ನವದೆಹಲಿ: “ಸೋನಿಯಾ ಗಾಂಧೀಯವರೇ ದಯವಿಟ್ಟು ನಮಗೆ ‘ರಾಜ ಧರ್ಮ’ದ ಬಗ್ಗೆ ಉಪದೇಶ ನೀಡಬೇಡಿ. ನಿಮ್ಮ ಹಿನ್ನಲೆ ಮತ ಬ್ಯಾಂಕಿಗಾಗಿ ಸಂಪೂರ್ಣ ಉಲ್ಲಂಘನೆಗಳಿಂದ, ತಿರುಚುವಿಕೆಗಳಿಂದ ಕೂಡಿದೆ” ಎನ್ನುವ ಮೂಲಕ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಕಾಂಗ್ರೆಸ್ಸಿಗರಿಗೆ ಟಾಂಗ್ ನೀಡಿದೆ.
ದೆಹಲಿ ಗಲಭೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ನಿಯೋಗ ರಾಷ್ಟ್ರಪತಿಗಳಿಗೆ ಮನವಿಯನ್ನು ನೀಡಿ ‘ರಾಜಧರ್ಮ’ ಪಾಲನೆಗೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ರವಿಶಂಕರ್ ಪ್ರಸಾದ್ ಅವರು, ಪ್ರತಿಪಕ್ಷಗಳು ಕೇಂದ್ರ ಸರ್ಕಾರಕ್ಕೆ ಅದರ ಕರ್ತವ್ಯಗಳ ಬಗ್ಗೆ ಬೋಧನೆಗಳನ್ನು ಮಾಡುವ ಅಗತ್ಯವಿಲ್ಲ, ಆ ಪಕ್ಷದ ಹಿನ್ನಲೆಯೇ ಪ್ರಶ್ನಾರ್ಹವಾಗಿದೆ ಎಂದಿದ್ದಾರೆ.
ಬಿಜೆಪಿಗರು ಪ್ರಚೋದನಾಕಾರಿ ಹೇಳಿಕೆ ನೀಡಿದ ಪರಿಣಾಮ ಹಿಂಸಾಚಾರ ನಡೆದಿದೆ ಎಂಬ ಆರೋಪವನ್ನು ಅಲ್ಲಗೆಳೆದಿರುವ ರವಿಶಂಕರ್ ಅವರು, “ಅಂತಹ ಹೇಳಿಕೆಗಳನ್ನು ನಮ್ಮ ಪಕ್ಷ ಒಪ್ಪುದಿಲ್ಲ. ಅಂತಹ ಹೇಳಿಕೆ ಬಂದಾಗಲೆಲ್ಲಾ ನಾವು ಅದನ್ನು ಖಂಡಿಸಿದ್ದೇವೆ. ಗೃಹ ಸಚಿವರು ಹಿಂಸಾಚಾರ ಭುಗಿಲೆದ್ದ ದಿನದಿಂದಲೇ ಕಾರ್ಯಪ್ರವೃತ್ತಗೊಂಡಿದ್ದರು” ಎಂದಿದ್ದಾರೆ.
“ಇಂತಹ ಸಂದರ್ಭದಲ್ಲಿ ಒಗ್ಗಟ್ಟಾಗಿ ನಿಂತು ಶಾಂತಿ ಸ್ಥಾಪನೆಗೆ ಶ್ರಮಿಸುವ ಅಗತ್ಯವಿದೆ. ಆದರೆ ಕಾಂಗ್ರೆಸ್ ಮಾತ್ರ ಇಂತಹ ಸೂಕ್ಷ್ಮ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.