ಶ್ರೀನಗರ: 30 ವರ್ಷಗಳ ಹಿಂದೆ ಸಾಮೂಹಿಕವಾಗಿ ವಲಸೆ ಹೋಗಿದ್ದ ಕಾಶ್ಮೀರಿ ಪಂಡಿತ ಸಮುದಾಯದ ಪುನರ್ವಸತಿಗಾಗಿ ನಯಾ ಕಾಶ್ಮೀರ ಕಣಿವೆಯ ಎಲ್ಲಾ 10 ಜಿಲ್ಲೆಗಳಲ್ಲಿ ಹತ್ತು ವಿಶೇಷ ಟೌನ್ಶಿಪ್ಗಳನ್ನು ರಚಿಸಲಾಗುತ್ತಿದೆ.
ವರದಿಗಳ ಪ್ರಕಾರ, ಯೋಜನೆಗೆ ಅಂತಿಮ ಸ್ಪರ್ಶ ಸಿಕ್ಕ ಕೂಡಲೇ ನಯಾ ಕಾಶ್ಮೀರವು ಇದರ ನೀಲನಕ್ಷೆಯನ್ನು ಪಡೆಯಲಿದೆ. ಎಲ್ಲಾ 10 ಜಿಲ್ಲೆಗಳಲ್ಲಿ ಭಯೋತ್ಪಾದಕರು ನಾಶಪಡಿಸಿದ ಮತ್ತು ಅಪವಿತ್ರಗೊಳಿಸಿದ ದೇವಾಲಯಗಳ ನವೀಕರಣ ಮತ್ತು ಪುನರ್ನಿರ್ಮಾಣವನ್ನು ನೀಲನಕ್ಷೆ ಒಳಗೊಂಡಿರುತ್ತದೆ.
ಕೇಂದ್ರ ಗೃಹ ಸಚಿವಾಲಯವು ಕಾಶ್ಮೀರಿ ಪಂಡಿತರಿಗೆ ಅನೇಕ ಪುನರ್ವಸತಿ ಯೋಜನೆಗಳನ್ನು ಒಳಗೊಂಡಿರುವ ಯೋಜನೆಗಳನ್ನು ಕಾರ್ಯಗತಗೊಳಿಸಲು ಪ್ರಾರಂಭಿಸಿದೆ.
ಕಾಶ್ಮೀರಿ ಪಂಡಿತರು 90ರ ದಶಕದ ಆರಂಭದಲ್ಲಿ ಭಯೋತ್ಪಾದಕರ ಅಟ್ಟಹಾಸಕ್ಕೆ ನಲುಗಿ ಕಾಶ್ಮೀರ ಕಣಿವೆಯಿಂದ ಜಮ್ಮು ಮತ್ತು ಇತರ ರಾಜ್ಯಗಳಿಗೆ ಪಲಾಯನ ಮಾಡಬೇಕಾಯಿತು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಫೆಬ್ರವರಿ 18 ರಂದು ಕಾಶ್ಮೀರಿ ಪಂಡಿತರ ಏಳು ಸದಸ್ಯರ ನಿಯೋಗವನ್ನು ಭೇಟಿಯಾಗಿದ್ದಾರೆ. ಈ ನಿಯೋಗದಲ್ಲಿ ಜಾಗತಿಕ ಕಾಶ್ಮೀರಿ ಪಂಡಿತ್ ವಲಸೆಗಾರರ (ಜಿಕೆಪಿಡಿ) ಅಂತರರಾಷ್ಟ್ರೀಯ ಸಂಯೋಜಕ ಸುರಿಂದರ್ ಕೌಲ್ ಸೇರಿದಂತೆ ಅನೇಕ ಕಾಶ್ಮೀರಿ ಪಂಡಿತ ಮುಖಂಡರು ಉಪಸ್ಥಿತರಿದ್ದರು.
ಸಭೆಯಲ್ಲಿ, ಸಾಕಷ್ಟು ಭದ್ರತೆಯೊಂದಿಗೆ ಕಣಿವೆಯಲ್ಲಿ ಕಾಶ್ಮೀರಿ ಪಂಡಿತರಿಗೆ ಹಂತ ಹಂತವಾಗಿ ಪುನರ್ವಸತಿ ಕಲ್ಪಿಸುವುದಾಗಿ ಮತ್ತು ಈ ಸಮುದಾಯದ ಪುನರ್ವಸತಿ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂಬುದು ಶಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.