ಮುಂಬಯಿ: ತೀವ್ರಗಾಮಿತ್ವ ಮತ್ತು ಹವಮಾನ ವೈಪರೀತ್ಯದಂತಹ ಸಮಸ್ಯೆಗಳು ವಿಶ್ವದ ಶಾಂತಿಗೆ ಭಂಗವನ್ನು ತರುತ್ತಿದೆ. ಆದರೆ ಇದಕ್ಕೆ ಪರಿಹಾರವು ಭಾರತದ ಬಳಿ ಮಾತ್ರ ಇದೆ, ಏಕೆಂದರೆ ಸಮಗ್ರವಾಗಿ ಯೋಚಿಸಲು ಮತ್ತು ಈ ಸಮಸ್ಯೆಗಳನ್ನು ಪರಿಹರಿಸಲು ಅನುಭವವನ್ನು ಭಾರತ ಪಡೆದುಕೊಂಡಿದೆ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಗುರುವಾರ ಹೇಳಿದ್ದಾರೆ.
”ಜಗತ್ತು ಭಾರತಕ್ಕಾಗಿ ಕಾಯುತ್ತಿದೆ, ಆದ್ದರಿಂದ ಭಾರತವು ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಬೇಕಿದೆ” ಎಂದು ಅವರು ಹೇಳಿದ್ದಾರೆ.
ಮುಂಬಯಿಯಲ್ಲಿ ಆರ್ಎಸ್ಎಸ್ ಆಯೋಜಿಸಿದ್ದ ‘ಮೆಟ್ರೋಪಾಲಿಟನ್ ಮೀಟಿಂಗ್’ ಅನ್ನು ಉದ್ದೇಶಿಸಿ ಮಾತನಾಡಿದ ಭಾಗವತ್, ”ಭಾರತವು ಉನ್ನತ ಸ್ಥಾನವನ್ನು ಪಡೆದಾಗಲೆಲ್ಲಾ ಅದು ಜಗತ್ತಿಗೆ ಪ್ರಯೋಜನವನ್ನು ನೀಡಿದೆ” ಎಂದು ಹೇಳಿದ್ದಾರೆ.
“ತೀವ್ರಗಾಮಿತನ, ಪರಿಸರದ ತೊಂದರೆಗಳು ಮತ್ತು ತಾನೇ ಸರಿ ಎಂಬ ನಂಬಿಕೆ ವಿಶ್ವದ ಶಾಂತಿಗೆ ಭಂಗ ತರುವ ಮೂಲ ಸಮಸ್ಯೆಗಳು” ಎಂದು ಅವರು ಹೇಳಿದ್ದಾರೆ.
ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಮಗ್ರವಾಗಿ ಯೋಚಿಸುವ ಅನುಭವ ಭಾರತಕ್ಕೆ ಮಾತ್ರ ಸಿಕ್ಕಿದೆ ಎಂದು ಭಾಗವತ್ ಹೇಳಿದರು. “ಜಗತ್ತು ಭಾರತಕ್ಕಾಗಿ ಕಾಯುತ್ತಿದೆ, ಆದ್ದರಿಂದ ಭಾರತವು ದೊಡ್ಡ ರಾಷ್ಟ್ರವಾಗಬೇಕಾಗಿದೆ” ಎಂದರು.
ಆರ್ಎಸ್ಎಸ್ ಸದಸ್ಯರಿಗೆ ತಮ್ಮ ಜಾತಿ, ಭಾಷೆ, ಧರ್ಮ ಅಥವಾ ಪ್ರದೇಶವನ್ನು ಲೆಕ್ಕಿಸದೆ ಜನರೊಂದಿಗೆ ಸಂಪರ್ಕ ಸಾಧಿಸುವಂತೆ ಕರೆ ನೀಡಿದ ಭಾಗವತ್, ‘ವಾಸುದೈವ ಕುಟುಂಬಕಂ’ (ಜಗತ್ತು ಒಂದು ಕುಟುಂಬ) ಎಂಬ ತತ್ತ್ವದ ಮೇಲೆ ಎಲ್ಲರನ್ನು ಒಂದೇ ದಾರದಿಂದ ಜೋಡಿಸುವುದು ಭಾರತದ ವಿಶಿಷ್ಟ ಲಕ್ಷಣವಾಗಿದೆ” ಎಂದು ಹೇಳಿದರು.
“ನಾವು ಒಬ್ಬರಿಗೊಬ್ಬರು ಎಂಬಂತೆ ಬದುಕುತ್ತೇವೆ, ನಮಗಾಗಿ ಅಲ್ಲ” ಎಂದು ಅವರು ಹೇಳಿದರು.
“ಜಗತ್ತು ನಮ್ಮನ್ನು ರೂಪಿಸಿದೆ ಎಂದು ನಾವು ನಂಬುತ್ತೇವೆ ಮತ್ತು ಜಗತ್ತಿಗೆ ನಾವು ನಮ್ಮ ಕೈಲಾದುದನ್ನು ಮರಳಿ ನೀಡಬೇಕು ಎಂಬ ಆಶಯ ನಮ್ಮದಾಗಬೇಕು, ನಾವು ಜಗತ್ತನ್ನು ಕೃತಜ್ಞತೆಯಿಂದ ನೋಡಬೇಕು” ಎಂದು ಭಾಗವತ್ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.