ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ರಾಜ್ಪಥ್ನಲ್ಲಿ ಆಯೋಜನೆಗೊಂಡಿರುವ “ಹುನಾರ್ ಹಾಥ್” ಎಂಬ ಕರಕುಶಲ ಉತ್ಸವಕ್ಕೆ ಬುಧವಾರ ಅಚ್ಚರಿಯ ಭೇಟಿ ನೀಡಿದ್ದು, ಅಲ್ಲಿ ಅವರು ಕುಶಲಕರ್ಮಿಗಳೊಂದಿಗೆ ಸಂವಹನ ನಡೆಸಿದರು. ಮಾತ್ರವಲ್ಲದೇ, “ಲಿಟ್ಟಿ-ಚೋಖಾ” ಮತ್ತು “ಕುಲ್ಹಾದ್” ಚಹಾವನ್ನು ಸವಿದು ಆನಂದಿಸಿದರು.
ಕೇಂದ್ರ ಸಚಿವ ಸಂಪುಟದ ಸಭೆಯ ಅಧ್ಯಕ್ಷತೆ ವಹಿಸಿದ ಬೆನ್ನಲ್ಲೇ ಮೋದಿ ಅವರು ರಾಜ್ಪಥ್ ತಲುಪಿದರು, ಅಲ್ಲಿ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು “ಹುನಾರ್ ಹಾಥ್” ಅನ್ನು ಆಯೋಜಿಸುತ್ತಿದೆ.
ಪ್ರಧಾನಮಂತ್ರಿಯು ಇಲ್ಲಿಗೆ ನೀಡಿದ ಭೇಟಿ ಸರ್ಪ್ರೈಝ್ ಆಗಿದ್ದು, ಈ ಭೇಟಿಯ ಬಗ್ಗೆ ಕೇಳಿದಾಗ ಸ್ವತಃ ಸಚಿವಾಲಯದ ಅಧಿಕಾರಿಗಳು ಆಶ್ಚರ್ಯಚಕಿತರಾದರು ಎಂದು ಸರ್ಕಾರದ ಮೂಲಗಳು ತಿಳಿಸಿವೆ.
50 ನಿಮಿಷಗಳ ಕಾಲ ಅಲ್ಲಿದ್ದ ಮೋದಿ ಅವರು “ಲಿಟ್ಟಿ-ಚೋಖಾ” ಸವಿದರು ಮತ್ತು ಅದಕ್ಕೆ 120 ರೂಪಾಯಿಯನ್ನೂ ಪಾವತಿಸಿದರು. ಈ ಖಾದ್ಯವು ಬಿಹಾರ, ಪೂರ್ವ ಉತ್ತರ ಪ್ರದೇಶ ಮತ್ತು ಜಾರ್ಖಂಡ್ನಲ್ಲಿ ಜನಪ್ರಿಯವಾಗಿದೆ. ನಂತರ ಅವರು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರೊಂದಿಗೆ “ಕುಲ್ಹಾದ್” ಚಹಾ ಸವಿದು ಅದಕ್ಕೆ 40 ರೂಪಾಯಿಗಳನ್ನು ಪಾವತಿಸಿದರು.
ಸಾಂಪ್ರದಾಯಿಕ ಕಲೆಗಳನ್ನು ಪುನರುಜ್ಜೀವನಗೊಳಿಸುವ ಸಲುವಾಗಿ “ಹುನಾರ್ ಹಾಥ್” ಕಾರ್ಯಕ್ರಮವನ್ನು ಆಯೋಜನೆಗೊಳಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ಭೇಟಿ ನೀಡಿದ್ದಾರೆ ಎಂದು ತಿಳಿದ ಬಳಿಕ ಅಲ್ಲಿ ಜನಸಂದಣಿ ಹೆಚ್ಚಾಗಿತ್ತು.
ಹುನಾರ್ ಹಾಥ್ “ಕೌಶಲ್ ಕೋ ಕಾಮ್” ವಿಷಯವನ್ನು ಆಧರಿಸಿ ನಡೆಯುತ್ತಿದೆ ಮತ್ತು ಫೆಬ್ರವರಿ 23 ರವರೆಗೆ ನಡೆಯಲಿದೆ.
ದೇಶಾದ್ಯಂತದ ಶೇಕಡಾ 50 ಕ್ಕೂ ಹೆಚ್ಚು ಮಹಿಳೆಯರು ಸೇರಿದಂತೆ ದಿಗ್ಗಜ ಕುಶಲಕರ್ಮಿಗಳು, ಕಲಾವಿದರು ಮತ್ತು ಪಾಕಶಾಲೆಯ ತಜ್ಞರು ಇದರಲ್ಲಿ ಭಾಗವಹಿಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.