ಮುಂಬಯಿ: ಇತ್ತೀಚೆಗೆ ಬಿಡುಗಡೆಗೊಂಡ ತಾನಾಜಿ ‘ದಿ ಅನ್ಸಂಗ್ ವಾರಿಯರ್” ಸಿನಿಮಾವು ಭಾರತದಲ್ಲಿ ವಿಭಿನ್ನ ರೀತಿಯ ಟ್ರೆಂಡ್ ನಿರ್ಮಿಸಿದ್ದು, ಯುವಜನತೆಯೂ ಈ ಚಿತ್ರವನ್ನು ತುದಿಗಾಲಿನಲ್ಲಿ ನಿಂತು ನೋಡುವಂತೆ ಮಾಡಿದೆ. ಸದ್ಯ ಈ ಸಿನಿಮಾ ಹಣಗಳಿಕೆಯಲ್ಲೂ ಐತಿಹಾಸಿಕ ದಾಖಲೆಯನ್ನು ನಿರ್ಮಿಸಿದೆ.
ಓಂ ರಾವತ್ ನಿರ್ದೇಶನದ ಈ ಚಿತ್ರವನ್ನು ಬಿಡುಗಡೆಗೆ ಮೊದಲೇ ಜನರೇ ಪ್ರಚಾರ ಮಾಡಿದರು. ಚಿತ್ರನಟಿ ದೀಪಿಕಾ ಪಡುಕೋನೆ ಜೆಎನ್ಯು ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಯ ಪರವಾಗಿ ನಿಂತ ಪರಿಣಾಮವಾಗಿ ಚಪಕ್ ಸಿನೆಮಾವನ್ನು ನಿಷೇಧಿಸುವಂತೆ ಮತ್ತು ತಾನಾಜಿ ಸಿನೆಮಾವನ್ನು ಬೆಂಬಲಿಸುವಂತೆ ದೇಶಮಟ್ಟದಲ್ಲೇ ಅಭಿಯಾನ ನಡೆದಿತ್ತು. ಇದು ತಾನಾಜಿ ಚಿತ್ರಕ್ಕೆ ಅಭೂತಪೂರ್ವ ಪ್ರಚಾರ ದೊರಕುವಂತೆ ಮಾಡಿತು.
ಸದ್ಯ ಈ ಚಿತ್ರ ಆರನೇ ವಾರದಲ್ಲೂ ಅತ್ಯಧಿಕ ಗಳಿಕೆ ಕಂಡ ಐದನೇ ಚಿತ್ರವಾಗಿ ಸಾರ್ವಕಾಲಿಕ ದಾಖಲೆಯನ್ನು ಬರೆದಿದೆ ಎಂದು ಇತ್ತೀಚಿನ ಬಾಕ್ಸ್ ಆಫೀಸ್ ಇಂಡಿಯಾ ವರದಿ ತಿಳಿಸಿದೆ.
ಅತ್ಯಧಿಕ ಗಳಿಕೆ ಕಂಡ ಇತರ ನಾಲ್ಕು ಚಿತ್ರಗಳೆಂದರೆ ವಿಕ್ಕಿ ಕೌಶಲ್ ಅವರ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’, ಸನ್ನಿ ಡಿಯೋಲ್ ಅವರ ‘ಗದರ್: ಏಕ್ ಪ್ರೇಮ್ ಕಥಾ’, ಆಯುಷ್ಮಾನ್ ಖುರಾನಾ ಅವರ ’ಬಾದೈ ಹೋ’ ಮತ್ತು ಪ್ರಭಾಸ್ ’ಬಾಹುಬಲಿ 2’ ಅನ್ನು ಒಳಗೊಂಡಿದೆ.
ಯಶಸ್ಸಿಗೆ ಕಾರಣವಾದ ಅಂಶಗಳು ಯಾವುವು..?
ತಾನಾಜಿ ಚಿತ್ರಕ್ಕೆ ಪ್ರಚಾರದ ಕೊರತೆ ಇರಲಿಲ್ಲ ಎನ್ನುವುದು ಒಂದು ಕಾರಣವಾದರೂ ಆದರೆ 5ನೇ ವಾರವೂ ತನ್ನ ಗಳಿಕೆಯಲ್ಲಿ ಏರಿಕೆ ಕಾಣಲು ಹಲವು ಕಾರಣಗಳು ಇವೆ.
1: ಮೊಘಲರ ಆಕ್ರಮಣವನ್ನು ಭಾರತದಲ್ಲಿ ಆಕ್ರಮಣಕಾರಿಯಾಗಿ ಎದುರಿಸಿದ ಶಿವಾಜಿಯ ಆಸ್ಥಾನದಲ್ಲಿದ್ದ ತಾನಾಜಿಯ ಶೌರ್ಯದ ಬಗ್ಗೆ ತಿಳಿದುಕೊಳ್ಳಲು ಜನರಿಗಿದ್ದ ಆಸಕ್ತಿ.
2. ಭಾರತದಲ್ಲಿ ಶಿವಾಜಿ ಹಿಂದುತ್ವದ ಬ್ರಾಂಡ್ ಆಗಿರುವುದರಿಂದ ಸಹಜವಾಗಿಯೇ ಹೆಚ್ಚು ಜನರನ್ನು ಆಕರ್ಷಿಸಿತ್ತು.
