ನವದೆಹಲಿ: ನ್ಯಾಯಾಂಗದ ಅಡಿಪಾಯವೆಂದು ಪರಿಗಣಿಸಲಾಗಿರುವ ಸತ್ಯ ಮತ್ತು ಸೇವೆಗೆ ಮಹಾತ್ಮ ಗಾಂಧಿಯವರ ಜೀವನ ಸಮರ್ಪಿತಗೊಂಡಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಅಂತರರಾಷ್ಟ್ರೀಯ ನ್ಯಾಯಾಂಗ ಸಮ್ಮೇಳನದಲ್ಲಿ ಮಾತನಾಡಿದ ಪ್ರಧಾನಿ, ”ಈ ಸಂದರ್ಭದಲ್ಲಿ, ಅಭಿವೃದ್ಧಿ ಮತ್ತು ಪರಿಸರದ ನಡುವಿನ ಸಮತೋಲನದ ಗಂಭೀರತೆಯನ್ನು ಅರ್ಥಮಾಡಿಕೊಂಡ ಭಾರತದ ನ್ಯಾಯಾಂಗಕ್ಕೆ ನಾನು ನಿರಂತರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದಿದ್ದಾರೆ.
“ಗೌರವಾನ್ವಿತ ಮಹಾತ್ಮ ಗಾಂಧೀಜಿ ಅವರ ಜೀವನವು ಸತ್ಯ ಮತ್ತು ಸೇವೆಗೆ ಮೀಸಲಾಗಿತ್ತು. ಸತ್ಯ ಮತ್ತು ಸೇವೆಯನ್ನು ನ್ಯಾಯಾಂಗದ ಅಡಿಪಾಯವೆಂದು ಪರಿಗಣಿಸಲಾಗಿದೆ. ಗಾಂಧೀಜಿ ಸ್ವತಃ ಒರ್ವ ನ್ಯಾಯವಾದಿಯಾಗಿದ್ದರು. ನ್ಯಾಯವಾದಿಯಾಗಿ ಅವರು ಹೋರಾಡಿದ ಮೊದಲ ಪ್ರಕರಣದ ಬಗ್ಗೆ ಅವರು ತಮ್ಮ ಆತ್ಮಚರಿತ್ರೆಯಲ್ಲಿ ಬಹಳ ವಿಸ್ತೃತವಾಗಿ ವಿವರಿಸಿದ್ದಾರೆ” ಎಂದಿದ್ದಾರೆ.
ಮಹಾತ್ಮ ಗಾಂಧಿಯವರ 150 ಜನ್ಮ ದಿನಾಚರಣೆಯನ್ನು ರಾಷ್ಟ್ರ ಆಚರಿಸುತ್ತಿರುವ ಹಿನ್ನಲೆಯಲ್ಲಿ ನ್ಯಾಯಾಂಗ ಸಮ್ಮೇಳನ ಭಾರತಕ್ಕೆ ಒಂದು ದೊಡ್ಡ ಕ್ಷಣವಾಗಿದೆ ಎಂದು ಮೋದಿ ಹೇಳಿದ್ದಾರೆ.
“ನಮ್ಮ ದೇಶವು ಮಹಾತ್ಮ ಗಾಂಧಿಯವರ 150 ಜನ್ಮ ದಿನಾಚರಣೆಯನ್ನು ಆಚರಿಸುತ್ತಿರುವಾಗಲೇ ಈ ಸಮ್ಮೇಳನ ನಡೆಯುತ್ತಿರುವುದರಿಂದ ಇದು ಭಾರತಕ್ಕೆ ಒಂದು ದೊಡ್ಡ ಕ್ಷಣವಾಗಿದೆ. ಗಾಂಧೀಜಿ ಅವರಿಗೆ ಪ್ರಕರಣವನ್ನು ಹೋರಾಡಲು ದೊಡ್ಡ ಮಟ್ಟದ ಆಮಿಷಗಳನ್ನೇ ನೀಡಲಾಗುತ್ತಿತ್ತು, ಆದರೆ ಅದನ್ನು ಅವರು ನಿರಾಕರಿಸಿದ್ದರು. ಸತ್ಯವನ್ನು ಎತ್ತಿಹಿಡಿಯುವ ಬಗ್ಗೆ ಗಾಂಧಿ ಸ್ಪಷ್ಟವಾಗಿದ್ದರು, ಸಂಸ್ಕೃತಿ ಮತ್ತು ಭಾರತೀಯ ತತ್ತ್ವಶಾಸ್ತ್ರದಿಂದ ಇದು ಪ್ರೇರಿತಗೊಂಡಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.