ನವದೆಹಲಿ: ಬಾಲಕೋಟ್ ವೈಮಾನಿಕ ದಾಳಿ ನಡೆದ ಮರುದಿನ ಭಾರತೀಯ ವಾಯುಸೇನೆಯು ತನ್ನ ಕರ್ತವ್ಯಗಳನ್ನು ವಿವರಿಸುವ ಎರಡು ವಿಡಿಯೋಗಳನ್ನು ಹಂಚಿಕೊಂಡಿದೆ.
ಮೊದಲ ವಿಡಿಯೋದಲ್ಲಿ ವಾಯುಸೇನೆಯು, ತಾನು ಕರ್ತವ್ಯವನ್ನು ನಿರ್ವಹಿಸಲು ಸಮರ್ಥ, ಶಸ್ತ್ರಸಜ್ಜಿತ ಮತ್ತು ಸದಾ ಸನ್ನದ್ಧವಾಗಿರುವುದಾಗಿ ಹೇಳಿಕೊಂಡಿದೆ.
ಎರಡನೇ ವಿಡಿಯೋದಲ್ಲಿ, ವಾಯುಸೇನೆ ತನ್ನನ್ನು ವಿಜಯಶಾಲಿ, ಅಪಾಯಕಾರಿ ಮತ್ತು ವಿಧ್ವಂಸಕ ಎಂದು ಬಣ್ಣಿಸಿದೆ. 2019ರ ಫೆ. 26 ರಂದು ನಡೆದ ಬಾಲಕೋಟ್ ವೈಮಾನಿಕ ದಾಳಿಯಲ್ಲಿ ಜೈಶೇ ಇ ಮೊಹಮ್ಮದ್ ಉಗ್ರ ಸಂಘಟನೆಯ ಮೇಲೆ ಬಾಂಬ್ ದಾಳಿ ನಡೆಸಲು ಬಳಸಲಾದ ಮಿರಾಜ್ ಫೈಟರ್ ವಿಮಾನದ ಬಗ್ಗೆ ವಿವರಿಸಿದೆ.
ಬಿಕ್ಕಟ್ಟಿನ ಸಮಯದಲ್ಲಿ ವಾಯುಸೇನಾ ಫೈಟರ್ ಜೆಟ್ ಪೈಲಟ್ನ ಜೀವನವು ಕೆಲವೇ ಸೆಕೆಂಡುಗಳಲ್ಲಿ ಹೇಗೆ ಬದಲಾಗಬಹುದು ಎಂಬುದನ್ನು ವೀಡಿಯೊ ತೋರಿಸುತ್ತದೆ. ಕರ್ತವ್ಯದ ಕರೆಗೆ ಹೇಗೆ ಉತ್ತರಿಸುತ್ತೀರಿ ಎಂಬುದು ಯುದ್ಧ ಪೈಲಟ್ಗೆ ಅತ್ಯಂತ ಮುಖ್ಯವಾದ ವಿಷಯವಾಗಿರುತ್ತದೆ. ಶತ್ರುಗಳು ಭಾರತದ ಆಕಾಶವನ್ನು ಆಕ್ರಮಿಸದಂತೆ ಮತ್ತು ಅವರ ದುಷ್ಕೃತ್ಯಕ್ಕೆ ತಕ್ಕ ಪಾಠ ಕಲಿಯುವಂತೆ ವಾಯುಸೇನೆ ಮಾಡುತ್ತದೆ. ಕಾರ್ಯಾಚರಣಾ ನಿಯಮಗಳು ಈಗ ಬದಲಾಗಿವೆ ಮತ್ತು ಸೇಡು ತೀರಿಸಿಕೊಳ್ಳಲು ಅಲ್ಲ, ಭಾರತದ ಹೆಮ್ಮೆಗೆ ಧಕ್ಕೆ ತಂದವರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ವಾಯುಸೇನೆ ಬದ್ಧ ಎಂಬುದನ್ನು ವಿಡಿಯೋ ಹೇಳುತ್ತದೆ.
ಭಾರತದ ವಾಯುಸೇನೆ ಜಗತ್ತಿನ ಅತ್ಯಂತ ಶಕ್ತಿಶಾಲಿ ವಾಯುಸೇನೆಗಳಲ್ಲಿ ಒಂದಾಗಿದೆ.
भारतीय वायु सेना – सक्षम, समर्थ एवं सदैव तत्पर l pic.twitter.com/0MsRy8C48Y
— Indian Air Force (@IAF_MCC) February 27, 2020
भारतीय वायु सेना : विजयी -विकराल -विनाशक
जय हिन्द। pic.twitter.com/sIQ3bOIVES
— Indian Air Force (@IAF_MCC) February 27, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.