ನವದೆಹಲಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎರಡು ದಿನಗಳ ಭಾರತ ಪ್ರವಾಸದಲ್ಲಿದ್ದಾರೆ. ಅವರ ಈ ಪ್ರವಾಸ ಉಭಯ ದೇಶಗಳ ನಡುವಣ ಸಂಬಂಧವನ್ನು ವೃದ್ಧಿಸಲಿದೆ, ವ್ಯಾಪಾರ ವಹಿವಾಟನ್ನು ಉತ್ತೇಜಿಸಲಿದೆ. ಟ್ರಂಪ್ ಅವರ ಈ ಭೇಟಿಯನ್ನು ಮಹತ್ವದ ಅವಕಾಶವಾಗಿ ಭಾರತೀಯರು ನೋಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಮಾತ್ರ ಹಾಲಲ್ಲೂ ಕಲ್ಲು ಹುಡುಕುವ ಪ್ರಯತ್ನವನ್ನು ನಡೆಸಿದೆ.
ಕಾಂಗ್ರೆಸ್ ಪಕ್ಷದ ಮುಖವಾಣಿಯಾದ ನ್ಯಾಷನಲ್ ಹೆರಾಲ್ಡ್ ‘ಭಾರತ ಟ್ರಂಪ್ ಭೇಟಿಕೊಟ್ಟ ಏಕೈಕ ಬಡ ರಾಷ್ಟ್ರ’ ಎಂಬ ಶೀರ್ಷಿಕೆಯಲ್ಲಿ ಲೇಖನವನ್ನು ಪ್ರಕಟಿಸಿದೆ. ಭಾರತ ವಿರೋಧಿ, ಹಿಂದೂ ವಿರೋಧಿ ಬರವಣಿಗೆಗಳಿಗೆ ಹೆಸರುವಾಸಿಯಾಗಿರುವ ಆಕಾರ್ ಪಟೇಲ್ ಈ ಲೇಖನವನ್ನು ಬರೆದಿದ್ದಾರೆ.
70 ವರ್ಷಗಳ ಕಾಲ ದೇಶವನ್ನು ಆಳಿದ ಪಕ್ಷವೊಂದು ತನ್ನ ಮುಖವಾಣಿಯಲ್ಲಿ ಭಾರತವನ್ನು ಬಡ ರಾಷ್ಟ್ರ ಎಂದು ಕರೆದಿರುವುದು ನಿಜಕ್ಕೂ ದುರಾದೃಷ್ಟಕರ. ಈ ಲೇಖನಕ್ಕೆ ವ್ಯಾಪಕವಾದ ಟೀಕೆಗಳು ವ್ಯಕ್ತವಾಗಿದೆ.
ಮಾತ್ರವಲ್ಲ, ಈ ಲೇಖನದಲ್ಲಿ ಮೋದಿ ಅವರು ತನ್ನ ಹೆಸರನ್ನು ಹೊಂದಿದ್ದ ಸೂಟ್ ಧರಿಸಿ ಒಬಾಮಗೆ ಚಹಾ ಸರ್ವ್ ಮಾಡಿದ್ದರು ಎಂಬುದಾಗಿ ಬರೆಯಲಾಗಿದೆ.
ಅಲ್ಲದೇ, ಅಮೆರಿಕಾದಲ್ಲಿನ ಭಾರತೀಯರನ್ನು ಒಟ್ಟುಗೂಡಿಸಿ ಟ್ರಂಪ್ ಅವರನ್ನು ಮತ್ತೊಮ್ಮೆ ಜಯಗಳಿಸುವಂತೆ ಮಾಡುವ ಗುರಿಯನ್ನು ಮಾತ್ರ ಈ ಭೇಟಿ ಹೊಂದಿದೆ ಎಂಬುದನ್ನು ಲೇಖನ ಹೇಳಿದೆ.
ಒಟ್ಟಿನಲ್ಲಿ ಅಧಿಕಾರವನ್ನು ಕಳೆದುಕೊಂಡು ಹತಾಶೆಯಲ್ಲಿರುವ ಕಾಂಗ್ರೆಸ್ ಪಕ್ಷ ಭಾರತ ವಿರೋಧಿ ಹೇಳಿಕೆಗಳನ್ನು ನೀಡಿ ಭಾರತೀಯರನ್ನು ಕೆರಳಿಸುವ ಪ್ರಯತ್ನವನ್ನು ನಡೆಸುತ್ತಿದೆ ಎಂಬುದನ್ನು ಈ ಲೇಖನ ಸ್ಪಷ್ಟಪಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.