ನವದೆಹಲಿ: ದೇಶದಾದ್ಯಂತ ಇಂದು ಮಹಾ ಶಿವರಾತ್ರಿ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಸಮಸ್ತ ಜನತೆ ಶಿವನಾಮ ಸ್ಮರಣೆಯಲ್ಲಿ ತಲ್ಲೀನರಾಗಿದ್ದಾರೆ. ಅಜ್ಞಾನದ ಕತ್ತಲನ್ನು ದೂರಮಾಡಿ ಸುಜ್ಞಾನ ಮೂಡಿಸುವ ರಾತ್ರಿಯಾಗಿ ಶಿವರಾತ್ರಿಯನ್ನು ಆಚರಿಲಾಗುತ್ತಿದೆ.
ಶಿವರಾತ್ರಿಯ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ದೇಶದ ಜನತೆಗೆ ಶುಭ ಹಾರೈಸಿದ್ದಾರೆ.
”ಮಹಾಶಿವರಾತ್ರಿಯಂದು ಎಲ್ಲಾ ನಾಗರಿಕರಿಗೆ ಶುಭಾಶಯಗಳು. ಶಿವನ ಆಶೀರ್ವಾದ ಎಲ್ಲರ ಜೀವನಕ್ಕೆ ಶಾಂತಿ, ಸಂತೋಷ ಮತ್ತು ಸಮೃದ್ಧಿಯನ್ನು ತರಲಿ” ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವಿಟ್ ಮಾಡಿದ್ದಾರೆ.
महाशिवरात्रि के शुभ अवसर पर सभी देशवासियों को बधाई और शुभकामनाएं। मेरी कामना है कि भगवान शिव का आशीर्वाद सभी के जीवन में सुख, शांति और समृद्धि लाए — राष्ट्रपति कोविन्द
— President of India (@rashtrapatibhvn) February 21, 2020
ಟ್ವಿಟ್ ಮಾಡಿರುವ ಮೋದಿ, “ನಿಮಗೆಲ್ಲರಿಗೂ ಶಿವರಾತ್ರಿ ಹಬ್ಬದ ಶುಭಾಶಯಗಳು. ಬಾಬಾ ಭೋಲೆನಾಥನ ಆಶೀರ್ವಾದ ಎಲ್ಲಾ ದೇಶವಾಸಿಗಳ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ ಮತ್ತು ಸೌಭಾಗ್ಯವನ್ನು ತರಲಿ. ಓಂ ನಮಃ ಶಿವಾಯ” ಎಂದಿದ್ದಾರೆ.
आप सभी को महाशिवरात्रि की हार्दिक शुभकामनाएं। बाबा भोलेनाथ के आशीर्वाद से सभी देशवासियों के जीवन में सुख, शांति, समृद्धि और सौभाग्य आए। ऊँ नम: शिवाय!
— Narendra Modi (@narendramodi) February 21, 2020
ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಟ್ವಿಟ್ ಮಾಡಿ, “ಶಿವರಾತ್ರಿಯ ಪವಿತ್ರ ದಿನದಂದು ದೇಶದ ಎಲ್ಲಾ ನಿವಾಸಿಗಳಿಗೂ ಹಾರ್ದಿಕ ಶುಭಕಾಮನೆಗಳು. ಮಹಾದೇವನಲ್ಲಿ ಭಾರತದ ನಿರಂತರ ಸಂತೋಷಕ್ಕಾಗಿ ಪ್ರಾರ್ಥಿಸುತ್ತೇನೆ. ಹರ ಹರ ಮಹಾದೇವ” ಎಂದಿದ್ದಾರೆ.
महाशिवरात्रि के पावन अवसर पर समस्त देशवासियों को हार्दिक शुभकामनाएं।
महादेव से भारत की निरंतर खुशहाली की प्रार्थना करता हूँ।
हर हर महादेव pic.twitter.com/FE881R8dh6
— Amit Shah (@AmitShah) February 21, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.