದಲ್ಲಿ ಮೊದಲ ಬಾರಿಗೆ ಪರಿಚಯಿಸಲಾದ ಹೊಸ ತಂತ್ರಜ್ಞಾನದ ಬಗ್ಗೆ ತಜ್ಞರಿಂದ ಅವರುಗಳು ಮಾಹಿತಿಯನ್ನೂ ಪಡೆದುಕೊಂಡಿದ್ದಾರೆ.
ಇ-ವಿಧಾನ್ ಯೋಜನೆಯ ಅನುಷ್ಠಾನದಿಂದಾಗಿ ಇನ್ನು ಮುಂದೆ ಶಾಸಕರು ಅಸೆಂಬ್ಲಿಗೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯನ್ನೂ ಬೆರಳ ತುದಿಯಲ್ಲಿ ಪಡೆದುಕೊಳ್ಳಬಹುದು, ವ್ಯವಹಾರಗಳ ಪಟ್ಟಿಯನ್ನು ಪರಿಶೀಲಿಸಬಹುದು ಮತ್ತು ತಮ್ಮ ಲ್ಯಾಪ್ಟಾಪ್ಗಳು ಮತ್ತು ಟ್ಯಾಬ್ಲೆಟ್ ಕಂಪ್ಯೂಟರ್ಗಳ ಮೂಲಕ ಸದನ ಪ್ರಕ್ರಿಯೆಗೆ ಸಂಬಂಧಿಸಿದ ಪ್ರಶ್ನೆಗಳು ಮತ್ತು ಇತರ ದಾಖಲೆಗಳನ್ನು ಓದಬಹುದು.
ಸದಸ್ಯರು ತಮ್ಮ ದಕ್ಷತೆಯನ್ನು ಸುಧಾರಿಸಲು ಹೊಸ ಸಾಫ್ಟ್ವೇರ್ ಕುರಿತು ತರಬೇತಿ ಪಡೆಯಬೇಕೆಂದು ಸ್ಪೀಕರ್ ಪಸಾಂಗ್ ಡೋರ್ಜಿ ಸೋನಾ ಮನವಿ ಮಾಡಿದರು. ” ಕಾಗದರಹಿತವಾಗುವ ಮೂಲಕ ಪ್ರಕೃತಿ ಮಾತೆಯನ್ನು ಗೌರವಿಸುವ ಪ್ರಯತ್ನ ಇದಾಗಿದೆ” ಎಂದು ಸ್ಪೀಕರ್ ಹೇಳಿದ್ದಾರೆ.
ಪೇಪರ್ಲೆಸ್ ಅಸೆಂಬ್ಲಿ ಅಥವಾ ಇ-ಅಸೆಂಬ್ಲಿ ಎನ್ನುವುದು ಸದನದ ಪ್ರಕ್ರಿಯೆಗೆ ಅನುಕೂಲವಾಗುವಂತೆ ಎಲೆಕ್ಟ್ರಾನಿಕ್ ಸಾಧನಗಳ ಬಳಕೆಯನ್ನು ಒಳಗೊಂಡಿರುವ ಒಂದು ಪರಿಕಲ್ಪನೆಯಾಗಿದೆ. ಇದು ಸಂಪೂರ್ಣ ಕಾನೂನು ರಚನೆ ಪ್ರಕ್ರಿಯೆಯನ್ನು, ನಿರ್ಧಾರ ತೆಗೆದುಕೊಳ್ಳುವಿಕೆಯನ್ನು, ಮಾಹಿತಿ ಹಂಚಿಕೆಯನ್ನು ಯಾಂತ್ರೀಕೃತಗೊಳಿಸುತ್ತದೆ ಮತ್ತು ಡಿಜಿಟಲೀಕರಣಗೊಳಿಸುತ್ತದೆ.
ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವಾಲಯವು ದೇಶದ ಎಲ್ಲಾ 31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇ-ವಿಧಾನ್ ಅನುಷ್ಠಾನಕ್ಕೆ ‘ನೋಡಲ್ ಸಚಿವಾಲಯ’ ಆಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.