ನವದೆಹಲಿ: ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಆರೋಪವನ್ನು ಹಾಗೂ ಗುಪ್ತಚರ ಅಧಿಕಾರಿ ಅಂಕಿತ್ ಶರ್ಮಾ ಅವರ ಹತ್ಯೆಯ ಆರೋಪವನ್ನು ಹೊತ್ತಿರುವ ಎಎಪಿ ಪಕ್ಷದ ಕಾರ್ಪೋರೇಟರ್ ಹಾಜಿ ತಾಹೀರ್ ಹುಸೈನ್ ವಿರುದ್ಧ ದೆಹಲಿ ಪೊಲೀಸರು ಪ್ರಕರಣವನ್ನು ದಾಖಲು ಮಾಡಿದ್ದಾರೆ.
ಈತನಿಗೆ ಸೇರಿದ ಫ್ಯಾಕ್ಟರಿಗೆ ಪೊಲೀಸರು ಬೀಗ ಮುದ್ರೆ ಜಡಿದಿದ್ದಾರೆ. ಈ ಫ್ಯಾಕ್ಟರಿಯು ಈಶಾನ್ಯ ದೆಹಲಿಯ ಖಾಜೂರಿ ಖಾಸ್ ಪ್ರದೇಶದಲ್ಲಿ ಇದೆ.
ಈಶಾನ್ಯ ದೆಹಲಿಯ ಚಾಂದ್ ಭಾಗ್ ಪ್ರದೇಶದಲ್ಲಿ ನಡೆದ ಗಲಭೆಗೆ ತಾಹೀರ್ ಕಾರಣ ಎಂಬ ಬಲವಾದ ಆರೋಪಗಳು ಕೇಳಿ ಬಂದಿವೆ. ಈ ಮನೆ ಮೇಲೆ ನಿಂತಿದ್ದ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಮತ್ತು ಕಲ್ಲು ತೂರಾಟಗಳನ್ನು ನಡೆಸಿದ್ದಾರೆ. ಈತನ ಮನೆಯಲ್ಲಿ ಪೆಟ್ರೋಲ್ ಬಾಂಬ್, ಕಲ್ಲುಗಳ ಸಂಗ್ರಹ ಇದ್ದಿದ್ದು ಪತ್ತೆಯಾಗಿದೆ.
ಮೃತ ಐಬಿ ಅಧಿಕಾರಿ ಅಂಕಿತ್ ಶರ್ಮಾ ಅವರ ಸಹೋದರ ಪ್ರತಿಕ್ರಿಯೆಯನ್ನು ನೀಡಿ, “ಎಎಪಿ ಕಾರ್ಪೋರೇಟರ್ ತಾಹೀರ್ ಹುಸೈನ್ ನನ್ನ ಸಹೋದರನ ಹತ್ಯೆಯ ಹಿಂದೆ ಇದ್ದಾನೆ. ಸಿಎಎ ವಿರೋಧಿಗಳು ನನ್ನ ಸಹೋದರನನ್ನು ಮತ್ತು ಇತರ ಮೂವರನ್ನು ತಾಹೀರ್ ಹುಸೈನ್ ಗೆ ಸಂಬಂಧಿಸಿದ ಕಟ್ಟಡದ ಹಿಂದೆ ಕರೆದುಕೊಂಡು ಹೋಗಿದ್ದರು” ಎಂದಿದ್ದಾರೆ.
ಗಲಭೆಯನ್ನು ಸೃಷ್ಟಿಸಲು ತಾಹೀರ್ ಹುಸೈನ್ ಪಿತೂರಿ ನಡೆಸಿದ್ದ ಎಂಬ ಬಲವಾದ ಶಂಕೆಯನ್ನು ಸ್ಥಳಿಯ ಜನರು ವ್ಯಕ್ತಪಡಿಸಿದ್ದಾರೆ. ಈತನ ಮನೆಯ ಮೇಲ್ಛಾವಣಿಯಿಂದ ಜನರು ಕಲ್ಲು ತೂರಾಟ ನಡೆಸುತ್ತಿರುವ ಮತ್ತು ಅವರೊಂದಿಗೆ ತಾಹೀರ್ ಇರುವ ದೃಶ್ಯವನ್ನು ಸ್ಥಳಿಯರು ರೆಕಾರ್ಡ್ ಮಾಡಿಟ್ಟುಕೊಂಡಿದ್ದಾರೆ.
ಎಎಪಿ ಪಕ್ಷ ತಾಹೀರ್ ಹುಸೈನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.