ನವದೆಹಲಿ: ಸ್ವಯಂ ಘೋಷಿತ ಹೋರಾಟಗಾರ ಯೋಗೇಂದ್ರ ಯಾದವ್ ಹಿಂದೂಗಳು ದೇಶವನ್ನು ಒಡೆಯುತ್ತಿದ್ದಾರೆ ಎನ್ನುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದಾರೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ಯೋಗೇಂದ್ರ ಯಾದವ್ ಅವರು ಹಿಂದಿ, ಹಿಂದೂ ಮತ್ತು ಹಿಂದೂಸ್ಥಾನ್ ರಾಷ್ಟ್ರವನ್ನು ಒಡೆಯುತ್ತಿವೆ ಎಂದಿದ್ದಾರೆ.
”ರಾಷ್ಟ್ರದ ಮುಂಬರುವ ವಿಭಜನೆಗೆ ದೇಶದ ಹಿಂದೂಗಳು ಕಾರಣರಾಗುತ್ತಾರೆ. ಭಾರತವನ್ನು ಹಿಂದಿ, ಹಿಂದೂ ಮತ್ತು ಹಿಂದೂಸ್ಥಾನಗಳಿಂದ ನಿರ್ಮಿಸಲು ಸಾಧ್ಯವಿಲ್ಲ. ವಾಸ್ತವವಾಗಿ, ಹಿಂದಿ, ಹಿಂದೂ ಮತ್ತು ಹಿಂದೂಸ್ಥಾನ್ ದೇಶವನ್ನು ಒಡೆಯುತ್ತವೆ. ಇಂದು, ಇಂತಹ ಪ್ರಯತ್ನಗಳನ್ನು ಮಾಡಲಾಗುತ್ತಿದೆ, ಆದ್ದರಿಂದ ಮಾತೃಭಾಷೆ ಎದ್ದು ನಿಲ್ಲಬೇಕಾಗುತ್ತದೆ, ಪದಗಳನ್ನು ಎತ್ತಿ ಹಿಡಿಯಬೇಕಾಗುತ್ತದೆ” ಎಂದಿದ್ದಾರೆ.
ಯಾದವ್ ಅವರು ಹಿಂದೂ ವಿರೋಧಿ ಹೇಳಿಕೆಯನ್ನು ನೀಡುತ್ತಿರುವುದು ಇದೇ ಮೊದಲಲ್ಲ. ರಾಮ ಮಂದಿರದ ಬಗೆಗಿನ ತೀರ್ಪು ಬಂದಾಗಲೂ ಅವರು ತಮ್ಮ ಹಿಂದೂ ವಿರೋಧಿ ಹೇಳಿಕೆಯನ್ನು ಬಹಿರಂಗಪಡಿಸಿದ್ದರು. ರಾಮ ಮಂದಿರ ಪರವಾದ ತೀರ್ಪು ಮೂಲಭೂತವಾಗಿ ಅಲ್ಪಸಂಖ್ಯಾತ ವಿರೋಧಿ ಮತ್ತು ಭಾರತದ ಜಾತ್ಯತೀತ ರಾಜಕೀಯವನ್ನು ಪರೀಕ್ಷಿಸುತ್ತದೆ ಎಂದು ಪ್ರತಿಪಾದಿಸಿದ್ದರು.
ಯಾದವ್ ಮಾತಿಗೆ ಕಾಂಗ್ರೆಸ್ ಮುಖಂಡ ಶಶಿ ತರೂರ್ ಬೆಂಬಲವನ್ನು ವ್ಯಕ್ತಪಡಿಸಿ ತಮ್ಮ ಹಿಂದೂ ವಿರೋಧಿ ಧೋರಣೆಯನ್ನು ಮತ್ತೊಮ್ಮೆ ಹೊರ ಹಾಕಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.