ನವದೆಹಲಿ: ಫೆಬ್ರವರಿ 23 ರಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ‘ಮನ್ ಕಿ ಬಾತ್’ ರೇಡಿಯೊ ಭಾಷಣದಲ್ಲಿ ತಮ್ಮ ಬಗ್ಗೆ ಉಲ್ಲೇಖ ಮಾಡಿದ್ದನ್ನು ಕಂಡು ಮೊರಾದಾಬಾದ್ನ ಹಮೀರ್ಪುರ ಗ್ರಾಮದ ದಿವ್ಯಾಂಗ ಸಲ್ಮಾನ್ ಅವರ ಸಂತಸಕ್ಕೆ ಪಾರವೇ ಇಲ್ಲ. ಮೋದಿಯವರ ಮಾತು ನನಗೆ ಸ್ಫೂರ್ತಿ ನೀಡುತ್ತದೆ ಎಂದು ಅವರು ಹೇಳುತ್ತಾರೆ.
ಚಪ್ಪಲಿ ಮತ್ತು ಡಿಟರ್ಜೆಂಟ್ ಪೌಡರ್ ತಯಾರಿಸುವ ಕಂಪನಿಯನ್ನು ನಡೆಸುತ್ತಿರುವ ಸಲ್ಮಾನ್ ಅವರು ಕೇವಲ ದಿವ್ಯಾಂಗ ಜನರನ್ನು ಮಾತ್ರ ಕೆಲಸಕ್ಕೆ ನೇಮಿಸಿಕೊಳ್ಳುತ್ತಾರೆ. ತಮ್ಮ ಕಂಪನಿಯಲ್ಲಿ 400 ಕ್ಕೂ ಹೆಚ್ಚು ದಿವ್ಯಾಂಗರನ್ನು ನೇಮಿಸುವ ಗುರಿ ತನಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.
“ಪ್ರಧಾನಿ ನಮ್ಮನ್ನು ಮೆಚ್ಚಿಕೊಂಡಿದ್ದಕ್ಕೆ ನಮಗೆ ತುಂಬಾ ಸಂತೋಷವಾಗಿದೆ. ಉತ್ತಮವಾಗಿ ಕಾರ್ಯನಿರ್ವಹಿಸಲು ನಮ್ಮನ್ನು ಅವರ ಮಾತುಗಳು ಪ್ರೇರಿತಗೊಳಿಸಿದೆ. ನಾವು ಸಾಕಷ್ಟು ತೊಂದರೆಗಳನ್ನು ಎದುರಿಸಿದ್ದೇವೆ, ವಿಶೇಷವಾಗಿ ಕಂಪನಿಯನ್ನು ಪ್ರಾರಂಭಿಸಲು ಹಣಕಾಸಿನ ತೊಂದರೆಗಳನ್ನು ಎದುರಿಸಿದ್ದೇವೆ. ನಮ್ಮ ಡಿಟರ್ಜೆಂಟ್ ಪುಡಿ ಮತ್ತು ಚಪ್ಪಲಿಗಳನ್ನು ತಯಾರಿಸುವ ಕಂಪನಿಯಲ್ಲಿ ಹೆಚ್ಚಿನ ಪ್ರಮಾಣದ ದಿವ್ಯಾಂಗರು ಕೆಲಸ ಮಾಡುತ್ತಿದ್ದಾರೆ” ಎಂದಿದ್ದಾರೆ.
“ನಾನು ಪೋಲಿಯೊಗೆ ಬಲಿಯಾದಾಗ ದುರ್ಬಲಗೊಳ್ಳುತ್ತಾ ಹೋದೆ. ನಂತರ ನನ್ನ ದೌರ್ಬಲ್ಯವನ್ನು ನನ್ನ ಬಲವಾದ ಅಂಶವಾಗಿಸಲು ನಾನು ನಿರ್ಧರಿಸಿದೆ. ನಾನು ಕೆಲಸ ಪಡೆಯಲು ಎರಡು ವರ್ಷಗಳ ಕಾಲ ಸಿದ್ಧತೆ ನಡೆಸಿದೆ. ಆದರೆ ನನಗೆ ಕೆಲಸ ಸಿಗಲಿಲ್ಲ. ಹಾಗಾಗಿ, ನನ್ನ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ನಾನು ಯೋಚಿಸಿದೆ. ನನಗೆ ಸರ್ಕಾರದಿಂದ ಯಾವುದೇ ಸಹಾಯ ದೊರೆಯುತ್ತಿಲ್ಲ. ನಾನು ಹೆಚ್ಚು ದಿವ್ಯಾಂಗ ಜನರನ್ನು ಕೆಲಸಕ್ಕೆ ನೇಮಿಸಿಕೊಳ್ಳುತ್ತೇನೆ. 400-500 ದಿವ್ಯಾಂಗರನ್ನು ನೇಮಿಸಿಕೊಳ್ಳುವ ಗುರಿಯನ್ನು ನಾವು ಹೊಂದಿದ್ದೇವೆ” ಎಂದು ಸಲ್ಮಾನ್ ಹೇಳುತ್ತಾರೆ.
ರೇಡಿಯೋ ಕಾರ್ಯಕ್ರಮದಲ್ಲಿ ಸಲ್ಮಾನ್ ಅವರ ಕಥೆಯನ್ನು ವಿವರಿಸಿದ ಪ್ರಧಾನಿ, “ನಾನು ಖಂಡಿತವಾಗಿಯೂ ನಿಮ್ಮೊಂದಿಗೆ ಒಂದು ಕಥೆಯನ್ನು ಹಂಚಿಕೊಳ್ಳಲು ಬಯಸುತ್ತೇನೆ. ಇದು ಮೊರಾದಾಬಾದ್ನ ಹಮೀರ್ಪುರ ಗ್ರಾಮದಲ್ಲಿ ವಾಸಿಸುವ ಸಲ್ಮಾನ್ ಅವರ ಕಥೆ. ಸಲ್ಮಾನ್ ಹುಟ್ಟಿನಿಂದ ದಿವ್ಯಾಂಗ. ಯುಪಿಯ ಮೊರಾದಾಬಾದ್ನ ಹಮೀರ್ಪುರ ಗ್ರಾಮದಲ್ಲಿ ಅವರು ಚಪ್ಪಲಿ ಮತ್ತು ಡಿಟರ್ಜೆಂಟ್ ತಯಾರಿಸುವ ಕಂಪನಿ ಸ್ಥಾಪಿಸಿದ್ದಾರೆ. ಅವರು 30 ದಿವ್ಯಾಂಗರಿಗೆ ತರಬೇತಿ ಮತ್ತು ಉದ್ಯೋಗ ನೀಡಿದ್ದಾರೆ. ಈ ವರ್ಷ ಇನ್ನೂ 100 ಜನರಿಗೆ ಉದ್ಯೋಗ ನೀಡಲು ಸಲ್ಮಾನ್ ನಿರ್ಧರಿಸಿದ್ದಾರೆ. ಅವರ ಧೈರ್ಯ ಮತ್ತು ಉದ್ಯಮಶೀಲತೆಗೆ ನಾನು ವಂದಿಸುತ್ತೇನೆ” ಎಂದಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.