3. ದೇಶದ ಇತಿಹಾಸದ ಪುಟಗಳಲ್ಲಿ ಶಿವಾಜಿ ಮತ್ತು ಆತನ ಸಾಮ್ರಾಜ್ಯದವರ ಪಾತ್ರ ಪ್ರಮುಖವಾಗಿದ್ದರೂ ಪಠ್ಯ ಪುಸ್ತಗಳಲ್ಲಿ ಹೆಚ್ಚಿನ ಉಲ್ಲೇಖ ಇರದಿರುವುದರಿಂದ ತಾನಾಜಿ ಚಿತ್ರವನ್ನು ಪಠ್ಯದಂತೆ ನೋಡಲು ಮತ್ತು ಹೆಚ್ಚಿನ ಮಾಹಿತಿ ಪಡೆಯಲು ಸಹಾಯವಾಯಿತು.
4. ದೇಶದಲ್ಲಿ ಎಬ್ಬಿರುವ ಹಿಂದುತ್ವದ ಟ್ರೆಂಡ್ ಚಿತ್ರಕ್ಕೆ ಸಹಕಾರಿಯಾಯಿತು.
5. ಬಹುಕೋಟಿ ವೆಚ್ಚದಲ್ಲಿ ಅದ್ದೂರಿಯಾಗಿ ಮೂಡಿ ಬಂದಿತ್ತು ಸಿನೆಮಾ.
ಅಜಯ್ ಅವರ ’ತನ್ಹಾಜಿ: ದಿ ಅನ್ಸಂಗ್ ವಾರಿಯರ್’ ಹಣಗಳಿಸಿದ ಸಂಪೂರ್ಣ ಪಟ್ಟಿ
ಒಂದನೇ ವಾರ – 115.28 ಕೋಟಿ
ಎರಡನೇ ವಾರ – 77.87 ಕೋಟಿ
ಮೂರನೇ ವಾರ – 38.48 ಕೋಟಿ
ನಾಲ್ಕನೇ ವಾರ – 19.31 ಕೋಟಿ
ಐದು ವಾರ – 8.90 ಕೋಟಿ
ಆರನೇ ವಾರ- 3.40 ಕೋಟಿ (4 ದಿನಗಳು)
ಬಾಲಿವುಡ್ ಬದಲಾಗಿದೆ
ಮೊದಲೆಲ್ಲಾ ಬಾಲಿವುಡ್ ಸಿನೆಮಾಗಳೆಂದರೆ ಅಲ್ಲಿ ಪ್ರೀತಿ ಪ್ರೇಮವೇ ಪ್ರಮುಖ ಪಾತ್ರ ಇರುತ್ತಿತ್ತು. ಭರ್ಜರಿ ಸೆಟ್ ಹಾಕಿಸಿ, ಒಂದೆರಡು ಐಟಂ ಸಾಂಗ್ ಹಾಕಿಸಿ ಜನರನ್ನು ದಾರಿ ತಪ್ಪಿಸುತ್ತಾ ವೆಸ್ಟರ್ನ್ ಕಲ್ಚರ್ ಗಳನ್ನೇ ಅತಿಯಾಗಿ ಬಿಂಬಿಸಿಕೊಂಡು ಬರುತ್ತಿದ್ದಾ ಬಾಲಿವುಡ್ ಸಿನೆಮಾಗಳು ಇತ್ತೀಚೆಗೆ ತನ್ನ ಸಾಂಪ್ರದಾಯಿಕ ಪಥವನ್ನು ಬದಲಾಯಿಸುತ್ತಿದೆ. 6ನೇ ವಾರದಲ್ಲೂ ಅತೀ ಹೆಚ್ಚು ಹಣ ಗಳಿಸಿದ ಪ್ರಮುಖ ಮೂರು ಚಿತ್ರಗಳಾದ ತಾನಾಜಿ, ಬಾಹುಬಲಿ 2, ಉರಿ ದ ಸರ್ಜಿಕಲ್ ಸ್ಟ್ರೈಕ್ ಇವು ರಾಷ್ಟ್ರೀಯತೆ ಮತ್ತು ಭಾರತೀಯತೆಯನ್ನೇ ಪ್ರತಿಬಿಂಬಿಸಿದ ಸಿನೆಮಾವಾಗಿದೆ. ಸದ್ಯ ಸಾಲು ಸಾಲು ಬರುತ್ತಿರುವ ಸಿನೆಮಾಗಳು ಹೆಚ್ಚಾಗಿ ವೀರರ ಸಾಹಸ ಕಥೆಗಳು ಮತ್ತು ಸೈನ್ಯದ ಪರಾಕ್ರಮದ ಕಥೆಗಳನ್ನೇ ಮುಂದಿಟ್ಟುಕೊಂಡು ಸಿನೆಮಾಗಳು ನಿರ್ಮಾಣವಾಗುತ್ತಿರುವುದರಿಂದ ದೇಶದಲ್ಲಿ ಧನಾತ್ಮಕ ವಿಚಾರಗಳು ಇನ್ನಷ್ಟು ಬಲಗೊಳ್ಳಲಿದೆ ಎಂದರೆ ತಪ್ಪಾಗಲಾರದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.