ನವದೆಹಲಿ: ಭಾರತೀಯ ರೈಲ್ವೆ ಪ್ರಮುಖ ಯಶಸ್ಸನ್ನು ದಾಖಲಿಸಿದೆ. ಕಳೆದ ವರ್ಷ ಫೆಬ್ರವರಿ 15ರಂದು ರಾಜಧಾನಿ ನವದೆಹಲಿ ಮತ್ತು ಉತ್ತರ ಪ್ರದೇಶದ ವಾರಣಾಸಿ ನಗರಗಳ ನಡುವೆ ಪ್ರಾರಂಭವಾದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ಶೇ.100ರಷ್ಟು ಸಮಯ ನಿಖರತೆಯೊಂದಿಗೆ ಒಂದು ವರ್ಷಗಳನ್ನು ಪೂರೈಸಿದೆ. ಇದುವರೆಗೆ ಇದು ರೂ.92.29 ಕೋಟಿ ಆದಾಯ ಗಳಿಸಿದೆ.
ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದ ಈ ರೈಲು ತನ್ನ ವಾಣಿಜ್ಯ ಕಾರ್ಯಾಚರಣೆಯನ್ನು ಫೆಬ್ರವರಿ 17 ರಿಂದ ಪ್ರಾರಂಭಿಸಿತ್ತು. ಅಲ್ಲಿಂದ ಬಳಿಕ ಎರಡು ನಗರಗಳ ನಡುವೆ 3.8 ಲಕ್ಷ ಕಿಲೋಮೀಟರ್ ದೂರಗಳನ್ನು ಕ್ರಮಿಸಿದೆ.
ಭಾರತದಲ್ಲಿ ಸಂಪೂರ್ಣ ದೇಶೀಯವಾಗಿ ನಿರ್ಮಿಸಲಾದ ಈ ಹವಾನಿಯಂತ್ರಿತ ರೈಲು, ಕೇವಲ ಎಂಟು ಗಂಟೆಗಳಲ್ಲಿ ಉಭಯ ನಗರಗಳನ್ನು ಸಂಪರ್ಕಿಸುತ್ತದೆ. ಈ ರೈಲನ್ನು ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ಕೇವಲ 18 ತಿಂಗಳ ದಾಖಲೆ ಸಮಯದಲ್ಲಿ ನಿರ್ಮಿಸಿದೆ.
ಈ ರೈಲು, ರೈಲು ನಿಯಂತ್ರಣ ಮತ್ತು ರಿಮೋಟ್ ಮಾನಿಟರಿಂಗ್ಗಾಗಿ ಸ್ವಯಂಚಾಲಿತ ಬಾಗಿಲುಗಳೊಂದಿಗೆ ಸ್ಲೈಡಿಂಗ್ ಫೂಟ್ ಸ್ಟೆಪ್ ಮತ್ತು ಆನ್ಬೋರ್ಡ್ ಕಂಪ್ಯೂಟರ್ಗಳನ್ನು ಒಳಗೊಂಡಂತೆ ವ್ಯಾಪಕ ಶ್ರೇಣಿಯ ವೈಶಿಷ್ಟ್ಯಗಳನ್ನು ಹೊಂದಿದೆ.
ವಂದೇ ಭಾರತ್ ಮಾದರಿಯ ಮತ್ತೊಂದು ರೈಲು ನವದೆಹಲಿ ಮತ್ತು ಶ್ರೀ ಮಾತಾ ವೈಷ್ಣೋದೇವಿ ಕಾತ್ರ ನಿಲ್ದಾಣಗಳ ನಡುವೆ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.