ನವದೆಹಲಿ: ದಿ ಎಕನಾಮಿಕ್ ಟೈಮ್ಸ್ ಮತ್ತು ಯಸ್ ಬ್ಯಾಂಕ್ ಪ್ರಸ್ತುತಪಡಿಸುವ ಜಾಗತಿಕ ವ್ಯವಹಾರ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಎರಡು ದಿನಗಳ ಕಾರ್ಯಕ್ರಮದ ಕೇಂದ್ರಬಿಂದುವಾಗಿರುವ ಪ್ರಧಾನಮಂತ್ರಿಯವರು ಮಾರ್ಚ್ 6 ರಂದು ಮುಖ್ಯ ಭಾಷಣವನ್ನು ಮಾಡಲಿದ್ದಾರೆ. ಈ ವೇಳೆ ಆರ್ಥಿಕತೆ, ಕಾರ್ಪೋರೇಟ್ ತೆರಿಗೆ ಕಡಿತ, ವೈಯಕ್ತಿಕ ಆದಾಯ ತೆರಿಗೆ, ಟೆಲಿಕಾಂ ಸೆಕ್ಟರ್ ಮುಂತಾದ ವಿಷಯಗಳ ಬಗ್ಗೆ ಅವರು ಮಾತನಾಡುವ ನಿರೀಕ್ಷೆ ಇದೆ.
ಪ್ರತಿ ವರ್ಷದಂತೆ, ಈ ಶೃಂಗಸಭೆಯು ಇತರ ಉನ್ನತ ಭಾಷಣಕಾರರನ್ನು ಒಳಗೊಂಡಿರುತ್ತದೆ, ಉನ್ನತ ಸರ್ಕಾರಿ ಮಂತ್ರಿಗಳಿಂದ ಹಿಡಿದು ಭಾರತೀಯ ಮತ್ತು ಜಾಗತಿಕ ವ್ಯಾಪಾರ ಮುಖಂಡರು, ಅತ್ಯಾಧುನಿಕ ಸಂಶೋಧನೆ ಮಾಡುತ್ತಿರುವ ಶಿಕ್ಷಣ ತಜ್ಞರು ಇದರಲ್ಲಿ ಭಾಗಿಯಾಗಲಿದ್ದಾರೆ.
ನವದೆಹಲಿಯಲ್ಲಿ ಮಾರ್ಚ್ 6ರಿಂದ 7ರವರೆಗೆ ಈ ಶೃಂಗಸಭೆ ನಡೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.