ನವದೆಹಲಿ: “100 ಕೋಟಿ ಹಿಂದೂಗಳ ಮೇಲೆ ಪ್ರಾಬಲ್ಯ ಮೆರೆಯಲು 15 ಕೋಟಿ ಮುಸ್ಲಿಮರು ಸಾಕು” ಎಂದು ಹೇಳಿಕೆ ನೀಡಿರುವ ಎಐಎಂಐಎಂ ನಾಯಕ ವಾರಿಸ್ ಪಠಾಣ್ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿಯನ್ನು ನಡೆಸಿದೆ. ಫೆ. 16 ರಂದು ಕಲಬುರ್ಗಿಯಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ಈತ ಈ ಹೇಳಿಕೆ ನೀಡಿದ್ದ.
ಮಾತ್ರವಲ್ಲದೇ, “ನಾವು ಮಹಿಳೆಯರನ್ನಷ್ಟೇ ಮುಂದೆ ಬಿಟ್ಟಿದ್ದೇವೆ ಎಂದು ಇವರು ಹೇಳುತ್ತಿದ್ದಾರೆ. ಆದರೆ ಸಿಂಹಿಣಿಯರು ಮಾತ್ರ ಹೊರಗೆ ಬಂದಿದ್ದಾರೆ, ಇದರಿಂದಲೇ ಅವರು ಬೆವರುತ್ತಿದ್ದಾರೆ. ಇನ್ನು ನಾವು 15 ಕೋಟಿ ಜನ ಹೊರಗೆ ಬಂದರೆ ಏನಾಗಬಹುದು ಯೋಚಿಸಿ” ಎಂದಿದ್ದಾನೆ.
ಈ ಘಟನೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಮುಖಂಡ ಗಿರಿರಾಜ್ ಸಿಂಗ್ ಅವರು, “ಕಾಂಗ್ರೆಸ್, ಆರ್ಜೆಡಿ ಮತ್ತು ತುಕ್ಡೇ ತುಕ್ಡೇ ಗ್ಯಾಂಗ್ ಭಾರತವನ್ನು ಪಾಕಿಸ್ಥಾನವಾಗಿ ಪರಿವರ್ತಿಸಲು ಬಯಸುತ್ತಿದೆಯೇ?” ಎಂದು ಪ್ರಶ್ನಿಸಿದ್ದಾರೆ.
“ಭಾರತದಲ್ಲಿ ಇಂತಹ ಬೆದರಿಕೆಗಳು ನಡೆಯುವುದಿಲ್ಲ. ನೀವು ಔರಂಗಜೇಬನ ಜಗತ್ತಿನಿಂದ ಹೊರಬರಬೇಕು. 1947 ರಿಂದಲೇ ಎಲ್ಲಾ ತರನಾದ ಸ್ವಾತಂತ್ರ್ಯ ನಿಮಗೆ ಸಿಕ್ಕಿಲ್ಲವೇ, ಇನ್ನು ಎಂತಹ ಸ್ವಾತಂತ್ರ್ಯ ನಿಮಗೆ ಬೇಕು” ಎಂದು ಬಿಜೆಪಿ ಪ್ರಶ್ನೆ ಮಾಡಿದೆ.
ವಾರಿಸ್ ಪಠಾಣ್ ಹೇಳಿಕೆಗೆ ದೇಶವ್ಯಾಪಿಯಾಗಿ ತೀವ್ರ ಖಂಡನೆಗಳು ವ್ಯಕ್ತವಾಗುತ್ತಿದೆ.
#WATCH AIMIM leader Waris Pathan: …They tell us that we’ve kept our women in the front – only the lionesses have come out&you’re already sweating. You can understand what would happen if all of us come together. 15 cr hain magar 100 ke upar bhaari hain, ye yaad rakh lena.(15.2) pic.twitter.com/KO8kqHm6Kg
— ANI (@ANI) February 20, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.