ನವದೆಹಲಿ: ಹುತಾತ್ಮ ಮೇಜರ್ ವಿಭೂತಿ ಧೌಂಡಿಯಾಲ್ ಅವರ ಪತ್ನಿ ನಿಖಿತಾ ಕೌಲ್ ಧೌಂಡಿಯಾಲ್ ಅವರು ಸೇನೆಗೆ ಸೇರಲು ಸಜ್ಜಾಗಿದ್ದಾರೆ. ಈಗಾಗಲೇ ಅವರು ಶಾರ್ಟ್ ಸರ್ವಿಸ್ ಕಮಿಷನ್ (ಎಸ್ಎಸ್ಸಿ) ಪರೀಕ್ಷೆ ಮತ್ತು ಸಂದರ್ಶನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಹೀಗಾಗಿ ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಿ ಸೇರಲು ಅವರ ಹಾದಿ ಸುಗಮಗೊಂಡಿದೆ.
ಪುಲ್ವಾಮ ಭಯೋತ್ಪಾದಕ ದಾಳಿಯ ನಂತರ, ಕಳೆದ ವರ್ಷ ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಭಯೋತ್ಪಾದನಾ-ವಿರೋಧಿ ಕಾರ್ಯಾಚರಣೆಯ ಸಂದರ್ಭದಲ್ಲಿ ಮೇಜರ್ ಧೌಂಡಿಯಾಲ್ ಅವರು ವೀರ ಮರಣವನ್ನಪ್ಪಿದರು. 35 ವರ್ಷದ ಮೇಜರ್ ಅವರು 55 ರಾಷ್ಟ್ರೀಯ ರೈಫಲ್ಸ್ ಪಡೆಯಲ್ಲಿ ನಿಯೋಜನೆಗೊಂಡಿದ್ದರು.
ನೋಯ್ಡಾ ಮೂಲದ ನಿಖಿತಾ ಅವರು ಎಂಎನ್ಸಿಯಲ್ಲಿ ಕೆಲಸ ಮಾಡುತ್ತಿದ್ದಾರೆ, ಮೇಜರ್ ಧೌಂಡಿಯಾಲ್ ಅವರ ಹುತಾತ್ಮತೆಯ ಆರು ತಿಂಗಳ ನಂತರ ಭಾರತೀಯ ಸೇನೆಗೆ ಸೇರಿ ಪತಿಯ ಸ್ಥಾನವನ್ನು ತುಂಬುವ ನಿರ್ಧಾರವನ್ನು ಅವರು ಮಾಡಿದ್ದಾರೆ.
ನಿಖಿತಾ ಧೌಂಡಿಯಾಲ್ ಅವರ ಪ್ರಕಾರ, ಪತಿಯಿಂದ ಪ್ರೇರಣೆಯನ್ನು ಪಡೆದು ಅವರು ಸೇನೆಯನ್ನು ಸೇರುತ್ತಿದ್ದಾರೆ.
“ನಾನು ನಿರ್ಧಾರ ತೆಗೆದುಕೊಳ್ಳಲು ಸಮಯ ತೆಗೆದುಕೊಂಡೆ. ನಡೆದ ಘಟನೆಯನ್ನು ನಾನು ಮೊದಲು ಒಪ್ಪಿಕೊಳ್ಳಬೇಕಾಗಿತ್ತು. ವಿಭು ಬಹಳ ಪ್ರಗತಿಪರರಾಗಿದ್ದರು. ನಾನು ಅವರಿಗಿಂತಲೂ ಉತ್ತಮವಾದುದನ್ನು ಮಾಡಬೇಕೆಂಬುದು ಅವರ ಬಯಕೆ ಆಗಿತ್ತು. ಹಾಗಾಗಿ ಭಾರತೀಯ ಸೇನೆಗೆ ಸೇರುವ ನನ್ನ ನಿರ್ಧಾರದ ಬಗ್ಗೆ ನನಗೆ ಆತಂಕ ಅಥವಾ ಅನುಮಾನ ಬಂದಾಗಲೆಲ್ಲಾ ನಾನು ಕಣ್ಣು ಮುಚ್ಚಿ ವಿಭುವನ್ನು ನೆನೆಪಿಸಿಕೊಳ್ಳುತ್ತಿದೆ, ಸೇನೆಗೆ ಸೇರುವ ನನ್ನ ನಿರ್ಧಾರದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು ”ಎಂದು ನಿಖಿತಾ ಧೌಂಡಿಯಾಲ್ ಹೇಳಿದ್ದಾರೆ.
ಹುತಾತ್ಮರಾದ ಸೈನಿಕರ ಸಂಗಾತಿಗಳಿಗೆ ಭಾರತೀಯ ಸೇನೆಯು ಸೇನೆಗೆ ಸೇರಲು ವಯಸ್ಸಿನ ವಿನಾಯಿತಿಯನ್ನು ನೀಡಿದ್ದರೂ ಕೂಡ ಆಯ್ಕೆ ಪ್ರಕ್ರಿಯೆಯು ಕಠಿಣವಾಗಿಯೇ ಇರುತ್ತದೆ. ಲಿಖಿತ ಪರೀಕ್ಷೆ ಮತ್ತು ಸಂದರ್ಶನವನ್ನು ಪಾಸು ಮಾಡಿರುವ ನಿಖಿತಾ ಇನ್ನಷ್ಟು ಪರಿಶ್ರಮಪಡಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.