ಲಕ್ನೋ: ಇಂದು ಲಕ್ನೋದಲ್ಲಿ ನಡೆದ ಪರಿವರ್ತನಾ ಕುಂಭ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಬಲವಂತ ಮತ್ತು ಆಮಿಷದ ಮತಾಂತರಗಳ ಬಗ್ಗೆ ಟೀಕೆಯನ್ನು ವ್ಯಕ್ತಪಡಿಸಿದರು.
”ಭಾರತದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಧರ್ಮವನ್ನು ಅನುಸರಿಸುವ ಸ್ವಾತಂತ್ರ್ಯವಿದೆ, ಆದರೆ ಯಾರಾದರೂ ಭಯ ಅಥವಾ ಆಮಿಷಗಳ ಮೂಲಕ ಮತಾಂತರಪಡಿಸಲು ಪ್ರಯತ್ನಿಸಿದರೆ, ಆ ವ್ಯಕ್ತಿಯು ದೊಡ್ಡ ಪಾಪವನ್ನು ಮಾಡುತ್ತಿದ್ದಾನೆ ಎಂದೇ ಅರ್ಥ” ಎಂದು ಮತಾಂತರ ವಿರುದ್ಧ ರಾಜನಾಥ್ ಗುಡುಗಿದ್ದಾರೆ.
“ಯಾವುದೇ ಧರ್ಮವನ್ನು ಅನುಸರಿಸಲು ಎಲ್ಲರಿಗೂ ಸಂಪೂರ್ಣ ಸ್ವಾತಂತ್ರ್ಯವಿದೆ ಎಂದು ನಾವು ನಂಬುತ್ತೇವೆ, ಆದರೆ ಯಾರಾದರೂ ಭಯ ಅಥವಾ ಹಣದ ಮೂಲಕ ಮತಾಂತರದ ಕಾರ್ಯವನ್ನು ಸುಗಮಗೊಳಿಸಲು ಪ್ರಯತ್ನಿಸಿದರೆ, ಆ ವ್ಯಕ್ತಿಯು ಅತಿದೊಡ್ಡ ಪಾಪವನ್ನು ಮಾಡುತ್ತಿದ್ದಾನೆ” ಎಂದು ಅವರು ಪರೋಕ್ಷವಾಗಿ ಮತಾಂತರವನ್ನು ಮಾಡುತ್ತಿರುವ ಕ್ರೈಸ್ತ ಮಿಶನರಿಗಳು ಮತ್ತು ಲವ್ ಜಿಹಾದ್ ಮಾಡುವಂತ ಸಂಘಟನೆಗಳ ವಿರುದ್ಧ ಹರಿಹಾಯ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.