ನವದೆಹಲಿ: ಡೊನಾಲ್ಡ್ ಟ್ರಂಪ್ ಅವರ ಅಧಿಕೃತ ಭಾರತ ಭೇಟಿಯ ಸಂದರ್ಭದಲ್ಲೇ ದೆಹಲಿಯಾದ್ಯಂತ ಹಿಂಸಾಚಾರ ಮತ್ತು ಅರಾಜಕತೆ ಭುಗಿಲೆದ್ದಿದೆ. ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆಯ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಉಂಟಾದ ಗಲಭೆಯಿಂದಾಗಿ ದೆಹಲಿ ಪೊಲೀಸ್ ಕಾನ್ಸ್ಟೆಬಲ್ ಪ್ರಾಣ ಕಳೆದುಕೊಂಡಿದ್ದಾರೆ. ದೆಹಲಿಯ ಗೋಕುಲ್ಪುರಿಯಲ್ಲಿ ಎರಡು ಗುಂಪುಗಳ ನಡುವಿನ ಘರ್ಷಣೆಯ ಸಂದರ್ಭದಲ್ಲಿ ಇನ್ನೊಬ್ಬ ಡಿಸಿಪಿ ಗಾಯಗೊಂಡಿದ್ದಾರೆ.
ಇಂಡಿಯಾ ಟುಡೆ ಮತ್ತು ಆಜ್ ತಕ್ ಪತ್ರಕರ್ತೆ ತನುಶ್ರೀ ಪಾಂಡೆ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ದೆಹಲಿ ಹಿಂಸಾಚಾರದ ವಿಡಿಯೋವನ್ನು ಹಂಚಿಕೊಂಡಿದ್ದಾರೆ, ಅದು ಹಿಂಸಾಚಾರದ ಸ್ವರೂಪದ ಬಗ್ಗೆ ಬೆಳಕು ಚೆಲ್ಲಿದೆ. ವೀಡಿಯೊದಲ್ಲಿ, ಒಬ್ಬ ವ್ಯಕ್ತಿಯು ಹಿನ್ನೆಲೆಯಲ್ಲಿ ‘ಹಿಂದೂ ಕಿ ಗಾಡಿ ಜಲಾ ದಿ, ಹಿಂದೂ ಕಿ ದುಕಾನ್ ಜಲ್ ರಹಾ ಹೈ’ (ಅವರು ಹಿಂದೂ ವಾಹನಗಳನ್ನು ಸುಟ್ಟುಹಾಕಿದ್ದಾರೆ, ಹಿಂದೂ ಅಂಗಡಿಗಳನ್ನು ಸುಡುತ್ತಿದ್ದಾರೆ) ಹೇಳುತ್ತಿದ್ದಾರೆ.
ತನುಶ್ರೀ ಪಾಂಡೆ ವೀಡಿಯೊಗೆ, “ಇದೆಲ್ಲವೂ ರಾಷ್ಟ್ರೀಯ ರಾಜಧಾನಿಯಲ್ಲಿ ನಡೆಯುತ್ತಿದೆ. ನಾನು ಮೌಜ್ಪುರದಲ್ಲಿ ವರದಿ ಮಾಡುತ್ತಿರುವಾಗ ನನ್ನ ಕಣ್ಣುಗಳನ್ನು ನಂಬಲು ನನಗೇ ಸಾಧ್ಯವಾಗಲಿಲ್ಲ ಮತ್ತು ಈ ಎಲ್ಲದಕ್ಕೂ ವಿಡಿಯೋ ಸಾಕ್ಷಿಯಾಗಿದೆ” ಎಂದಿದ್ದಾರೆ.
ಈ ನಡುವೆ, ಪೂರ್ವ ದೆಹಲಿಯ ಭಜನ್ಪುರದಲ್ಲಿ ಪೆಟ್ರೋಲ್ ಪಂಪ್ಗೆ ಬೆಂಕಿ ಹಚ್ಚಲಾಗಿದೆ. ಸಿಎಎ ವಿರೋಧಿ ಇಸ್ಲಾಮಿಕ್ ಮೂಲಭೂತವಾದಿಗಳ ಗಲಭೆಗಳು ಮತ್ತು ಕಲ್ಲು ತೂರಾಟವು ಮುಖ್ಯ ಕಾನ್ಸ್ಟೆಬಲ್ನ ಸಾವಿಗೆ ಕಾರಣವಾಗಿದೆ. ಇಂತಹ ಸಂದರ್ಭದಲ್ಲಿ ಜಾಮಿಯಾದ ವಿದ್ಯಾರ್ಥಿಗಳು ದೆಹಲಿಯಲ್ಲಿ ಪೊಲೀಸ್ ದೌರ್ಜನ್ಯದ ವಿರುದ್ಧ ಪ್ರತಿಭಟನಾ ಮೆರವಣಿಗೆಯನ್ನು ಯೋಜಿಸಿದ್ದಾರೆ.
All this happening in the National Capital. Can’t believe my eyes as I report from ground zero in #Maujpur and witness all this pic.twitter.com/3Uq9Legtpc
— Tanushree Pandey (@TanushreePande) February 24, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.